ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಅವಹೇಳನ ► ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ದೂರು

(ನ್ಯೂಸ್ ಕಡಬ) newskadabacom ಪುತ್ತೂರು, ಅ.01. ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ಕಳುಹಿಸಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.

ಸಂತೋಷ್ ಉಪ್ಪುರ್ ಎನ್ನುವ ವ್ಯಕ್ತಿ ಕೊರಗಜ್ಜನ ಬಗ್ಗೆ ತನ್ನ ಫೇಸ್‌ಬುಕ್‌ ವಾಲ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು, ಅದನ್ನು ಏಂಜೆಲ್ ನಯನ ಪ್ರಜ್ವಲ್ ಮತ್ತು ಕುಂಜತ್ತುಮೊಯಿದಿನ್ ಕುಂಜತ್ತೂರು ಎಂಬವರು ಶೇರ್ ಮಾಡಿ ಕಮೆಂಟ್ಸ್ ಮಾಡಿರುತ್ತಾರೆ. ಕೊರಗಜ್ಜನನ್ನು ನಿಂದಿಸಿದ ಇವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಿಪ್ಪಾಡಿ ಗ್ರಾಮದ ಶೇರ ನಿವಾಸಿ ಮನ್ಮಥ ಶೆಟ್ಟಿ ಎಂಬವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

error: Content is protected !!

Join the Group

Join WhatsApp Group