➤ಶಿವಮೊಗ್ಗ ಚಿನ್ನಾಭರಣ ರಿಪೇರಿ ಮಾಡಿಸಲು ಬಂದ ವ್ಯಕ್ತಿಯ ಬ್ಯಾಗ್ ಕಳ್ಳತನ..!

(ನ್ಯೂಸ್ ಕಡಬ) newskadaba.com, ಶಿವಮೊಗ್ಗ, ಜ. 14.  ಚಿನ್ನಾಭರಣದ ಪಾಲಿಶ್ ಮತ್ತು ರಿಪೇರಿ ಮಾಡಿಸಲು ಬಂದಿದ್ದ ವ್ಯಕ್ಯಿಯ ಬ್ಯಾಗ್ ​ನ್ನು ಎಗರಿಸಿ ಒಟ್ಟು 2 ಲಕ್ಷ 80 ಸಾವಿರ ರೂ. ಹಣ ಮತ್ತು ಬಂಗಾರದ ಆಭರಣವನ್ನ ಕದ್ದುಕೊಂಡು‌ ಹೋಗಿರುವ ಘಟನೆ ಶಿವಮೊಗ್ಗದಲ್ಲಿ  ನಡೆದಿದೆ. ಈ ಕುರಿತು  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ಶುರುವಾಗಿದೆ.

ಭದ್ರಾವತಿಯ ಆನ್ವೇರಿಯಿಂದ ಶಿವಮೊಗ್ಗಕ್ಕೆ ಹೊರಟಿದ್ದ ನಾಗರಾಜ್ ರಾಯ್ಕರ್ ಚಿನ್ನಾಭರಣಗಳು ಮತ್ತು ಇನ್ನೊಂದು ಪರ್ಸ್ ನಲ್ಲಿ 2. 80 ಲಕ್ಷ ರೂ ಹಣ ಇಟ್ಟುಕೊಂಡು ಅವೆರಡನ್ನೂ ಒಂದು ಬ್ಯಾಗ್​ನಲ್ಲಿ ಇಟ್ಟುಕೊಂಡು ಆನ್ವೇರಿಯಿಂದ ಕೈಮರದ ಬಳಿ ಬಸ್​ನಲ್ಲಿ ಬಂದಿದ್ದಾರೆ. ನಂತರ ಕೈಮರದಿಂದ ಕೆಎಸ್ ಆರ್ ಟಿಸಿ ಬಸ್​ನಲ್ಲಿ ಗುರುಪುರಕ್ಕೆ ಬಂದು ಗುರುಪುರದಲ್ಲಿ ಬಸ್ ಇಳಿದು ಬ್ಯಾಗ್ ನೋಡಿದಾಗ ಬ್ಯಾಗ್​ನಲ್ಲಿದ್ದ ಎರಡು ಪರ್ಸ್​ಗಳು ಕಾಣೆಯಾಗಿದ್ದವು. ತಕ್ಷಣವೇ ರಾಯ್ಕರ್ ಆನ್ವೇರಿಗೆ ಹೋಗಿ ಪರಿಶೀಲಿಸಿದಾಗ ಪರ್ಸ್​ಗಳು ಕಾಣೆಯಾಗಿವೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣದ‌ ಕಳವು ಪ್ರಕರಣವನ್ನ ದಾಖಲಾಗಿದೆ.

error: Content is protected !!
Scroll to Top