ಪ್ರೇಮ ಸಮಸ್ಯೆಗೆ ಪರಿಹಾರ ಮತ್ತು ದಿನ ಭವಿಷ್ಯ

ಪ್ರೇಮ ವಿಷಯದಲ್ಲಿ ಸಫಲತೆಯನ್ನು ಸಾಧಿಸಲು ಶಿವ ಪಾರ್ವತಿ ಸಮೇತ ವಾಗಿರುವ ದೇವಸ್ಥಾನಕ್ಕೆ ಒಂಬತ್ತು ದಿನಗಳ ಕಾಲ ಸೇವೆಯನ್ನು ಸಲ್ಲಿಸಿ ಹತ್ತನೆಯ ದಿನಕ್ಕೆ ದೇವಿಗೆ ಹಸಿರು ವರ್ಣದ ಸೀರೆಯನ್ನು ಅರ್ಪಿಸಿ ಇದರಿಂದ ನೀವು ಅಂದುಕೊಂಡಿರುವ ಪ್ರೇಮವನ್ನು ಪಡೆಯಬಹುದು.

ಶ್ರೀ ಗುರು ದತ್ತಾತ್ರೇಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಸಂತೋಷವನ್ನು ಆಸ್ವಾದಿಸಲು ಸಿದ್ದರಾಗಿ ಇದರಿಂದ ತಾನಾಗಿಯೇ ಸಂತೋಷ ನಿಮ್ಮ ಹತ್ತಿರ ಬರುತ್ತದೆ. ಕಾಲಹರಣ ಮಾಡುವುದಕ್ಕಿಂತ ಕೆಲಸದಲ್ಲಿ ಆಸಕ್ತಿ ತೆಗೆದುಕೊಳ್ಳಿ. ಇಂದು ಆದಾಯವು ಹೆಚ್ಚಳವಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಮನೆಗೆ ನೆಂಟರ ಆಗಮನದಿಂದ ಸಂತೋಷದ ವಾತಾವರಣ ಕೂಡಿರುತ್ತದೆ. ಸಂಗಾತಿಯು ನಿಮ್ಮ ಬಗ್ಗೆ ಅಪಸ್ವರ ತೆಗೆಯಬಹುದಾದ ಸಾಧ್ಯತೆ ಈ ದಿನ ದಟ್ಟವಾಗಿ ಕಾಣಿಸುತ್ತದೆ. ನಿಮ್ಮ ಕೆಲಸ ನೀವು ಮಾಡಲು ಪ್ರಯತ್ನಿಸಿ ಇತರರ ನಂಬಿ ಮೋಸ ಹೋಗುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕುಟುಂಬದಿಂದ ಶುಭಸುದ್ದಿ ಆಲಿಸುವಂತಹ ಸನ್ನಿವೇಶ ಬರಲಿದೆ. ಗೃಹಪಯೋಗಿ ವಸ್ತುಗಳ ಖರೀದಿಗೆ ಆಸಕ್ತಿ ಪಡಿಸುವಿರಿ. ನಿಮ್ಮ ಪತ್ನಿಯ ಮೇಲೆ ಇಂದು ನೀವೇ ಮುನಿಸಿ ಕೊಳ್ಳಬಹುದಾದ ಸಾಧ್ಯತೆ ಇದೆ. ಮಾನಸಿಕವಾಗಿ ಸದೃಢತೆಯನ್ನು ಪಡೆದುಕೊಳ್ಳಿ. ನಕಾರಾತ್ಮಕ ಚಿಂತನೆಗಳನ್ನು ಆದಷ್ಟು ತಡೆಗಟ್ಟಿ. ಭವಿಷ್ಯದ ಹಿತದೃಷ್ಟಿಯಿಂದ ಕಾರ್ಯಗಳನ್ನು ಮಾಡಲು ಮುಂದಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವಿನಾಕಾರಣ ಖರೀದಿ ಪ್ರಕ್ರಿಯೆಯಲ್ಲಿ ತೊಡಗಬೇಡಿ. ಇಂದು ಆಕಸ್ಮಿಕವಾಗಿ ಸಿಗುವ ಸ್ನೇಹಿತರೊಂದಿಗೆ ಮೋಜು-ಮಸ್ತಿಗಳ ಸನ್ನಿವೇಶ ಎದುರಾಗುತ್ತದೆ ಆದಷ್ಟು ಬೇಗನೇ ಮನೆಗೆ ಹೋಗಲು ಸಿದ್ಧರಾಗುವುದು ಒಳ್ಳೆಯದು. ಕುಟುಂಬದ ಬೆಂಬಲದಿಂದ ಹಾಗೂ ಅವರ ಸಹಕಾರದಿಂದ ನಿಮ್ಮ ಕೆಲಸಗಳು ಉತ್ತಮ ಫಲಿತಾಂಶ ಕಾಣಲಿದೆ. ಕೆಲವು ವಿಷಯಗಳು ನೀವು ಅಂದುಕೊಂಡಂತಕಿಂತಲೂ ವಿಭಿನ್ನವಾಗಿರಲಿದೆ, ನಿಮ್ಮದೇ ವಾದ ಸರಿ ಎಂಬ ಭ್ರಮೆಯಲ್ಲಿ ಕೂರಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ನಿಮ್ಮ ನೇರಕ್ಕೆ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಕುಟುಂಬದವರು ಹಾಗೂ ಆತ್ಮೀಯರ ನೆರವನ್ನು ಪಡೆದು