ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನ ➤ ದೇವರ ತುಳು ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಫೆ.29. ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನದ ತುಳು ಭಕ್ತಿಗೀತೆಗಳ ಧ್ವನಿಸುರುಳಿಯನ್ನು ದೇವಸ್ಥಾನದ ಆಡಳಿತದ ಮೋಕ್ತೇಸರಾದ ಶ್ರೀ ನಾರಾಯಣ ಕಲ್ಪುರೆಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜನಾರ್ದನ ಗೌಡ ಪುತ್ತಿಲ, ಕರುಣಾಕರ ರೈ ಕರ್ಮಾಯಿ, ಮೇದಪ್ಪಗೌಡ ಡೆಪ್ಪುಣಿ, ವಿಜಯಕುಮಾರ್ ರೈ ಕರ್ಮಾಯಿ, ಸರ್ವೋತ್ತಮ ಗೌಡ ಪಂಜೋಡಿ, ಮಂಜುನಾಥ ಕೋಲಂತ್ತಾಡಿ ಮೊದಲಾದವರು ಉಪಸ್ಥಿತರಿದ್ದರು. ಭಕ್ತಿ ಗೀತೆಯನ್ನು ಶ್ರೀಕಾಂತ್ ಗಟ್ಟಿಗಾರು ಅವರ ನಿರ್ವಹಣೆಯಲ್ಲಿ ವಸಂತ ಗುರಿಯಡ್ಕರವರು ಸಾಹಿತ್ಯ ರಚಿಸಿ ಹಾಡಿದ್ದಾರೆ.

Also Read  ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಲಾರಿ - ಚಾಲಕ, ಕ್ಲೀನರ್ ಪಾರು

error: Content is protected !!
Scroll to Top