ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಆಯ್ಕೆಯಾದ ಕಡಬದ ಮಿಥಿನ್ ಕುಮಾರ್ ► ಪ್ರೋ ಕಬಡ್ಡಿ ಟೂರ್ನಿಗೆ ಕಡಬ ತಾಲೂಕಿನ ಏಕೈಕ ಆಟಗಾರ ಮಿಥಿನ್

(ನ್ಯೂಸ್ ಕಡಬ) newskadaba.com ಕಡಬ, ಮೇ.30. ಮುಂಬರುವ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಪರ ಆಡಲು ಕಡಬ ತಾಲೂಕಿನ ಯುವಕನೋರ್ವ ಆಯ್ಕೆಯಾಗಿದ್ದಾರೆ.

 

ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಅನ್ನಯ್ಯ – ಪ್ರೇಮ ದಂಪತಿಯ ಪುತ್ರನಾಗಿ 1998 ಡಿಸೆಂಬರ್ 13 ರಂದು ಜನಿಸಿರುವ ಮಿಥಿನ್ ಕುಮಾರ್ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ವ್ಯಾಸಂಗವನ್ನು ಪೂರೈಸಿರುತ್ತಾರೆ. ಪ್ರೋ ಕಬಡ್ಡಿ 2018 ರಲ್ಲಿ ಜೂನಿಯರ್ ರಾಷ್ಟ್ರೀಯ ಆಟಗಾರರಾಗಿ ಬೆಂಗಾಲ್ ವಾರಿಯರ್ಸ್ ಪರ ಆಡಲಿದ್ದಾರೆ. ಕಳೆದ ತಿಂಗಳು‌ ಮುಂಬೈನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಇವರನ್ನು ಮೇ 30 ರಂದು ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಆಯ್ಕೆ ಮಾಡಲಾಗಿದೆ.

error: Content is protected !!

Join the Group

Join WhatsApp Group