newskadaba

ಮೆಕ್ಸಿಕೋ ಭಾರೀ ಭೂಕಂಪ ► ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆ

 (ನ್ಯೂಸ್ ಕಡಬ) newskadaba.com ಮೆಕ್ಸಿಕೋ, ಸೆ.20, ಮಂಗಳವಾರದಂದು ಸತತ ಎರಡನೇ ಬಾರಿಗೆ ಸಂಭವಿಸಿದ ಭಾರೀ ಭೂಕಂಪದಲ್ಲಿ ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. 51 ಕಿಲೋ ಮೀಟರ್ ಆಳದ ಭೂಗರ್ಭದಲ್ಲಿ ಘಟಿಸಿರುವ ಕಂಪನಕ್ಕೆ ಸುಮಾರು 49 ಗಗನಚುಂಬಿ ಕಟ್ಟಡಗಳು ಧರೆಗೆ ಉರುಳಿವೆ ಎಂದು ವರದಿಯಾಗಿದೆ. ಕಂಪನ ಆಗ್ತಿದಂತೆ ಜನರು ಕಟ್ಟಡಗಳಿಂದ ಹೊರಗೆ ಓಡಿಹೋಗಿದ್ದಾರೆ. ಆದರೆ ಅವರ ಮೇಲೂ ಕಟ್ಟಡಗಳು ಉರುಳಿಬಿದ್ದಿವೆ. ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳು ಜಖಂ ಆಗಿವೆ. ವಿಚಿತ್ರ ಅಂದ್ರೆ ಇದೇ […]

ಮೆಕ್ಸಿಕೋ ಭಾರೀ ಭೂಕಂಪ ► ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಆಧಾರ್ ಜೋಡಣೆ ► ಡೆಡ್ ಲೈನ್ ಯಾವಾಗ ಗೊತ್ತೆ…???

(ನ್ಯೂಸ್ ಕಡಬ) newskadaba.com ಕಡಬ, ಸೆ.20, ಕೇಂದ್ರ ಸರ್ಕಾರ ಈಗಾಗಲೆ ಬ್ಯಾಂಕ್, ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಸಾಮಾಜಿಕ ಭದ್ರತಾ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಹೀಗಾಗಿ ಇಲ್ಲಿ ಯಾವೆಲ್ಲ ಯೋಜನೆಗಳಿಗೆ ಕಡ್ಡಾಯ ಮಾಡಿದೆ ಮತ್ತು ಆಧಾರ್ ನಂಬರ್ ಜೋಡಿಸಲು ನೀಡಿರುವ ಕೊನೆಯ ದಿನಾಂಕ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಪಾನ್ ಲಿಂಕ್: ಕೇಂದ್ರಿಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಈ ಹಿಂದೆ ಪಾನ್ ಗೆ ಆಧಾರ್ ಲಿಂಕ್ ಮಾಡಲು ಆಗಸ್ಟ್ 31 ರಂದು ಕೊನೆಯ ದಿನಾಂಕವನ್ನು ನೀಡಿತ್ತು.

ಆಧಾರ್ ಜೋಡಣೆ ► ಡೆಡ್ ಲೈನ್ ಯಾವಾಗ ಗೊತ್ತೆ…??? Read More »

ಕರ್ನಾಟಕ

3 ಕೆಜಿ ಬೆಳ್ಳಿ ಕದ್ದ ನೇಪಾಳಿಗರು ► ಉಡುಪಿ ಪೊಲೀಸರ ಬಲೆಗೆ..!!!

(ನ್ಯೂಸ್ ಕಡಬ) newskadaba.com ಉಡುಪಿ, ಸೆ.20, ಚಿನ್ನದಂಗಡಿಯಿಂದ ಆಭರಣಗಳನ್ನು ಕಳವು ಮಾಡಿದ್ದ ನೇಪಾಳಿಗರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಐದು ಜನ ಕಳ್ಳರನ್ನು ನೇಪಾಲ ಮೂಲದವರು ಎಂದು ಗುರುತಿಸಲಾಗಿದೆ. ಶಿವಾಸಿಂಗ್ ಬಹುದ್ದೂರ್, ಕಮರ್ ಸಿಂಗ್, ರಮೇಶ್ ಸಿಂಗ್ ಪಾರ್ಕಿ, ಹರ್ಕ್ ಬಹುದ್ದೂರ್ ಸೌದ್, ಮತ್ತು ಪ್ರೇಮ್ ಬಹುದ್ದೂರ್ ಸೌದ್ ಬಂಧಿತ ಆರೋಪಿಗಳು. ಬಂಧಿತರಿಂದ 1 ಲಕ್ಷದ 80 ಸಾವಿರ ಮೌಲ್ಯದ 3 ಕೆಜಿ ಬೆಳ್ಳಿಯ ಕಾಲು ಚೈನ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಂದೂರಿನ ಶೀರೂರು ಗೋಲ್ಡ್ ಪ್ಯಾಲೇಸ್ ಜ್ಯುವೆಲ್ಲರಿಯಲ್ಲಿ

