ರಾಜ್ಯದಲ್ಲಿ ಇಳಿಯತ್ತ ಕೋವಿಡ್ ಕೇಸ್ ➤ ಹೆಚ್ಚಿದ ಮರಣ ಪ್ರಕರಣ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.01: ರಾಜ್ಯದಲ್ಲಿ ಕಳೆದ ದಿನ 16,604 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 26,04,431ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 411 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಮೃತರ ಸಂಖ್ಯೆ 29 ಸಾವಿರ ಗಡಿ ದಾಟಿ, 29,090ಕ್ಕೆ ತಲುಪಿದೆ. ಸೋಂಕಿನ ಪ್ರಕರಣ ಕಡಿಮೆ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಸಿಟಿವಿಟಿ ದರ ನಿರಂತರವಾಗಿ ಇಳಿಕೆಯಾಗುತ್ತಲೇ ಇದೆ.ಆದರೆ ಸಾವಿನ ಪ್ರಮಾಣ ಮಾತ್ರ ಇಳಿಕೆಯಾಗುತ್ತಲೇ ಇಲ್ಲ.

Scroll to Top