ದ.ಕ ಜಿಲ್ಲೆಯಲ್ಲಿ ನಾಳೆ(ಜೂ.23) ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನದವರೆಗೆ ಎಲ್ಲಾ ಅಂಗಡಿಗಳು ತೆರೆಯಲು ಅವಕಾಶ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) ಮಂಗಳೂರು, ಜೂ. 22. ದ.ಕ. ಜಿಲ್ಲೆಯ ಜನರಿಗೆ ಬಹಳ ದಿನಗಳ ಬಳಿಕ ಕೊಂಚ ರಿಲ್ಯಾಕ್ಸ್ ಸಿಕ್ಕಿದ್ದು, ನಾಳೆಯಿಂದ (ಜೂ . 23) ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.

ದಿನಸಿ ಅಂಗಡಿಗಳಂತೆಯೇ ಜವಳಿ ಅಂಗಡಿ, ಝರಾಕ್ಸ್ ಹಾಗೂ ಚಪ್ಪಲಿ ಅಂಗಡಿ ಸೇರಿದಂತೆ ಇತರ ವ್ಯಾಪಾರಸ್ಥರು ಬದುಕು ಕಟ್ಟಿಕೊಳ್ಳಲು ಕಷ್ಟ ಎಂಬ ದೂರಿನನ್ವಯ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ ಕಾರಣ ನಾಳೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Also Read  ನಾನು ಪಂಜರದ ಪಕ್ಷಿ, ಇನ್ನು ನನಗಾರು ಗತಿ, ಕೇಳ ಬಯಸುವೆ ನನ್ನ ಕಥೆಯ..? ➤ ವೈರಲ್ ಆಯಿತು ಗಣೇಶ್ ಅನಿಲ ಅವರ ವ್ಯಂಗ್ಯಭರಿತ ಕಥೆ

error: Content is protected !!
Scroll to Top