ಮುನ್ನಡೆಯಿರಿ. ಮಾನಸಿಕವಾದ ಸಮಸ್ಯೆಗಳು ನಿಮ್ಮಲ್ಲಿ ಕಾಡಬಹುದು, ಆದಷ್ಟು ಚೈತನ್ಯದಿಂದ ಇರಲು ಪ್ರಯತ್ನಿಸಿ. ಹಣಕಾಸಿನ ವಿಷಯದಲ್ಲಿ ಕಲ್ಪನೆ ಕಾಣುವುದು ಬಲು ಸುಲಭ ಆದರೆ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ವಾಸ್ತವತೆಯ ದಿಕ್ಕಿನೆಡೆಗೆ ಸಾಗುವುದು ರೂಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸಹವಾಸ ದೋಷವನ್ನು ಆದಷ್ಟು ದೂರವಿಡಿ. ಆರ್ಥಿಕ ಮಾರ್ಗಗಳನ್ನು ಕಂಡುಕೊಳ್ಳಲು ಸನ್ನದ್ಧರಾಗಿ. ನಿಮ್ಮಲ್ಲಿ ಉದ್ಭವವಾಗುವ ಕೋಪವನ್ನು ಆದಷ್ಟು ತಡೆಹಿಡಿಯಲು ಪ್ರಯತ್ನಿಸುವುದು ಒಳ್ಳೆಯದು. ಕುಟುಂಬದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿ ಅವರ ಬೆಂಬಲದಿಂದ ನಿಮಗೆ ಅನುಕೂಲ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಮನಸ್ಸಿನಲ್ಲಿ ಆಂತರಿಕ ಅಡಗಿರುವ ಚಿಂತೆಗಳನ್ನು ಮರೆಯಲು ಪ್ರಯತ್ನಿಸಿ. ಗಾಳಿ ಮಾತುಗಳನ್ನು ನಂಬಿ ಮೋಸಹೋಗುವುದು ಕಂಡುಬರುತ್ತದೆ. ಆದಷ್ಟು ಒಬ್ಬ ವ್ಯಕ್ತಿಯ ಬಗ್ಗೆ ಮನಬಂದಂತೆ ನಿರ್ಣಯಿಸುವುದು ತಪ್ಪಾಗಿ ಕಾಣುತ್ತದೆ. ಹೊಸ ಯೋಜನೆಗಳನ್ನು ಕಣ್ಣುಮುಚ್ಚಿಕೊಂಡು ಪಡೆದುಕೊಳ್ಳುವುದು ಬೇಡ ಅದರ ಆಳ ಮತ್ತು ಸೂಕ್ಷ್ಮತೆಯನ್ನು ಅಧ್ಯಯನ ಮಾಡುವುದು ಒಳ್ಳೆಯದು. ಸಂಸಾರದಲ್ಲಿ ಸಂಭವಿಸುವ ಭಿನ್ನಾಭಿಪ್ರಾಯಗಳನ್ನು ಹೊರಗಡೆ ತರಬೇಡಿ, ಕುಳಿತುಕೊಂಡು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಪತ್ನಿಯ ಕಾರ್ಯದಲ್ಲಿ ನೆರವಾಗುವುದರಿಂದ ನಿಮ್ಮ ಬಗ್ಗೆ ಅವರ ಗೌರವ ಹೆಚ್ಚಾಗಲಿದೆ. ಒಂದು ಯೋಜನೆಯ ನಿಮಿತ್ತ ದೂರದೂರಿನ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುತ್ತದೆ. ಮಕ್ಕಳ ಗೆಲುವಿನಲ್ಲಿ ನಿಮ್ಮ ನಗೆ ಇರಲಿದೆ. ಪ್ರವಾಸದ ಯೋಜನೆ ನಿಮ್ಮಲ್ಲಿ ಚೈತನ್ಯ ವೃದ್ಧಿಸಲಿದೆ. ಕೆಲಸವನ್ನು ಪೂರ್ಣಗೊಳಿಸುವ ಪಣತೊಡಿ. ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಆಹಾರ ಸೇವನೆ ಮಾಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ವೈಯಕ್ತಿಕ ವಿಚಾರಗಳನ್ನು ಪರರ ಮುಂದೆ ಪ್ರಸ್ತಾಪಿಸಿ ನಗೆಪಾಟಲಿಗೀಡಾಗುವ ಸಂಭವವಿದೆ. ಕಾಲ ಮತ್ತು ಪರಿಸ್ಥಿತಿಯನ್ನು ಅಧ್ಯಯನ ನಡೆಸಿ ಯೋಜನೆಗಳ ಲಾಭ ಪಡೆಯಿರಿ. ಇಂದು ಲಾಭದಾಯಕ ಕೆಲಸವನ್ನು ಆಯ್ದುಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕವಾಗಿ ಉತ್ತಮ ರೀತಿಯ ಸಾಧನೆಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಆದಾಯದಲ್ಲಿ ಸ್ಥಿರತೆ ಕಾಣಬಹುದು. ನಿಮ್ಮ ಬಳಿ ಹಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬರಬಹುದು ಸೂಕ್ತ ಮಾರ್ಗದರ್ಶನ ನೀಡಿ. ಹಿತೈಷಿಗಳ ಸಹಕಾರದಿಂದ ಬಂಡವಾಳದ ಕ್ರೂಡಿಕರಣ ಮಾಡುವ ಸಿದ್ಧತೆ ನಡೆಸುವಿರಿ. ದೀರ್ಘಾವಧಿಯ ಹೂಡಿಕೆಗಳನ್ನು ಮಾಡಲು ಬಯಸುವಿರಿ, ಇದರಿಂದ ಲಾಭ ಹೆಚ್ಚಾಗಲಿದೆ. ದಾಂಪತ್ಯದಲ್ಲಿ ನಡೆಯುವ ಸಣ್ಣಪುಟ್ಟ ಜಗಳವನ್ನು ಆದಷ್ಟು ಶಾಂತರೀತಿಯಿಂದ ಸಮಾಧಾನಪಡಿಸಿ. ವಿದ್ಯೆ ಹಾಗೂ ಕೆಲಸದಲ್ಲಿ ಏಕಾಗ್ರತೆಯನ್ನು ರೂಢಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಂಗಾತಿಯ ಹಿತದೃಷ್ಟಿಯಿಂದ ನಿಮ್ಮೆಲ್ಲಾ ಕಾರ್ಯಗಳಿಗೆ ಜಯ ಸಿಗುವ ಸಾಧ್ಯತೆ ಇದೆ. ಕುಟುಂಬಸ್ಥರ ಬೇಡಿಕೆಗಳು ಹೆಚ್ಚಾಗುವ ಸಂಭವ ಕಂಡುಬರುತ್ತದೆ. ಒಂದು ಉತ್ತಮ ರೀತಿಯ ಹಾಗೂ ನೆನಪಿನಲ್ಲಿಡುವಂತಹ ಪ್ರಯಾಣಕ್ಕೆ ಸಿದ್ಧತೆ ನಡೆಸುವಿರಿ. ಕೆಲಸದಲ್ಲಿ ಹಿರಿಯ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕುಟುಂಬದಲ್ಲಿ ಸಮಸ್ಯೆಗಳು ಬರಬಹುದು. ನಿಮ್ಮ ಏಕಾಗ್ರತೆ ಕಳೆದುಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಹಣಕಾಸಿನ ಸಹಕಾರ ನೀಡಲು ಆತ್ಮೀಯರು ಸಿದ್ಧರಾಗುತ್ತಾರೆ. ಮಕ್ಕಳಿಂದ ಉತ್ತಮ ನಿರೀಕ್ಷೆ ಕಂಡುಬರುತ್ತದೆ. ಸಂಗಾತಿಯ ಪ್ರೀತಿಯು ನಿಮ್ಮನ್ನು ಅತಿಯಾಗಿ ಮನಸ್ಸಿಗೆ ಹಿತ ತರಲಿದೆ. ಲಾಭದಾಯಕ ಹೂಡಿಕೆಗಳು ಕಂಡುಬಂದರು ಕೆಲವರು ನಿಮ್ಮ ಯೋಜನೆಯಲ್ಲಿ ಹಸ್ತಕ್ಷೇಪ ನಡೆಸುವ ಸಾಧ್ಯತೆ ಇದೆ. ಆತುರದ ನಿರ್ಧಾರಗಳಿಂದ ಸಮಸ್ಯೆ ಹೆಚ್ಚಾಗಬಹುದು ಎಚ್ಚರವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಇಚ್ಛಾಶಕ್ತಿಯಿಂದ ಬೆಳವಣಿಗೆ ಹಾದಿಯನ್ನು ಕಂಡುಕೊಳ್ಳಲು ಪ್ರಯತ್ನಿಸುವುದು ಒಳಿತು. ಸಂಗಾತಿಯೊಡನೆ ಮನೋರಂಜನಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೊಸ ಒಪ್ಪಂದಗಳನ್ನು ಈ ದಿನ ಮಾಡಲು ಬಯಸುವಿರಿ, ಎಚ್ಚರ ಇರಬೇಕಾದ ಸಮಯವಿದು ಯೋಜನೆಯ ಲಾಭಾಂಶವಾಗಿ ಕಂಡರೂ ಸಹ ಅದು ಒಳಭಾಗದಲ್ಲಿ ನಕಾರಾತ್ಮಕ ಫಲಿತಾಂಶದಿಂದ ಕೂಡಿರಬಹುದು. ಸಾಲಕೊಡುವ ಪ್ರಮೇಯ ಬಂದರೆ ಆದಷ್ಟು ಈ ದಿನ ನಯವಾಗಿ ತಡೆಹಿಡಿಯುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!

Join the Group

Join WhatsApp Group