ಕುಂದಾಪುರ: ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು

ಕುಂದಾಪುರ, ಜ.25: ಪಾದಚಾರಿ ಮಹಿಳೆಯೊಬ್ಬಳಿಗೆ ಬೈಕ್ಕೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಾದ್ವಾರದ ಎದುರು ನಡೆದಿದೆ.

Nk Kukke

 

 

 

 

ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ವಿನಯ ಕಾಮತ್‌(62) ಎಂದು ಗುರುತಿಸಲಾಗಿದೆ. ಸವಾರ ಹಳವಳ್ಳಿ ನಿವಾಸಿ ಕೀರ್ತಿರಾಜ್ ಕೊಟೇಶ್ವರದಿಂದ ಕುಂಭಾಶಿ ಕಡೆಗೆ ಅತೀ ವೇಗದಿಂದ ಬಂದಿದ್ದು ಪಾದಚಾರಿ ವೃದ್ಧೆಗೆ ಢಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಬೈಕ್‌ ಸವಾರ ಕೀರ್ತಿರಾಜ್‌ ತಲೆಗೂ ಗಂಬೀರ ಗಾಯವಾಗಿದ್ದು ಆ ಕೂಡಲೇ ಕೋಟೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕುಂದಾಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಕಡಬ: ಬೈಕ್ ಹಾಗೂ ಸ್ವಿಫ್ಟ್ ಗೆ ಢಿಕ್ಕಿ ಹೊಡೆದ ಮಾರುತಿ 800 ಕಾರು ► ಓರ್ವನಿಗೆ ಗಂಭೀರ ಗಾಯ

 

error: Content is protected !!
Scroll to Top