ಗುಂಡುಕಲ್ಲು: ಅಪರಿಚಿತ ವಾಹನ ಬೈಕಿಗೆ ಢಿಕ್ಕಿ ► ಬೆಳ್ತಂಗಡಿ ನೀತಿ ಅಧ್ಯಕ್ಷ ಅನೀಶ್ ರಿಗೆ ಪಿತೃ ವಿಯೋಗ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.07. ಅಪರಿಚಿತ ವಾಹನವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಮೃತಪಟ್ಟ ಘಟನೆ ಮೂಡುಬಿದಿರೆ ಸಮೀಪದ ಗುಂಡುಕಲ್ಲು ಎಂಬಲ್ಲಿ ಗುರುವಾರದಂದು ನಡೆದಿದೆ.

ಘಟನೆಯಲ್ಲಿ ನೀತಿ ತಂಡದ ಬೆಳ್ತಂಗಡಿ ಅಧ್ಯಕ್ಷರಾದ ಅನೀಶ್ ಎಂಬವರ ತಂದೆ ಮೃತಪಟ್ಟಿದ್ದು, ಇವರು ಚಲಾಯಿಸುತ್ತಿದ್ದ ಬೈಕಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಮೃತರ ಅಂತ್ಯಸಂಸ್ಕಾರ ಶುಕ್ರವಾರ ಸಂಜೆ 4:00 ಗಂಟೆಗೆ ಬೆಳ್ತಂಗಡಿ ತಾಲೂಕಿನ ಅಲದಂಗಡಿ ಸೈಂಟ್ ಪೀಟರ್ಸ್ ಕ್ಲೇವರ್ಸ್ ಚರ್ಚ್ ನಲ್ಲಿ ನಡೆಯಲಿದೆ ಎನ್ನಲಾಗಿದೆ. ಮೃತರ ಕುಟುಂಬಕ್ಕೆ ರಾಜ್ಯ ನೀತಿ ತಂಡವು ಶೋಕವನ್ನು ವ್ಯಕ್ತಪಡಿಸಿದೆ.

error: Content is protected !!

Join the Group

Join WhatsApp Group