ಕಳಪೆ ರಸ್ತೆಯಿಂದ ಸಾವು-ನೋವು ಸಂಭವಿಸಿದರೆ ಪೊಲೀಸ್ ಠಾಣೆಗೆ ದೂರು ನೀಡಿ..!  ➤ ಹೈಕೋರ್ಟ್ ನಿಂದ ಆದೇಶ     

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.16   ಈ ವರ್ಷ ಹೊಂಡ-ಗುಂಡಿ ಬಿದ್ದ ರಸ್ತೆಗಳಲ್ಲಿ ಆಗಿರುವ ಗಂಡಾಂತರಗಳು  ಒಂದೆರಡಲ್ಲ. ಈ ಸಂಧರ್ಭಗಳಲ್ಲಿ ಜನಪ್ರತಿನಿಧಿಗಳು ಏನು ಮಾಡುತ್ತಾರೆ.ಮಹಾನಗರ ಪಾಲಿಕೆ ಸರಿಯಾಗಿ ಕೆಲಸ ಮಾಡಿಸುತ್ತಿಲ್ಲ. ಗುತ್ತಿಗೆದಾರರು ಕೇವಲ ಹಣ ಮಾಡಲು ನೋಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿರುತ್ತದೆ ಎಂದು ತಿಳಿದುಬಂದಿದೆ.

ಗುಂಡಿಗಳು ಮತ್ತು ರಸ್ತೆಗಳ ದುಸ್ಥಿತಿಯಿಂದಾಗಿ ಜನರು ಗಂಭೀರ ಗಾಯಗೊಂಡರೆ ಅಥವಾ ಸಾವು ಸಂಭವಿಸುವುದನ್ನು ಗಂಭೀರವಾಗಿ ಪರಿಗಣಿಸುವ ಹೈಕೋರ್ಟ್, ಈ ಕುರಿತು ಯಾವುದೇ ನಾಗರಿಕರು ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಎಫ್ಐಆರ್ ದಾಖಲಿಸಲು ಮುಂದಾದರೆ ಪೊಲೀಸ್ ಠಾಣೆ ಕಡ್ಡಾಯವಾಗಿ ದೂರು ದಾಖಲಿಸಿಕೊಳ್ಳಿ ಎಂದು ಆದೇಶ ನೀಡಿದೆ ಎಂದು ತಿಳಿದುಬಂದಿದೆ.

 

Scroll to Top