(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜ.08. ಶಿವಮೊಗ್ಗದಲ್ಲಿ ಅಗ್ನಿ ಅವಘಡದಿಂದ ಮನೆಯೊಳಗೆ ಉಸಿರುಗಟ್ಟಿ ಯುವ ಉದ್ಯಮಿ ಹಾಗೂ ಖ್ಯಾತ ಉದ್ಯಮಿ ದಾನಿ ಮೃತರಾಗಿದ್ದು ಶಿವಮೊಗ್ಗ ಜನರಿಗೆ ಶಾಕ್ ನೀಡಿದೆ ಎನ್ನಲಾಗಿದೆ. ಮೃತಪಟ್ಟವರನ್ನು ಖ್ಯಾತ ಉದ್ಯಮಿ ಭೂಪಾಳಂ ಎಸ್. ಶರತ್(39) ಎಂದು ಗುರುತಿಸಲಾಗಿದೆ.

ಶಿವಮೊಗ್ಗ ಕುವೆಂಪು ರಸ್ತೆಯಲ್ಲಿ ಜಿ.ಪಂ ಕಚೇರಿ ಎದುರು ಭೂಪಾಳಂ ಕುಟುಂಬದವರ ಮನೆ ಇದೆ. ಇಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.














