ಲಕ್ಷ ರೂ.ನಗದು ಚಿನ್ನಭರಣ ಕಳವು….!!!!      

Crime

(ನ್ಯೂಸ್ ಕಡಬ) newskadaba.com  ಉಡುಪಿ, ಡಿ.19   ಬೈಂದೂರು ತಾಲೂಕು ಕೆರ್ಗಾಲು ಗ್ರಾಮದ ಮನೆಯ ಮುಖ್ಯದ್ವಾರದ ಬಾಗಿಲಿ ಚಿಲಕ ತೆಗೆದು ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದಿರುಚವ ಕಳ್ಳರು ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳತನ ಮಾಡಿದ್ದಾರೆ.

3 ಪವನ್ ತೂಕದ ಚಿನ್ನದ ಕರಿಮಣಿ ಸರ ಹಾಗೂ 3 ಪವನ್ ತೂಕದ ಚಿನ್ನದ ಹವಳದ ಸರ ಹಾಗೂ ಗೋದ್ರೆಜ್ ನಲ್ಲಿಟ್ಟಿದ್ದ 2 ಗ್ರಾಂ ತೂಕದ ಚಿನ್ನದ ನಾಣ್ಯ ಹಾಗೂ 2 ಗ್ರಾಂ ತೂಕದ ಚಿನ್ನದ ಪೆಡೆಂಟ್ ಸೇರಿ ಅಂದಾಜು 1.47 ಲಕ್ಷ ರೂ.ಮೌಲ್ಯದ ಚಿನ್ನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

Scroll to Top