3 ಕೆಜಿ ಬೆಳ್ಳಿ ಕದ್ದ ನೇಪಾಳಿಗರು ► ಉಡುಪಿ ಪೊಲೀಸರ ಬಲೆಗೆ..!!! Read More »

ಕರಾವಳಿ

ಈ ವರ್ಷ ನನ್ನ ಕೊನೆಯ ದಸರಾ ಆಚರಣೆ ► ಜನಾರ್ಧನ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19, ‘ಮುಂದಿನ ನವರಾತ್ರಿ, ಉತ್ಸವವನ್ನು ನಾನು ನೋಡುತ್ತೇನೋ ಇಲ್ಲವೊ ಗೊತ್ತಿಲ್ಲ. ಬಹುಶಃ ಈ ಬಾರಿಯ ದಸರಾ ನನ್ನ ಕೊನೆಯ ಆಚರಣೆ ಆದರೂ ಅಚ್ಚರಿ ಇಲ್ಲ. ಇದು ನನ್ನ ಕೊನೇ ಸುದ್ದಿಗೋಷ್ಠಿ ಇದ್ದರೂ ಇರಬಹುದು’ ಎಂದು ವಿಷಾದಭರಿತ ಮಾತುಗಳನ್ನಾಡಿದವರು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ. ಮಂಗಳೂರಿನ ಕುದ್ರೋಳಿ ಕ್ಷೇತ್ರದಲ್ಲಿ ದಸರಾ ಆಚರಣೆ ಕುರಿತು ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ವಿಷಾದದ ಮಾತನ್ನು ನುಡಿದು ಕೊನೆಗೆ ಮೌನಕ್ಕೆ ಜಾರಿದರು.

ಈ ವರ್ಷ ನನ್ನ ಕೊನೆಯ ದಸರಾ ಆಚರಣೆ ► ಜನಾರ್ಧನ ಪೂಜಾರಿ Read More »

ಕರಾವಳಿ

ರಿಯಲ್ ಸ್ಟಾರ್ ಉಪ್ಪಿ ಜೊತೆ ಅಭಿನಯಿಸಲಿರುವ ಬೇಬಿ ಡಾಲ್ ಆದ್ಯಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19, ಉಡುಪಿಯ ಬೇಬಿ ಡಾಲ್ ಆದ್ಯಾ ಗೆ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯ ಮಾಡುವ ಅವಕಾಶ ಒದಗಿಬಂದಿದೆ. ಬೇಬಿ ಡಾಲ್ ಆದ್ಯಾ ಅವರು ಉಪೇಂದ್ರ ಅವರ`ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ  ನಟಿಸಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಝೀ ಕನ್ನಡ ಚಾನೆಲ್ ನಲ್ಲಿ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಆದ್ಯಾಳಿಗೆ ಒಂದರ ಮೇಲೊಂದರಂತೆ ಒಳ್ಳೆಯ ಆಫರ್ ಗಳು ಬರುತ್ತಿವೆ. ಈಗಾಗಲೇ ರಕ್ಷಿತ್ ಶೆಟ್ಟಿ ನಿರ್ಮಾಣದ `ಭೀಮಸೇನಾ ನಳಮಹರಾಜ’ ಚಿತ್ರದಲ್ಲಿ ನಟಿಸುತ್ತಿದ್ದು, ಈಗ ಉಪೇಂದ್ರರೊಂದಿಗೆ ನಟಿಸುವ ಅವಕಾಶ

ರಿಯಲ್ ಸ್ಟಾರ್ ಉಪ್ಪಿ ಜೊತೆ ಅಭಿನಯಿಸಲಿರುವ ಬೇಬಿ ಡಾಲ್ ಆದ್ಯಾ Read More »

