(ನ್ಯೂಸ್ ಕಡಬ) newskadaba.com, ಮಾ.23 ಬ್ರಹ್ಮ ಕಲಶೋತ್ಸವದ ಹೊಸ್ತಿಲಲ್ಲಿರುವ ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಸಮಿತಿ ಸಭೆ ಮಾ. 22ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ ಪಂಜಿಗಾರು, ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಎರಡೂ ಸಮಿತಿಗಳ ಪದಾಧಿಕಾರಿಗಳಾದ ಆರ್.ಕೆ. ಭಟ್ ಕುರುಂಬುಡೇಲು, ಕುಶಾಲಪ್ಪ ಗೌಡ ಮಣಿಮಜಲು, ಜಗದೀಶ್ ರೈ ತಂಬಿನಮಕ್ಕಿ, ತೀರ್ಥರಾಮ ಮಣಿಮಜಲು, ಮಿಥುನ್ ಶೆಣೈ ಬೆಳ್ಳಾರೆ, ಚೆನ್ನಪ್ಪ ಗೌಡ ಕಜೆಮೂಲೆ, ಚಂದ್ರಶೇಖರ ಪನ್ನೆ, ರಾಧಾಕೃಷ್ಣ ಕುಲಾಲ್ ಬಸ್ತಿಗುಡ್ಡೆ, ಪುರಂದರ ಗೌಡ ಸಪ್ತಗಿರಿ, ನಾಗಪ್ಪ ಕುಲಾಲ್ ಬಸ್ತಿಗುಡ್ಡೆ, ಕ್ಯಾ. ಸುಧಾನಂದ ಮಣಿಯಾಣಿ ಪೆರುವಾಜೆ, ಉದಯಶಂಕರ್ ಭಟ್ ವಾಣಿನಗರ, ಹರೀಶ್ ಗೌರಿಪುರಂ, ಸಂಜೀವ ಕುಲಾಲ್ ಗೌರಿಪುರಂ, ರಮೇಶ್ ನಾಯಕ್ ಪನ್ನೆ, ವಾಸುದೇವ ಗೌಡ ಬಸ್ತಿಗುಡ್ಡೆ, ಬಾಲಕೃಷ್ಣ ಬೊಳ್ಳೂರು, ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು









