ಬಿಎಸ್ಎಫ್ ಯೋಧೆಯಾಗಿ ಪುತ್ತೂರಿನ ಚೈತ್ರಾ ನೇಮಕ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 05. ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಕಾನ್‌ಸ್ಟೇಬಲ್ ಆಗಿ ಪುತ್ತೂರಿನ ಕರ್ಕುಂಜದ ಚೈತ್ರಾರವರು ಆಯ್ಕೆಯಾಗಿದ್ದಾರೆ.

 

 

ಸ್ಟಾಫ್ ಸೆಲೆಕ್ಷನ್ ಕಮಿಷನ್-2021ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಚೈತ್ರರವರು ನೇಮಕಗೊಂಡಿದ್ದು, 2022ರ ಡಿ. 21ರಂದು ಬೆಂಗಳೂರಿನ ಬಿಎಸ್‌ಎಫ್ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ. ಬಲ್ನಾಡು ಕರ್ಕುಂಜದ ಲಿಂಗಪ್ಪ ಗೌಡ ಹಾಗೂ ಜಾನಕಿ ದಂಪತಿ ಪುತ್ರಿಯಾಗಿರುವ ಈಕೆ, ಪ್ರಾಥಮಿಕ ಶಿಕ್ಷಣವನ್ನು ರಾಗಿಕುಮೇರು ಹಿ.ಪ್ರಾ ಶಾಲೆ, ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ಪೂರೈಸಿ, ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು, ಪ್ರಸ್ತುತ ದ್ವಿತೀಯ ವರ್ಷದ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.

error: Content is protected !!
Scroll to Top