ಶಾಸಕರಿಗೇ ಬಿಗ್ ಶಾಕ್ ನೀಡಿದ ಭೂಕಳ್ಳರು ➤  ಶಾಸಕರ ನಿವೇಶನವನ್ನೇ ಕಬಳಿಸಿದ ಖದೀಮರು

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.21. ರಾಜಧಾನಿ ಬೆಂಗಳೂರಿನಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಸೇರಿದಂತೆ ಮೂವರು ಶಾಸಕರ ನಿವೇಶನಗಳನ್ನು ಕಬಳಿಸಲಾಗಿದೆ. ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ತಮಗೆ ಮಂಜೂರಾಗಿದ್ದ ಬಿಡಿಎ ನಿವೇಶನ ಕಬಳಿಸಿದ್ದಾಗಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದು, ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ.

ಗೂಳಿಹಟ್ಟಿ ಶೇಖರ್ ನೀಡಿದ ದೂರಿನ ಮೇರೆಗೆ ಹಲಸೂರು ನಿವಾಸಿ ರಾಮಮೂರ್ತಿ, ಅನುರಾಧ, ದೀಪಿಕಾ, ನಿವೇದಿತಾ, ಸಾಚ್ಯಮಾಟೆ ಡೆವಲಪರ್ಸ್, ಜೆಪಿ ನಗರದ ಜೆಮ್ಮಿ ರಾಹೂರ್, ಮಲ್ಲೇಶ್ವರಂ ನ ಶ್ರೀಕೃಷ್ಣ ಕನ್ಸ್ಟ್ರಕ್ಷನ್ ಇಂಡಿಯಾ ಕಂಪನಿ, ಮಂಜೇಗೌಡ, ಆನಂದಮೂರ್ತಿ, ಎಂ.ಡಿ. ಕೈಲಾಶ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

2008 ರಲ್ಲಿ ಗೂಳಿಹಟ್ಟಿ ಶೇಖರ್ ಅವರಿಗೆ ಲೊಟ್ಟೆಗೊಲ್ಲಹಳ್ಳಿಯ ರಾಜಮಹಲ್ ವಿಲಾಸ ಎರಡನೇ ಹಂತದಲ್ಲಿ 50X80 ಅಳತೆಯ ಜಿ ಕೆಟಗರಿ ನಿವೇಶನ ಮಂಜೂರು ಮಾಡಲಾಗಿದೆ. ಗೂಳಿಹಟ್ಟಿ ಶೇಖರ್, ಅಭಯ ಪಾಟೀಲ್ ಮತ್ತು ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ.

 

 

error: Content is protected !!

Join the Group

Join WhatsApp Group