ರೈತರು ಯಾರೂ ಆತುರದ ನಿರ್ಧಾರ ತೆಗೆದುಕೊಳ್ಳದೆ ಸಂಯಮದಿಂದಿರಿ ► ಸಾಲಮನ್ನಾದ ಸುಳಿವು ನೀಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ

(ನ್ಯೂಸ್ ಕಡಬ) newskadaba.com ಮೈಸೂರು, ಮೇ.29. ರೈತರು ಯಾರೂ ಆತುರದ‌ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸಂಯಮದಿಂದ ಇರುವಂತೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಜಾತ್ಯಾತೀತ ತತ್ವಗಳು ಉಳಿಯಬೇಕೆಂಬ ನಿಲುವಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದ್ದು, ಎರಡೂ ಪಕ್ಷಗಳ ಮುಖಂಡರು ಸಾಲ‌ಮನ್ನಾ ವಿಚಾರವಾಗಿ ಸರಿಯಾದ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಒಂದು ವಾರಗಳ ಕಾಲ ಕಾಯುವಂತೆ ರೈತರಲ್ಲಿ ಮನವಿ ಮಾಡಿದ್ದು, ಈ ಮೂಲಕ ಸಾಲಮನ್ನಾದ ಸುಳಿವನ್ನು ನೀಡಿದ್ದಾರೆ.

Scroll to Top