ಕಂದ್ರಪ್ಪಾಡಿ ಅಂಚೆ ಕಛೇರಿಯ ದುರಸ್ಥಿಯ ಕುರಿತು ಸಭೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 03. ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಅಂಚೆ ಕಛೇರಿಯ ದುರಸ್ಥಿಗಾಗಿ ಊರವರು ನಡೆಸಿದ ಸಭೆಯಲ್ಲಿ ಊರಿನವರಿಂದಲೇ ಧನ ಸಂಗ್ರಹ ಮಾಡುವ ಮೂಲಕ ಸ್ವತಃ ಯುವಕ ಮಂಡಲದವರೇ ದುರಸ್ಥಿಯ ನೇತೃತ್ವ ವಹಿಸಿಕೊಂಡಿದ್ದಾರೆ.

ಇದೇ ಸಂದರ್ಭ ಕಛೇರಿಯ ದುರಸ್ಥಿ ಕುರಿತು ಸರಕಾರದ ಗಮನ ಸೆಳೆದ ಊರವರ ಸಭೆಯನ್ನು ಮರದು ದುರಸ್ಥಿಗೆ ಕಾರಣಕರ್ತರಾದ ಚಂದ್ರಶೇಖರ್ ಅವರನ್ನು ಗೌರವಿಸಲಾಯಿತು.

Scroll to Top