(ನ್ಯೂಸ್ ಕಡಬ) newskadaba.com ಜೂ.17. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪೂರ್ಲಡ್ಕ ಸಂಕದ ಬಳಿ ರಸ್ತೆಗೆ ಮುಳ್ಳಿನ ಪೊದೆಗಳು ಆವರಿಸಿ ಸಂಚಾರಕ್ಕೆ ಕಷ್ಟ ಅಗುದನ್ನು ಗಮನಿಸಿ ಕೆದಿಲ ಸಂಘದ ಸದಸ್ಯರಾದ ಜಗದೀಶ, ಶೀನಪ್ಪ, ವೆಂಕಪ್ಪ ಹಾಗೂ ಗಿರೀಶ ಎಂಬವರು ಕಡಿದು ಸ್ವಚ್ಛ ಮಾಡಿರುತ್ತಾರೆ.
ಕೆದಿಲ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರು ಪ್ರತಿ ವರ್ಷವೂ ಆಪತ್ತು ಬರುವ ಮೊದಲೇ ಎಚ್ಚತ್ತುಕೊಂಡು ಇಂತಹ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿರುತ್ತಾರೆ.