ವೈದ್ಯಕೀಯ ವೃತ್ತಿಯ ತಿರುಳು ಇರುವುದೇ ತ್ಯಾಗದಲ್ಲಿ: ಡಾ|| ಬನಾರಿ
(ನ್ಯೂಸ್ ಕಡಬ) newskadaba.com, ಹೊಸಂಗಡಿ, ಡಿ.3 ತ್ಯಾಗವಿಲ್ಲದೆ ಬದುಕಿಲ್ಲ ಅದರಲ್ಲೂ ಜನರ ಸೇವೆಯಲ್ಲಿಯೇ ನಿರತರಾಗಿರುವ ವೈದ್ಯರಲ್ಲಿ ತ್ಯಾಗದ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಹಿರಿಯ ಸಾಹಿತಿ ಡಾ|| ರಮಾನಂದ ಬನಾರಿ ಅಭಿಪ್ರಾಯಪಟ್ಟರು. ಹೊಸಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಹೈಲ್ಯಾಂಡ್ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡ ಸುರಕ್ಷ ದಂತ ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಭಗವದ್ಗೀತೆಯಲ್ಲಿ ಯಜ್ಞ, ದಾನ ಹಾಗೂ ತಪಸ್ಸು ಆದರ್ಶ ಮನುಷ್ಯ ಜೀವನದಲ್ಲಿರಬೇಕೆಂದು ತಿಳಿಸಲಾಗಿದೆ. ಆದರೆ ಈ ಮೂರರಲ್ಲಿಯೂ ದಾನವೊಂದೇ ಅಂತರ್ಗತವಾಗಿರುತ್ತದೆ. ವೃತ್ತಿಯೊಂದಿಗೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ|| ಮುರಲೀಮೋಹನ ಚೂಂತಾರು […]
ವೈದ್ಯಕೀಯ ವೃತ್ತಿಯ ತಿರುಳು ಇರುವುದೇ ತ್ಯಾಗದಲ್ಲಿ: ಡಾ|| ಬನಾರಿ Read More »
ಕರಾವಳಿ






