ದ.ಕ ಜಿಲ್ಲಾ ಸರಕಾರಿ ಡಿ ವರ್ಗ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂಪಾಯಿ 50ಸಾವಿರ ರೂ. ಹಸ್ತಾಂತರ

(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.3.  ದಕ್ಷಿಣಕನ್ನಡ ಜಿಲ್ಲಾ ಸರಕಾರಿ ಡಿ ವರ್ಗ ನೌಕರರ ಸಂಘದ ವತಿಯಿಂದ ಭೀಕರ ಪ್ರವಹಾದಿಂದಾಗಿ ತಮ್ಮ ಮನೆಮಠಗಳನ್ನು ಕಳೆದು ಕೊಂಡಿರುವ  ಸಂತ್ರಸ್ತರಿಗೆ ಸಂಗ್ರಹಿಸಿದ ಸಹಾಯ ಧನವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಮಾಡಲಾಯಿತು.

ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂಪಾಯಿ 50ಸಾವಿರ ಚೆಕ್ಕನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಆಗಸ್ಟ್ 30 ರಂದು ನೀಡಲಾಯಿತು. ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Scroll to Top