ಆಕಾಶವಾಣಿ ಉದ್ಘೋಷಕ ಸುಳ್ಯದ ಚಿತ್ತರಂಜನ್ ದಾಸ್ ವಿಧಿವಶ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 29. ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಸೇವೆ ಸಲ್ಲಿಸಿದ್ದ ಸುಳ್ಯ ಮೂಲದ ಚಿತ್ತರಂಜನ್ ದಾಸ್ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 61 ವರ್ಷ ಪ್ರಾಯವಾಗಿತ್ತು.

 

ದೆಹಲಿಯ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಸೇವೆ ಸಲ್ಲಿಸಿದ್ದ ಇವರು, ಬಳಿಕ ಜಾಹೀರಾತು ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದ ಇವರು, ಮೂಲತಃ ಸುಳ್ಯದ ನೆಲ್ಲೂರು ಸಮೀಪದ ಕೆಮ್ರಾಜೆ ನಿವಾಸಿಯಾಗಿದ್ದು, ನಿವೃತ್ತಿ ಬಳಿಕ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು.

Also Read  ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ➤ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ K S R T C

 

error: Content is protected !!
Scroll to Top