ಉಡುಪಿ: ತುಳು ರಂಗಭೂಮಿ ಕಲಾವಿದ,ಕಾಪು ರಂಗತರಂಗ ನಾಟಕ ತಂಡದ ಸ್ಥಾಪಕ ಸದಸ್ಯ ಸುಜಿತ್‌ ಶೆಟ್ಟಿ ಪಾದೂರು ವಿಧಿವಶ



(ನ್ಯೂಸ್‌ ಕಡಬ) newskadaba.comwಎ.03: ತುಳು ರಂಗಭೂಮಿ ಕಲಾವಿದ , ಕಾಪು ರಂಗ ತರಂಗ ಕಲಾವಿದರು ತಂಡದ ಸ್ಥಾಪಕ ಸದಸ್ಯ, ಮಾಜಿ ಸಂಚಾಲಕ, ಸುಜಿತ್‌ ಶೆಟ್ಟಿ ಪಾದೂರು (54) ಏಪ್ರಿಲ್ 3, ಶುಕ್ರವಾರ ನಿಧನರಾಗಿದ್ದಾರೆ.







ಪ್ರಸಿದ್ಧ ರಂಗ ಕಲಾವಿದರಾಗಿದ್ದ ಅವರು ಹಾಸ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಪಾತ್ರಗಳನ್ನು ಅತ್ಯಂತ ಯಶಸ್ಸಿಯಾಗಿ ನಿಭಾಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಕೆ. ಲೀಲಾಧರ ಶೆಟ್ಟಿ ಅವರ ಸಾರಥ್ಯದ ಕಾಪು ರಂಗ ತರಂಗ ಕಲಾವಿದರು ತಂಡದ ಸ್ಥಾಪಕ ಸದಸ್ಯರಾಗಿ , ತಂಡದ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನು ಅತ್ಯಂತ ಯಶಸ್ಸಿಯಾಗಿ ನಿಭಾಯಿಸಿದ್ದರು. ಕೆಲವು ಸಮಯಗಳಿಂದ ಅನಾರೋಗ್ಯದಿಂದ ನಟನೆಯಿಂದ ದೂರ ಉಳಿದಿದ್ದರು.






ಸುಜಿತ್‌ ಶೆಟ್ಟಿ ಅವರ ನಿಧನಕ್ಕೆ ಕಾಪು ರಂಗ ತರಂಗ ಕಲಾವಿದರ ತಂಡ , ರಂಗಭೂಮಿಯ ಕಲಾವಿದರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ಕಾಪು ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

error: Content is protected !!
Scroll to Top