rape

ದೇಶವನ್ನು ಬೆಚ್ಚಿಬೀಳಿಸಿದ್ದ ಪಶುವೈದ್ಯೆಯ ಅತ್ಯಾಚಾರಗೈದು ಜೀವಂತ ಸುಟ್ಟ ಪ್ರಕರಣ ➤ ನಾಲ್ವರು ಆರೋಪಿಗಳ ಎನ್‌ಕೌಂಟರ್‌

(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ.06. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪಶುವೈದ್ಯೆಯನ್ನು ಅತ್ಯಾಚಾರಗೈದು ಜೀವಂತ ಸುಟ್ಟಿದ್ದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ. ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಎಂಬವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಶುಕ್ರವಾರ ಬೆಳಗ್ಗಿನ ಜಾವ ಎನ್‌ಕೌಂಟರ್‌ ನಡೆಸಿದ್ದಾರೆ. ಹೈದರಾಬಾದ್ ಹೊರವಲಯದ ಷಾದ್ ನಗರದಲ್ಲಿ ಎನ್‌ಕೌಂಟರ್ ನಡೆದಿದೆ ಎನ್ನಲಾಗಿದ್ದು, ಎನ್‌ಕೌಂಟರ್‌ ಕಾರ್ಯಾಚರಣೆಯನ್ನು ಕರ್ನಾಟಕದ ಗದಗ್ ಜಿಲ್ಲೆಯ ಅಧಿಕಾರಿಯೋರ್ವರು ನಡೆಸಿದ್ದಾರೆ. ಕನ್ನಡಿಗರಾದ ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಸಜ್ಜನ್ […]

ದೇಶವನ್ನು ಬೆಚ್ಚಿಬೀಳಿಸಿದ್ದ ಪಶುವೈದ್ಯೆಯ ಅತ್ಯಾಚಾರಗೈದು ಜೀವಂತ ಸುಟ್ಟ ಪ್ರಕರಣ ➤ ನಾಲ್ವರು ಆರೋಪಿಗಳ ಎನ್‌ಕೌಂಟರ್‌ Read More »

ರಾಷ್ಟ್ರೀಯ ನ್ಯೂಸ್

ಕಡಬ: ಬಲಾತ್ಕಾರವಾಗಿ ಅತ್ಯಾಚಾರಗೈದುದರಿಂದ ಗರ್ಭಿಣಿಯಾದ 13ರ ಹರೆಯದ ಬಾಲಕಿ ➤ ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.16. ಅಪ್ರಾಪ್ತ ವಯಸ್ಸಿನ ಬಾಲಕಿಗೆ ಬಲಾತ್ಕಾರದಿಂದ ಅತ್ಯಾಚಾರಗೈದುದರಿಂದ ಬಾಲಕಿ ಇದೀಗ ಗರ್ಭಿಣಿಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜದಿಂದ ತಡವಾಗಿ ಬೆಳಕಿಗೆ ಬಂದಿದೆ. ಕಡಬ ತಾಲೂಕು ರಾಮಕುಂಜ ಗ್ರಾಮದ ಮಾರಂಗ ನಿವಾಸಿ ಬಾಬು ಎಂಬವರ ಪುತ್ರ ರಮೇಶ(20) ಎಂಬಾತ ಕಡಬ ಠಾಣಾ ವ್ಯಾಪ್ತಿಯ13 ರ ಹರೆಯದ ಬಾಲಕಿಯ ಮೇಲೆ ಸುಮಾರು ಎರಡು ತಿಂಗಳ ಹಿಂದೆ ಅತ್ಯಾಚಾರ ಎಸಗಿ, ಈ ವಿಚಾರವನ್ನು ಹೊರಗಡೆ ತಿಳಿಸದಂತೆ ಜೀವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಬಾಲಕಿಯು ಇದೀಗ

ಕಡಬ: ಬಲಾತ್ಕಾರವಾಗಿ ಅತ್ಯಾಚಾರಗೈದುದರಿಂದ ಗರ್ಭಿಣಿಯಾದ 13ರ ಹರೆಯದ ಬಾಲಕಿ ➤ ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ Read More »

