ಶೂಟಿಂಗ್‌ ಮುಗಿಸಿದ ‘ಸ್ವಾತಿ ಮುತ್ತಿನ ಮಳೆ ಹನಿಯೇ’

(ನ್ಯೂಸ್ ಕಡಬ) newskadaba.com ನ.15: ಉತ್ತರಕಾಂಡ ಸಿನಿಮಾ ಮುಹೂರ್ತದ ಬೆನ್ನಲ್ಲೇ ಮೋಹಕ ತಾರೆ ರಮ್ಯಾ, ತಮ್ಮ ನಿರ್ಮಾಣದ ಸಿನಿಮಾ ವಿಚಾರವನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದರು. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದ್ದರು. ಇದೀಗ ಚಿತ್ರದ ಸಂಪೂರ್ಣ ಚಿತ್ರೀಕರಣವೇ ಮುಗಿಸಲಾಗಿದೆ ಎಂಬ ಅಚ್ಚರಿಯ ಹೇಳಿಕೆಯನ್ನು ನೀಡಲಾಗಿದೆ.

ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಇನ್ನೂ ಶೂಟಿಂಗ್ ಶುರು ಆಗಲು ಸಮಯ ಹಿಡಿಯಲಿದೆ. ಹಾಗಂತೆ, ಹೀಗಂತೆ ಎಂದು ಅಂತೆ ಕಂತೆಗಳ ಸುದ್ದಿ ಬರುತ್ತಿರುವ ಮಧ್ಯೆದಲ್ಲಿಯೇ ಚಿತ್ರೀಕರಣವನ್ನೇ ಮುಗಿಸಲಾಗಿದೆ ಎಂಬ ಬ್ರೇಕಿಂಗ್‌ ಸುದ್ದಿಯನ್ನು ರಮ್ಯಾ ಟೀಂ ನೀಡಿದೆ. ರಮ್ಯಾ ನಿರ್ಮಾಣದ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಶೂಟಿಂಗ್‌ ಮುಕ್ತಾಯಗೊಳಿಸಿದೆ. ಆಯಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಾಜ್‌ ಬಿ. ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದಾರೆ.

error: Content is protected !!
Scroll to Top