ಮರ್ಧಾಳ: ಬಾರ್ ನ ಸಪ್ಲಾಯರ್ ಗೆ ಸೋಡಾ ಬಾಟ್ಲಿಯಿಂದ ಹಲ್ಲೆ ► ಗಾಯಾಳು‌ ಸಪ್ಲಾಯರ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಡಿ.15. ಊಟ ಮತ್ತು ಮದ್ಯಪಾನ ಸೇವಿಸುತ್ತಿದ್ದಾಗ ಬಿಲ್ ಕೇಳಿದ್ದ ಕಾರಣಕ್ಕಾಗಿ ಸಪ್ಲಾಯರ್ ಓರ್ವರಿಗೆ ತಂಡವೊಂದು ಸೋಡಾ ಬಾಟಲ್ ನಿಂದ ಹಲ್ಲೆ ನಡೆಸಿದ ಘಟನೆ ಮರ್ಧಾಳದ ಸುರಭಿ ಬಾರ್ & ರೆಸ್ಟೋರೆಂಟ್ ನಲ್ಲಿ ಗುರುವಾರ ರಾತ್ರಿ ನಡೆದಿದೆ.

ಗಾಯಾಳುವನ್ನು ಸುರಭಿ ರೆಸ್ಟೋರೆಂಟಿನ ಸಪ್ಲಾಯರ್ ಬೆಳ್ತಂಗಡಿ ತಾಲೂಕಿನ ಕುಕ್ಕಲ ಗ್ರಾಮದ ಅಟ್ಟತ್ತೋಡಿ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರ ಯೋಗಿಶ್ ಶೆಟ್ಟಿ (40) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಮೂರು ಜನರ ತಂಡವೊಂದು ಬಾರ್ ಗೆ ಆಗಮಿಸಿದ್ದು, ಊಟ ಮಾಡಿ ಮದ್ಯಪಾನ ಮಾಡಿದುದರ ಬಿಲ್ ಕೇಳಿದ್ದಕ್ಕೆ ಅವ್ಯಾಚ್ಯ ಶಬ್ದದಿಂದ ನಿಂದಿಸಿ ಸೋಡಾ ಬಾಟಲ್ ನಿಂದ ಹಲ್ಲೆ ನಡೆಸಿದ್ದರಿಂದ ತಲೆಗೆ ಗಾಯಗಳಾಗಿದ್ದು, ತಡೆಯಲು ಬಂದ ಅಡುಗೆ ಸಿಬ್ಬಂದಿ ಮೋಹನ ಎಂಬವರ ಹಣೆಗೂ ಗಾಯಗಳಾಗಿದ್ದು, ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  3ನೇ ಬಾರಿಗೆ ಮುಖ್ಯಮಂತ್ರಿಯಾಗುವ ಉದ್ದೇಶ ನನಗಿಲ್ಲ.!! ➤ ಎಚ್‌ ಡಿ.ಕುಮಾರಸ್ವಾಮಿ

ಈ ಬಗ್ಗೆ ಸಪ್ಲಾಯರ್ ಯೋಗೀಶ ನೀಡಿರುವ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top