ಕರಾವಳಿ

ಬೆಳ್ಳಾರೆ: ಹಾಡುಹಗಲೇ ಬಲಾತ್ಕಾರವಾಗಿ ಸಾಮೂಹಿಕ ಅತ್ಯಾಚಾರ ► ರಿಕ್ಷಾ ಚಾಲಕರು ಸೇರಿದಂತೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.27. ಠಾಣಾ ವ್ಯಾಪ್ತಿಯ ಶೇಣಿಯಲ್ಲಿ ಯುವತಿಯೋರ್ವಳನ್ನು ಬಲವಂತದಿಂದ ಕರೆದೊಯ್ದು ಸರಣಿ ಅತ್ಯಾಚಾರಗೈದ ಪ್ರಕರಣದ ಮೂವರು ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಮರ ಮೂಡ್ನೂರು ಗ್ರಾಮದ ಕುಡುಂಬಿಲ ನಿವಾಸಿ ಕುಂಇಪ್ಪ ನಾಯ್ಕ ಎಂಬವರ ಪುತ್ರ ಜಯಪ್ರಕಾಶ್ (25), ಚೊಕ್ಕಾಡಿಯ ನೇಣಾರು ನಿವಾಸಿ ಕೂಸಪ್ಪ ನಾಯ್ಕ ಎಂಬವರ ಪುತ್ರ ರಂಜಿತ್ (20), ಕುಕ್ಕುಜಡ್ಕದ ನೇರ್ಲಡ್ಕ ನಿವಾಸಿ ಗುಡ್ಡಪ್ಪನಾಯ್ಕ ಎಂಬವರ ಪುತ್ರ ರವೀಂದ್ರ (35) ಎಂದು ಗುರುತಿಸಲಾಗಿದೆ. ಆರೋಪಿಗಳು ಸೋಮವಾರ ಸಂಜೆ ಹಾಲು

ಬೆಳ್ಳಾರೆ: ಹಾಡುಹಗಲೇ ಬಲಾತ್ಕಾರವಾಗಿ ಸಾಮೂಹಿಕ ಅತ್ಯಾಚಾರ ► ರಿಕ್ಷಾ ಚಾಲಕರು ಸೇರಿದಂತೆ ಮೂವರ ಬಂಧನ Read More »

ಕರಾವಳಿ

ಸಬ್ ಇನ್ಸ್ ಪೆಕ್ಟರ್ ಮಗಳ ಶವ ಸೂಟ್ಕೇಸಲ್ಲಿ ಪತ್ತೆ ►ಹತ್ಯೆ ಮಾಡಿದವರು ಯಾರು ಗೊತ್ತೆ…???

(ನ್ಯೂಸ್ ಕಡಬ)newskadaba.com ಬೆಳಗಾವಿ. ಸೆ.7, ನಗರದ ಭೂತರಾಮನಹಟ್ಟಿ ಬಳಿಯ ಮ್ಯಾನ್‍ಹೋಲ್‍ನಲ್ಲಿ ಯುವತಿಯ ಶವವೊಂದು ಸೂಟ್‍ಕೇಸ್‍ನಲ್ಲಿ ಪತ್ತೆಯಾಗಿದೆ. ಮುಂಬೈ ಮೂಲದ ಅಂಕಿತಾ ಕನೋಜಿಯಾ (23 ವರ್ಷ) ಕೊಲೆಯಾದ ಯುವತಿ. ಮೂಲತಃ ಮಾಹಾರಾಷ್ಟ್ರದ ನಾಗಪುರ ನಗರದವರಾದ ಅಂಕಿತಾ ಸಬ್ ಇನ್ಸ್ ಪೆಕ್ಟರ್ ಮಗಳು ಎಂದು ಹೇಳಲಾಗುತ್ತಿದೆ. ಮುಂಬೈನಲ್ಲಿ ಸೆಪ್ಟೆಂಬರ್ 4 ರಂದು ತನ್ನಿಬ್ಬರು ಸ್ನೇಹಿತರೊಂದಿಗೆ ಪಾರ್ಟಿಗೆಂದು ಹೋದ ವೇಳೆ ಸ್ನೇಹಿತರ ಮಧ್ಯೆ ಜಗಳ ನಡೆದು ಇಬ್ಬರು ಸ್ನೇಹಿತರು ಸೇರಿ ಅಂಕಿತಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ನಂತರ ಸ್ನೇಹಿತರು ಸೂಟ್

ಸಬ್ ಇನ್ಸ್ ಪೆಕ್ಟರ್ ಮಗಳ ಶವ ಸೂಟ್ಕೇಸಲ್ಲಿ ಪತ್ತೆ ►ಹತ್ಯೆ ಮಾಡಿದವರು ಯಾರು ಗೊತ್ತೆ…??? Read More »

ಕರ್ನಾಟಕ

9 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ► ರಾಜ್ಯದಲ್ಲೊಂದು ಭೀಕರ ಅಮಾನುಷ ಘಟನೆ

(ನ್ಯೂಸ್ ಕಡಬ ) newskadaba.com ಚಿಕ್ಕಬಳ್ಳಾಪುರ, ಆ 24, ಮನೆಯಲ್ಲಿ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿರುವ ಕಾಮುಕರು, ಬಾಲಕಿ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿರುವ ಅಮಾನುಷ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗ್ರಾಮದ 9 ವರ್ಷದ ಬಾಲಕಿಯನ್ನು ಅಪಹರಿಸಿರುವ ದುಷ್ಕರ್ಮಿಗಳು, ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮನೆಯಲ್ಲಿ ಮಲಗಿದ್ದ ಬಾಲಕಿ ನಾಪತ್ತೆಯಾದ ನಂತರ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ರೂ

9 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ► ರಾಜ್ಯದಲ್ಲೊಂದು ಭೀಕರ ಅಮಾನುಷ ಘಟನೆ Read More »

ಕರ್ನಾಟಕ
Scroll to Top