ಇಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವರ ಪ್ರವಾಸ

(ನ್ಯೂಸ್ ಕಡಬ)newskadaba.com ಮಂಗಳೂರು,ಜೂ.21. ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಅವರ ದ.ಕ ಜಿಲ್ಲಾ ಪ್ರವಾಸ ಇಂತಿವೆ.
ಇಂದು  ಬೆಳಿಗ್ಗೆ 6.30 – ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ವಿಶ್ವಯೋಗ ದಿನಾಚರಣೆ, 8 – ಮಂಗಳೂರು ಮಂಗಳಾ ಒಳಾಂಗಣ ಕ್ರೀಡಾಂಗಣದಲ್ಲಿ ದ.ಕ ಜಿಲ್ಲಾಡಳಿತದ ವತಿಯಿಂದ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಉದ್ಘಾಟನೆ, 9 -ಫಾದರ್ ಮುಲ್ಲರ್ ಆಸ್ಪತ್ರೆಯ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಉದ್ಘಾಟನೆ, 10.30 – ಮಂಗಳೂರು ಬಿ ಹೋಬಳಿಯ ಸಮಗ್ರ ಕೃಷಿ ಅಭಿಯಾನದ ಉದ್ಘಾಟನೆ ಪಾವೂರು ಗ್ರಾಮ ಪಂಚಾಯತ್,

ಮಧ್ಯಾಹ್ನ 12 – ಬೆಳ್ಮಣ್ ಸಮೀಪದ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಹಾಗೂ ನಾಗಶಿಲಾ ಪ್ರತಿಷ್ಠಾಪನೆ, 2 – ಉಚ್ಚಿಲ ಸೋಮೇಶ್ವರ ರೆಹಮಾನಿಯಾ ಜುಮಾ ಮಸೀದಿಯ ಶಾಲಾ ಕಟ್ಟಡ ಉದ್ಘಾಟನೆ, ಸಂಜೆ 5 -ಶಿವಭಾಗ್ ಯೋಗ ಕುಟೀರದಲ್ಲಿ ಯೋಗ ಕಾರ್ಯಕ್ರಮ, ಸಂಜೆ 7.30 – ಮಲ್ಲಿಕಟ್ಟೆ ಲಯನ್ಸ್ ಮಂದಿರದಲ್ಲಿ ಲಯನ್ಸ್ ಕ್ಲಬ್ ಸಭೆಯಲ್ಲಿ ಸಚಿವರು ಪಾಲ್ಗೊಳ್ಳುವರು.

error: Content is protected !!
Scroll to Top