ಕುಂತೂರು: ಅಕ್ರಮ ಮರಳು ಅಡ್ಡೆಗೆ ದಾಳಿ ► ಟಿಪ್ಪರ್, ಬೋಟ್ ಸಹಿತ ಓರ್ವ ವಶಕ್ಕೆ

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ಕಡಬ, ಎ.12. ಅಕ್ರಮ ಮರಳು ಅಡ್ಡೆಗೆ ಡಿಸಿಬಿ ಹಾಗೂ ಕಡಬ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಮರಳು ಸಹಿತ ಟಿಪ್ಪರ್ ಹಾಗೂ ಬೋಟೊಂದನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ.

ಇಲ್ಲಿನ ಪೆರಾಬೆ ಗ್ರಾಮದ ಕುಂಟ್ಯಾನ ಎಂಬಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಡಿಸಿಬಿ ಇನ್ಸ್‌ಪೆಕ್ಟರ್ ಗಂಗೀರೆಡ್ಡಿ ಹಾಗೂ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಮರಳು ತುಂಬಿಸಲಾಗಿದ್ದ ಟಿಪ್ಪರ್ ಹಾಗೂ ಬೋಟೊಂದನ್ನು ವಶಪಡಿಸಿಕೊಂಡಿದ್ದಾರೆ‌. ಟಿಪ್ಪರ್ ಚಾಲಕನನ್ನು ಬಂಧಿಸಲಾಗಿದ್ದು, ಇನ್ನುಳೊದ ಆರೋಪಿಗಳು ಪರಾರಿಯಾಗಿದ್ದಾರೆ.

Also Read  ಕಡ್ಯ-ಕೊಣಾಜೆ ಗ್ರಾಮ ಪಂಚಾಯತ್ ನಲ್ಲಿ ➤ 73ನೇ ವರ್ಷ ದ ಸ್ವಾತಂತ್ರ್ಯೊತ್ವವ ದಿನಾಚರಣೆ

error: Content is protected !!
Scroll to Top