ಜೀವಬೆದರಿಕೆ ಒಡ್ಡಿದ ಆರೋಪಿಗಳು ಖುಲಾಸೆ..!



(ನ್ಯೂಸ್ ಕಡಬ) newskadaba.com ಜು. 07. ಜೀವಬೆದರಿಕೆ ಆರೋಪದಡಿ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಆರೋಪಿಗಳನ್ನು ಆರೋಪ ಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.







ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ನಿವಾಸಿಗಳಾದ ಉದಯ ಪ್ರಕಾಶ್, ಶಿವರಾಮ ಗೌಡ, ನಾಗಪ್ಪ ಗೌಡ, ತಾರನಾಥ ಗೌಡ ಎಂಬವರು 2019 ಮಾರ್ಚ್ 29ರಂದು ಜೀವ ಬೆದರಿಕೆ ಒಡ್ಡಿರುವುದಾಗಿ ಕೊಳ್ತಿಗೆ ಗ್ರಾಮದ ಬಾಳೆಪಡು ಚಂದ್ರಶೇಖರ ಅವರು ದೂರು ನೀಡಿದ್ದರು.






ಇದರ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪಿಗಳ ವಿರುದ್ದವಾಗಿ ಸರಕಾರಿ ಅಭಿಯೋಜಕರು ಸಲ್ಲಿಸದ ಸಾಕ್ಷಿಯು ವಿಫಲವಾಗಿದೆ ಎಂದು ತೀರ್ಮಾನಿಸಿ ಸುಳ್ಯದ ಕಿರಿಯ ನ್ಯಾಯಾಲಯದ ನ್ಯಾಯಾಧೀಶೆ ಅರ್ಪಿತಾ ಆರೋಪಿಗಳನ್ನು ಆರೋಪದಿಂದ ದೋಷಮುಕ್ತಗೊಳಿಸಿದ್ದಾರೆ.

error: Content is protected !!
Scroll to Top