ಕೊಯಿಲ: ಅಕ್ರಮ ಮರ ದಾಸ್ತಾನಿರಿಸಿದ್ದ ಮನೆಗೆ ಅರಣ್ಯಾಧಿಕಾರಿ ದಾಳಿ

(ನ್ಯೂಸ್ ಕಡಬ) newskadaba.com ಕಡಬ, ಆ. 17. ಇಲ್ಲಿನ ಕೊಯಿಲ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಮನೆಯೊಳಗೆ ಅಕ್ರಮವಾಗಿ ಹೆಬ್ಬಲಸು ಮರಗಳನ್ನು ದಾಸ್ತಾನಿರಿಸಿದ್ದ ಪ್ರಕರಣವನ್ನು ಪುತ್ತೂರು ವಲಯಾರಣ್ಯ ಇಲಾಖಾ ಅಧಿಕಾರಿಗಳ ತಂಡ ಪತ್ತೆ ಹಚ್ಚಿ, ಮರವನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಕೊಯಿಲ ಗ್ರಾಮದ ಗಂಡಿಬಾಗಿಲು ಜನತಾ ಕಾಲೋನಿ ನಿವಾಸಿ ಹಾರಿಸ್ ಎಂಬವರ ಮನೆಯಲ್ಲಿ ಅಕ್ರಮವಾಗಿ ಮರದ ಸೈಜ್‌ಗಳನ್ನಾಗಿ ಮಾಡಿ ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಪುತ್ತೂರು ಸಹಾಯಕ ಅರಣ್ಯಾಧಿಕಾರಿ ಮಾರ್ಗದರ್ಶನದಲ್ಲಿ ಕಾರ್‍ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮನೆಯೊಳಗಿದ್ದ ಹೆಬ್ಬಲಸು ಜಾತಿಯ 15 ಸೈಜ್ ಮರಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಹಾರಿಸ್ ಮನೆಯಿಂದ ಸುಮಾರು ೪೦ ಸಾವಿರ ರೂಪಾಯಿ ಮೌಲ್ಯದ ಮರದ ಸೈಜ್‌ಗಳನ್ನು ವಶಕ್ಕೆ ಪಡೆದುಕೊಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ತಿಸಿದ್ದಾರೆ.

Also Read  ಈ ರಾಶಿಯವರಿಗೆ ತಡವಾಗಿ ಮದುವೆ ಆಗುತ್ತೆ? ಯಾಕೆ? ಆ ರಾಶಿಗಳು ಯಾವವು? ಸಂಪೂರ್ಣವಾಗಿ ತಿಳಿದುಕೊಳ್ಳಿ

error: Content is protected !!
Scroll to Top