
(ನ್ಯೂಸ್ ಕಡಬ) newskadaba.com ಜೂ. 18. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಡಬ ತಾಲೂಕು ಬಿಳಿನೆಲೆ ವಲಯದ 102 ನೆಕ್ಕಿಲಾಡಿ ಕಾರ್ಯಕ್ಷೇತ್ರದ ನವದುರ್ಗಾ ಸ್ವ-ಸಹಾಯ ಸಂಘಕ್ಕೆ ಲಾಭಾಂಶ ವಿತರಣೆ ನಡೆಯಿತು.

ಸ್ವಸಹಾಯ ಸಂಘಗಳು ತಮ್ಮ ಸಂಘದ ಸದಸ್ಶರ ಸರ್ವತೋಮುಖ ಅಭಿವೃಧ್ಧಿಗಾಗಿ ರಾಷ್ಟ್ರೀಕೃತ ಬ್ಶಾಂಕ್ ಗಳ ಮೂಲಕ ಆರ್ಥಿಕ ಸಹಾಯವನ್ನು ಅಪೇಕ್ಷಿಸುತ್ತಿದೆ. ಆರ್ಥಿಕ ಅಭಿವೃಧ್ಧಿಗೆ ಪೂರಕವಾಗಿ ಪ್ರಗತಿನಿಧಿ ಹಣವನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಭರವಸೆಯೊಂದಿಗೆ ಬ್ಯಾಂಕ್ ಗಳು ಸ್ವಸಹಾಯ ಸಂಘಕ್ಕೆ ಆರ್ಥಿಕ ಸಹಕಾರವನ್ನು ನೀಡುತ್ತಿದ್ದು, ಸಂಘಗಳಲ್ಲಿ ಸದಸ್ಯರುಗಳು ಮಾಡಿದ ವಾರದ ಉಳಿತಾಯ ಹಾಗೂ ಪ್ರಗತಿನಿಧಿ ವ್ಶವಹಾರದ ಸಮರ್ಪಕ ಮರುಪಾವತಿಗೆ ತ್ರೈವಾರ್ಷಿಕ ಲೆಕ್ಕಾಚಾರದೊಂದಿಗೆ ಲಾಭಾಂಶವನ್ನು ವಿತರಿಸಲಾಗುತ್ತಿದೆ. ಅದರಂತೆ ನೆಕ್ಕಿಲಾಡಿ ಕಾರ್ಯಕ್ಷೇತ್ರದ ನವದುರ್ಗಾ ಸಂಘಕ್ಕೆ ತ್ರೈವಾರ್ಷಿಕ ಲಾಭದ ಮೊತ್ತ ಸದಸ್ಯರಿಗೆ ರೂ. 3,357 ರಂತೆ ಒಟ್ಟು 43,641 ರೂಗಳನ್ನು ಹತ್ತು ಸದಸ್ಯರಿಗೆ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ರವರು ವಿತರಿಸಿ ಸಂಘದ ಗುಣಮಟ್ಟ ವು ಉತ್ತಮವಾಗಿದೆ ಎಂದು ಪ್ರಶಂಶಿಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸೇವಾಪ್ರತಿನಿಧಿ ದಿನೇಶ್ ಉಪಸ್ಥಿತರಿದ್ದರು.


