ಸುಬ್ರಹ್ಮಣ್ಯ: ಮಳೆಯ ಅಬ್ಬರಕ್ಕೆ ಪರ್ವತಮುಖಿಯಲ್ಲಿ ಮನೆಯ ಮೇಲ್ಛಾವಣಿ ಕುಸಿತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ . 14: ಕರಾವಳಿಯಲ್ಲಿ ಈಗಾಗಲೇ ಮಳೆಯ ಅಬ್ಬರಕ್ಕೆ ಅಲ್ಲಲ್ಲಿ ಸಣ್ಣ ಪುಟ್ಟ ಅವಾಂತರಗಳು ಸೃಷ್ಟಿಯಾಗಿದೆ.ಪರಿಣಾಮ ಪರ್ವತಮುಖಿಯಲ್ಲಿ ಮನೆಯ ಮೇಲ್ಛಾವಣಿ ಕುಸಿತಗೊಂಡಿದೆ

ಕಳೆದೊಂದು ವಾರದಿಂದ ಎಡೆಬಿಡದ ಸುರಿದ ಭಾರಿ ಮಳೆಗೆ ಸುಬ್ರಹ್ಮಣ್ಯ ಬಳಿಯ ಪರ್ವತಮುಖಿ ಎಂಬಲ್ಲಿ ಪುರುಷೋತ್ತಮ ಹಾಗೂ ಹೊನ್ನಪ್ಪ ಎಂಬುವರ ಮನೆಯ ಛಾವಣಿಯು ಕಳೆದ ದಿನ ಕುಸಿದು ಹಾನಿ ಸಂಭವಿಸಿದೆ. ಪರಿಣಾಮ ಮನೆಯ ಮೇಲ್ಛಾವಣಿ ಛಾವಣಿ ಸಂಪೂರ್ಣವಾಗಿ ಕುಸಿದು ಹಂಚುಗಳು ಪುಡಿ ಪುಡಿಯಾಗಿದೆ. ಸದ್ಯ ಇದನ್ನು ಸ್ಥಳಿಯರು ದುರಸ್ತಿಗೊಳಿಸಲು ಸಹಕರಿಸಿದ್ದಾರೆ.

Also Read  15 ವರ್ಷಗಳಿಂದ ಸಂಗ್ರಸಿಡಲಾದ ರಕ್ತ ಚಂದನಕ್ಕೆ ಕೊನೆಗೂ ಮುಕ್ತಿ..!

 

error: Content is protected !!
Scroll to Top