ಮಂಗಳೂರು: ಯುವಕನಿಗೆ ಚೂರಿ ಇರಿತ ➤ ಮತ್ತೆ ಬೆಚ್ಚಿಬಿದ್ದ ತುಳುನಾಡು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.21. ಯುವಕನೋರ್ವನಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಶನಿವಾರ ರಾತ್ರಿ ಮಂಗಳೂರಿನಲ್ಲಿ ನಡೆದಿದ್ದು, ಪೌರತ್ವದ ಕಿಚ್ಚಿನಿಂದ ತಲ್ಲಣಗೊಂಡಿದ್ದ ಮಂಗಳೂರು ಇದೀಗ ಮತ್ತೆ ಬೆಚ್ಚಿ ಬಿದ್ದಿದೆ.

ನಗರದ ಹೊರವಲಯದ ತೊಕ್ಕೊಟ್ಟು ಎಂಬಲ್ಲಿನ ಅಂಬಿಕಾ ರೋಡ್ ಸಮೀಪ ತಂಡವೊಂದು ನಿಖಿಲ್ ಕೋಟ್ಯಾನ್ ಎಂಬವರಿಗೆ ಚೂರಿಯಿಂದ ಇರಿದು ಪರಾರಿಯಾಗಿದೆ. ಗಂಭೀರ ಗಾಯಗೊಂಡಿರುವ ನಿಖಿಲ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ತನಿಖೆ ಕೈಗೊಂಡಿದ್ದಾರೆ.

Also Read  ಮಂಗಳೂರು: ಹಳಿತಪ್ಪಿದ ರೈಲು ಕಂಬಕ್ಕೆ ಢಿಕ್ಕಿ

error: Content is protected !!
Scroll to Top