ಸಂಸತ್ತು ಬಜೆಟ್ ಅಧಿವೇಶನ ಎರಡನೇ ಹಂತ ಇಂದು ಆರಂಭ: ವಕ್ಫ್ ಮಸೂದೆ, ಕ್ಷೇತ್ರ ವಿಂಗಡಣೆ ವಿರುದ್ಧ ತರಾಟೆಗೆ ಪ್ರತಿಪಕ್ಷಗಳು ಸಜ್ಜು
(ನ್ಯೂಸ್ ಕಡಬ) newskadaba.com ಮಾ. 10 ನವದೆಹಲಿ: ಮತದಾರರ ಪಟ್ಟಿಗಳಲ್ಲಿ ಅಕ್ರಮ ನಡೆದಿರುವ ಆರೋಪ, ವಕ್ಫ್ ಮಸೂದೆ, ಕ್ಷೇತ್ರ ವಿಂಗಡಣೆ ಮತ್ತು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತದ ಸುಂಕದ ಹಕ್ಕುಗಳ ವಿಷಯಗಳ ಕುರಿತು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿರುವುದರ ಮಧ್ಯೆ ಇಂದು ಸೋಮವಾರದಿಂದ ಸಂಸತ್ತು ಬಜೆಟ್ ಅಧಿವೇಶನ ಎರಡನೇ ಹಂತ ಆರಂಭವಾಗುತ್ತಿದೆ. ಕ್ಷೇತ್ರ ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ನಡುವಿನ ತಿಕ್ಕಾಟ ಸಂಸತ್ತಿನಲ್ಲಿ ಪ್ರತಿಧ್ವನಿಸುವ ಸೂಚನೆ ಸಿಕ್ಕಿದೆ. ತಮಿಳು ನಾಡಿನ […]

