ಪುತ್ತೂರಿನಲ್ಲಿ ಮತಧರ್ಮ ಮರೆತು ಹಸುಗೂಸಿಗೆ ಆಸರೆಯಾದ ಮಹಾತಾಯಿ ಚಂದ್ರಪ್ರಭಾ ಗೌಡ!



(ನ್ಯೂಸ್ಕಡಬ) newskadaba.com,  .04 ಪುತ್ತೂರು: ನಗರದಲ್ಲೊಂದು ಭೀಕರ ಅಪಘಾತ, ನಜ್ಜುಗುಜ್ಜಾದ ಆಟೋ ರಿಕ್ಷಾ, ಗಂಭೀರ ಗಾಯಗೊಂಡ ಆರು ಜನ. ಒಂದು ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ್ರೆ, ಮತ್ತೊಂದು ಜೀವ ಆಸ್ಪತ್ರೆಯಲ್ಲಿ ನರಳಾಡಿ ಜೀವ ಬಿಟ್ಟಿತ್ತು. ಕಾರಿನ ದಾಳಿಗೆ ಸಿಲುಕಿದ ರಿಕ್ಷಾ ನಜ್ಜುಗುಜ್ಜಾಗಿ ಒಳಗಿದ್ದ ಕೆಲವರು ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ಇವೆಲ್ಲದರ ನಡುವೆ, ಮಾತೃಹೃದಯದ ಮಹಾತ್ಕಾರ್ಯಕ್ಕೆ ಜನರು ಶಾಭಾಶ್‌ ಎನ್ನುತ್ತಿದ್ದಾರೆ..





ಘಟನೆ : ಅ.31ರಂದು ಶುಕ್ರವಾರ ಸಂಜೆ 4.30ಕ್ಕೆ ಪುತ್ತೂರು ಹೊರವಲಯದ ಪರ್ಪುಂಜ ಬಳಿ ರಿಕ್ಷಾ- ಕಾರು ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ನಾಲ್ಕೂವರೆ ವರ್ಷ ಪ್ರಾಯದ ಮಗು ಷಜ್ವಾ ಫಾತಿಮಾ ಸ್ಥಳದಲ್ಲೇ ಮೃತಪಟ್ಟಿದ್ದಳು. ಆಕೆಯ ತಂದೆ ರಿಕ್ಷಾ ಚಾಲಕ ಹನೀಫ್‌ ಬನ್ನೂರು, ಅವರ ತಾಯಿ, ಪತ್ನಿ, ಇನ್ನೊಂದು ಮಗು, ನಾದಿನಿ ಮತ್ತು ನಾದಿನಿಯ 3 ತಿಂಗಳ ಹಸುಳೆ ಗಂಭೀರ ಗಾಯಗೊಂಡಿದ್ದರು. ಷಜ್ವಾ ಫಾತಿಮಾ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗುವಿನ ಅಜ್ಜಿ ಜುಲೈಕಾ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.






ಇಬ್ಬರನ್ನು ಮಂಗಳೂರಿಗೆ ಕಳಿಸಿದ್ದರೆ, ಉಳಿದವರನ್ನು ಸಂಪ್ಯದ ಆಸ್ಪತ್ರೆಗೆ ತರಲಾಗಿತ್ತು. ಮನೆ ಸದಸ್ಯರ ಜತೆ ಕಟೀಲು ದೇಗುಲಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಸಾಲ್ಮರ ನಿವಾಸಿ ಚಂದ್ರಪ್ರಭಾ ಗೌಡ, ಸುದ್ದಿ ಕೇಳಿ ತಕ್ಷಣ ಕಟೀಲು ಪ್ರವಾಸ ರದ್ದು ಮಾಡಿ ಅಸ್ಪತ್ರೆಗೆ ಧಾವಿಸಿದರು. ಅಳುತ್ತಿದ್ದ 3 ತಿಂಗಳ ಹಸುಳೆ ಕಂಡು ದಿಗ್ಭ್ರಾಂತಗೊಂಡರು. ಸಿ.ಟಿ. ಸ್ಕ್ಯಾನ್‌ ಮಾಡಿಸುವ ಅನಿವಾರ್ಯತೆಯಿತ್ತು. ಆಸ್ಪತ್ರೆಯಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಕಂಡ ಚಂದ್ರಪ್ರಭಾ, ಮಗುವಿನ ತಾಯಿ ಐಸಿಯುನಲ್ಲಿರುವುದನ್ನು ಗಮನಿಸಿ ತಕ್ಷಣ ಕಾರ್ಯಪ್ರವೃತ್ತರಾದರು.

error: Content is protected !!
Scroll to Top