ಬೆಲೆ ಹೆಚ್ಚಳದಿಂದ ಕಣ್ಣೀರು ತರಿಸಿದ್ದ ಈರುಳ್ಳಿ ದರ ದಿಢೀರ್ ಕುಸಿತ ➤ ರೈತರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 26. ಜನಸಾಮಾನ್ಯರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಇದೀಗ ದಿಢೀರ್ ಕುಸಿತ ಕಂಡಿದ್ದು, ಪ್ರತೀ ಕೆ.ಜಿ.ಗೆ 100 ರೂ.ವರೆಗೂ ಏರಿಕೆ ಕಂಡಿದ್ದ ಈರುಳ್ಳಿ ಇದೀಗ 10 ರೂ.ಗೆ ಇಳಿಕೆಯಾಗಿದೆ.

ಈ ವರ್ಷದಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಜೊತೆಗೆ ಮಾರುಕಟ್ಟೆಗೆ ಮಹಾರಾಷ್ಟ್ರದಿಂದಲೂ ಹೆಚ್ಚು ಈರುಳ್ಳಿ ಪೂರೈಕೆಯಾಗುತ್ತಿರುವುದರಿಂದ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಲೆ ಇಳಿಕೆಯಿಂದ ಜನಸಾಮಾನ್ಯರಿಗೆ ಸಂತೋಷವಾದರೆ ರೈತರಿಗೆ ಕಣ್ಣೀರು ತರಿಸಿದೆ.

error: Content is protected !!
Scroll to Top