ದ.ಕ. ಜಿಲ್ಲೆಯ ವಲೇರಿಯನ್ ಡಿಸೋಜ ಸಹಿತ 65 ಗಣ್ಯರಿಗೆ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 28.  ರಾಜ್ಯ ಸರ್ಕಾರವು 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ದಕ್ಷಿಣ ಕನ್ನಡದ ವಲೇರಿಯನ್ ಡಿಸೋಜ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 65 ಗಣ್ಯರಿಗೆ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.

ದಕ್ಷಿಣ ಕನ್ನಡದ ವಲೇರಿಯನ್ ಡಿಸೋಜ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ, ಉಡುಪಿಯ ಎಂ.ಕೆ ವಿಜಯಕುಮಾರ್ ಅವರಿಗೆ ನ್ಯಾಯಾಂಗ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರಕಿವೆ.

ಸಾಹಿತ್ಯ ಕ್ಷೇತ್ರ:- 1. ಪ್ರೋ| ಸಿ.ಪಿ. ಸಿದ್ಧಾಶ್ರಮ ಧಾರಾವಾಡ, 2. ವಿ. ಮುನಿ ವೆಂಕಟಪ್ಪ, ಕೋಲಾರ, 3. ರಾಮಣ್ಣ ಬ್ಯಾಟಿ (ವಿಶೇಷ ಚೇತನ), ಗದಗ, 4. ವಲೇರಿಯನ್‌ ಡಿಸೋಜ (ವಲ್ಲಿವಗ್ಗ) ದಕ್ಷಿಣ ಕನ್ನಡ 5. ಡಿ. ಎನ್‌. ಅಕ್ಕಿ, ಯಾದಗಿರಿ

ಸಂಗೀತ ಕ್ಷೇತ್ರ:- 6. ಹಂಬಯ್ಯ ನೂಲಿ, ರಾಯಚೂರು, ಅನಂತ ತೇರದಾಳ, ಬೆಳಗಾವಿ, ಬಿ.ವಿ. ಶ್ರೀನಿವಾಸ್‌, ಬೆಂಗಳೂರು ನಗರ, ಗಿರಿಜಾ ನಾರಾಯಣ, ಬೆಂಗಳೂರು ನಗರ,  ಕೆ. ಲಿಂಗಪ್ಪ ಶೇರಿಗಾರ ಕಟೀಲು ದಕ್ಷಿಣ ಕನ್ನಡ

ನ್ಯಾಯಾಂಗ ಕ್ಷೇತ್ರ:- ಕೆ. ಎನ್‌. ಭಟ್‌, ಬೆಂಗಳೂರು, ಎಂ. ಕೆ. ವಿಜಯಕುಮಾರ, ಉಡುಪಿ

ಮಾಧ್ಯಮ ಕ್ಷೇತ್ರ:- ಸಿ. ಮಹೇಶ್ವರನ್‌, ಮೈಸೂರು, ಟಿ. ವೆಂಕಟೇಶ್‌ (ಈ ಸಂಜೆ), ಬೆಂಗಳೂರು ನಗರ

ಯೋಗ:- ಎ. ಎಸ್‌. ಚಂದ್ರಶೇಖರ, ಮೈಸೂರು

 

Scroll to Top