ಸಂಪ್ಯ: ನಾಲ್ವರು ಖತರ್ನಾಕ್ ಕಳ್ಳರ ಬಂಧನ ► ಆರ್ಲಪದವು ಕಾಳುಮೆಣಸು ಕಳವು ಪ್ರಕರಣ ಬೇಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.13. ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಆರ್ಲಪದವು ಎಂಬಲ್ಲಿನ ಮಳಿಗೆಯೊಂದರಲ್ಲಿ ಸೆಪ್ಟೆಂಬರ್ 24 ರಂದು ನಡೆದಿದ್ದ ಲಕ್ಷಾಂತರ ಮೌಲ್ಯದ ಕಾಳುಮೆಣಸು ಕಳವು ಪ್ರಕರಣವನ್ನು ಭೇದಿಸಿರುವ ಸಂಪ್ಯ ಠಾಣಾ ಪೊಲೀಸರು ಎರಡು ಕಾರು, ನಾಲ್ವರು ಆರೋಪಿಗಳೊಂದಿಗೆ 741 ಕೆಜಿ ಕಾಳುಮೆಣಸನ್ನು ವಶಪಡಿಸಿಕೊಂಡಿದ್ದಾರೆ.

ಬೊಲೆರೋ ವಾಹನದಲ್ಲಿ ಏನೋ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ‌ ದಾಳಿ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಆರ್ಲಪದವು ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿಗಳಾದ ಅರ್ಶದ್, ಪ್ರಮೋದ್ ಕುಟಿನ್ಹಾ, ಸಫ್ವಾನ್ ಹಾಗೂ ಅಬ್ದುಲ್ ಅಝೀಝ್ ಎಂಬವರನ್ನು ಬಂಧಿಸಿದ್ದು, ಪ್ರಕರಣಕ್ಕೆ ಬಳಸಿದ ಬೊಲೆರೋ ಹಾಗೂ ಇನ್ನೋವಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ.

error: Content is protected !!
Scroll to Top