ಲೈಫ್‍ಸ್ಟೈಲ್

ಜಾಗಕ್ಕೆ ಸಂಬಂಧಿಸಿ ಗಲಾಟೆ ►ಓರ್ವ ಮೃತ್ಯು, ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ.19, ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿರುವ  ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ. ನಾಗರಾಜು(55) ಮೃತ ದುರ್ದೈವಿ. ನಾಗರಾಜು ಪತ್ನಿ ಗೌರಮ್ಮ(44), ಮಗ ನಾರಾಯಣಸ್ವಾಮಿ(27) ಗಂಭೀರವಾಗಿ ಗಾಯಗೊಂಡವರು. ಚಲುವರಾಜು ಮತ್ತು ನಾಗರಾಜು ಮನೆ ಅಕ್ಕಪಕ್ಕದಲ್ಲಿದ್ದು, ಮನೆಯ ಸಮೀಪ ಓಡಾಡುವ ಜಾಗದ ವಿಚಾರವಾಗಿ ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಆದರೆ ಕಳೆದ ರಾತ್ರಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿತ್ತು. ಚಲುವರಾಜು ಪಕ್ಕದ ಮನೆಯ

ಜಾಗಕ್ಕೆ ಸಂಬಂಧಿಸಿ ಗಲಾಟೆ ►ಓರ್ವ ಮೃತ್ಯು, ಇಬ್ಬರಿಗೆ ಗಾಯ Read More »

ಕರ್ನಾಟಕ

ತೀವ್ರ ಸ್ವರೂಪ ಪಡೆದುಕೊಂಡ ಮದ್ಯದಂಗಡಿ ವಿರೋಧಿ ಹೋರಾಟ ► ಪ್ರತಿಭಟನೆಯಲ್ಲಿ ಸೇರಿಕೊಂಡ ಶಾಲಾ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ.19. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸರಕಾರಿ ಜಮೀನಿನಲ್ಲಿರುವ ಕಟ್ಟಡದಲ್ಲಿ ಗ್ರಾಮಸ್ಥರ ಪ್ರಬಲ ವಿರೋಧದ ನಡುವೆಯೂ ಸೆಪ್ಟೆಂಬರ್ 11 ರಂದು ಪ್ರಾರಂಭಗೊಂಡ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಭಾನುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡಿದ್ದು, ಮಂಗಳವಾರ ಕೂಡ ಮುಂದುವರಿದಿದೆ. ಇಂದು ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಶಾಲಾ ಮಕ್ಕಳು ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಲಿತ ಸಂಘಟನೆ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರವರು ಜಮಾಯಿಸಿ ಮದ್ಯದಂಗಡಿಯ

ತೀವ್ರ ಸ್ವರೂಪ ಪಡೆದುಕೊಂಡ ಮದ್ಯದಂಗಡಿ ವಿರೋಧಿ ಹೋರಾಟ ► ಪ್ರತಿಭಟನೆಯಲ್ಲಿ ಸೇರಿಕೊಂಡ ಶಾಲಾ ವಿದ್ಯಾರ್ಥಿಗಳು Read More »

ಕರಾವಳಿ

ಉಡುಪಿ: ಸಟ್ಟುಗ ಬಿಸಿ ಮಾಡಿ ಬರೆ ಹಾಕಿ ಅತ್ತೆ ಮಾವನಿಗೆ ಚಿತ್ರಹಿಂಸೆ ► ಸೊಸೆಯ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಸೆ.19, ಅತ್ತೆ ಮಾವನಿಗೆ ನಿರಂತರ ಚಿತ್ರಹಿಂಸೆ ನೀಡಿ ಕೊಲೆ ಮಾಡಲು ಯತ್ನಿನಿಸಿದ ಸೊಸೆಯನ್ನ ಮಲ್ಪೆ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲ್ಲೆಗೊಳಗಾದವರ ಮಕ್ಕಳು ಸೊಸೆ ಅಶ್ವಿನಿ ಪೈ ವಿರುದ್ಧ ಕೇಸ್ ದಾಖಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಮಲ್ಪೆಯ ನಿವಾಸದಲ್ಲಿದ್ದ ಅಶ್ವಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ತೆಂಕ ನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟುವಿನಲ್ಲಿ ಮಾವ ವೆಂಕಟೇಶ ಪೈ, ಅತ್ತೆ ವೀಣಾ ಪೈ ಅವರಿಗೆ ಸೊಸೆ ಅಶ್ವಿನಿ ಪೈ ಮನಬಂದಂತೆ ಥಳಿಸಿದ್ದಳು. ಸಟ್ಟುಗ ಬಿಸಿ

