(ನ್ಯೂಸ್ ಕಡಬ) newskadaba.com, ಸೆ.01:ರಾಮನಗರದಲ್ಲಿ ಪೊಲೀಸ್ ಇಲಾಖೆ ಭಾರಿ ಕಾರ್ಯಾಚರಣೆ ನಡೆಸಿ, ನಕಲಿ ನೋಟು ಮುದ್ರಣ ಜಾಲವನ್ನು ಭೇದಿಸಿದೆ. ಈ ಸಂಬಂಧ ಏಳು ಜನರನ್ನು ಕೈದು ಮಾಡಲಾಗಿದೆ.
ರಾಮನಗರ ಪಟ್ಟಣದ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸದಾಗಿ ನಿರ್ಮಿಸಲಾದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಸಂತೋಷ್ (35), ಸತೀಶ್ (36), ಸಂಪತ್ (33), ರಾಜೇಶ್ (34), ರೇಣುಕ ರಾಜ್ (31), ಶಿವರಾಜ್ (42) ಮತ್ತು ಗೋವಿಂದರಾಜ್ (50).ಸುಮಾರು ₹5 ಲಕ್ಷ ಮೌಲ್ಯದ ನಕಲಿ ನೋಟುಗಳು, ಮುದ್ರಣ ಹಂತದಲ್ಲಿದ್ದ ಕಾಗದದ ಕಟ್ಟುಗಳು ಹಾಗೂ ನೋಟು ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳು.
ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








