ಪಂಜ : ಚರ್ಮಗಂಟು ರೋಗ ನಿಯಂತ್ರಣಕ್ಕೆ ಲಸಿಕಾ ಅಭಿಯಾನ

(ನ್ಯೂಸ್ ಕಡಬ) newskadaba.comಪಂಜ , ಡಿ.29.  ಕರ್ನಾಟಕ ರಾಜ್ಯ  ಪಶುಸಂಗೋಪನಾ ಇಲಾಖೆಯು ಪಂಜ ಹಾಲು ಉತ್ಪಾದಕರ ಸಹಕಾರ ಸಂಘ ಇದರ ಆಶ್ರಯದಲ್ಲಿ ಸಂಘದ ಕಾರ್ಯಕ್ಷೇತ್ರ ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮಗಳಲ್ಲಿ , ಚರ್ಮಗಂಟು ರೋಗ ನಿಯಂತ್ರಣ ಲಸಿಕಾ ಅಭಿಯಾನಕ್ಕೆ . ಪಂಜ  ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಚಾಲನೆ ನೀಡಲಾಯಿತು ಎಂದು ವರದಿಯಾಗಿದೆ.

ಸಂಘ ಅಧ್ಯಕ್ಷರಾಗಿ ಚನಿಯಪ್ಪ ಗೌಡ ಕುಳ್ಳಕೋಡಿ ಹಾಗೂ ನಿರ್ದೇಶಕರಾಗಿ ಚಂದ್ರಶೇಖರ ಶಾಸ್ತ್ರಿ, ಮತ್ತು ಜಾ.ಕೃ.ಗ. ಕಾರ್ಯಕರ್ತ ಕೇಶವ ಚೀಮುಳ್ಳು, ಸಂಘದ ಮುಖ್ಯ ಕಾರ್ಯನಿರ್ವಾಹಧಿಕಾರಿ ಆದರ್ಶ ಚಿದ್ಗಲ್ಲು, ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ, ಸಂಘ ಸಿಬ್ಬಂದಿಗಳು, ಮೊದಲಾದವರು ಉಪಸ್ಥಿತರಿದ್ದರು ಎನ್ನಲಾಗಿದೆ.

error: Content is protected !!
Scroll to Top