ಉಡುಪಿ: ಸಟ್ಟುಗ ಬಿಸಿ ಮಾಡಿ ಬರೆ ಹಾಕಿ ಅತ್ತೆ ಮಾವನಿಗೆ ಚಿತ್ರಹಿಂಸೆ ► ಸೊಸೆಯ ಬಂಧನ Read More »

ಕರಾವಳಿ

ಜಲ್ಲಿ ಮಿಕ್ಸರ್ – ಸ್ಕೂಟಿ ಡಿಕ್ಕಿ ►ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19 ಜಲ್ಲಿ ಮಿಕ್ಸರ್ ವಾಹನವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ವೆಂಕಟರಮಣಪ್ಪ(45) ಹಾಗು ವೆಂಕಟಪ್ಪ(43) ಮೃತ ದುರ್ದೈವಿಗಳಾಗಿದ್ದು, ಇವರು ರಾಮಸಾಗರ ನಿವಾಸಿಗಳು ಎಂಬುವುದಾಗಿ ತಿಳಿದುಬಂದಿದೆ. ರೈಲ್ವೆ ಬ್ರಿಡ್ಜ್ ನಿಂದಾಗಿ ಕಿರಿದಾಗಿರುವ ರಾಷ್ಟ್ರೀಯ ಹೆದ್ದಾರಿ-7 ಸರ್ವಿಸ್ ರಸ್ತೆ ಇಲ್ಲದೆ ಇರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಜಲ್ಲಿ ಮಿಕ್ಸರ್ – ಸ್ಕೂಟಿ ಡಿಕ್ಕಿ ►ಇಬ್ಬರು ಮೃತ್ಯು Read More »

ಕರ್ನಾಟಕ

ಮಹಿಳೆಯರ ರಕ್ಷಣೆಗೆ ತಯಾರಾಗಿದೆ `ಎಲೆಕ್ಟ್ರೋ ಶೂ’…! ► ಇನ್ನು ಮುಂದೆ ಮಹಿಳೆಯರಿಗೆ ಕಿರುಕುಳ ನೀಡಿದರೆ ನೀವು ಅಂದರ್..!!!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಸೆ.18, ಮಹಿಳೆಯರ ರಕ್ಷಣೆಗೆಂದು 18 ವರ್ಷದ ಯುವಕನೊಬ್ಬ ವಿನೂತನವಾದ ಚಪ್ಪಲಿಯೊಂದನ್ನು ತಯಾರಿಸಿದ್ದಾನೆ. ಹೈದರಾಬಾದ್ ನ ಹಿಮಾಯತ್ ನಗರದ ಸಿದ್ದಾರ್ಥ್ ಮಂಡಲ ಎಂಬ ಯುವಕ ಈ ವಿಶೇಷ ಚಪ್ಪಲಿಯನ್ನು ತಯಾರಿಸಿದ್ದಾನೆ. ಈತ ಉದ್ಯಮಿ ಶ್ರೀರಾಮ್ ಮಂಡಲ ಹಾಗೂ ಶಶಿಕಲಾ ಮಂಡಲ ಅವರ ಪುತ್ರ. ಮಹಿಳೆಯರ ರಕ್ಷಣೆಗೆಂದು ತಯಾರಿಸಿದ ಈ ಶೂ ನ ವಿಶೇಷತೆ ಏನಂತಿರಾ..??? ಹೌದು ಈ ಶೂ ಅಥವಾ ಚಪ್ಪಲಿ ಧರಿಸಿದ್ದ ವೇಳೆ ಯಾರಾದ್ರೂ ನಿಮ್ಮ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದರೆ

ಮಹಿಳೆಯರ ರಕ್ಷಣೆಗೆ ತಯಾರಾಗಿದೆ `ಎಲೆಕ್ಟ್ರೋ ಶೂ’…! ► ಇನ್ನು ಮುಂದೆ ಮಹಿಳೆಯರಿಗೆ ಕಿರುಕುಳ ನೀಡಿದರೆ ನೀವು ಅಂದರ್..!!! Read More »

ರಾಷ್ಟ್ರೀಯ ನ್ಯೂಸ್
Scroll to Top