newskadaba

ಹೊಸಮಠ: ಅಕ್ರಮ ಮರಳು ದಂಧೆ ➤ ವಾಹನ ಸಹಿತ ಇಬ್ಬರು ವಶಕ್ಕೆ

(ನ್ಯೂಸ್ ಕಡಬ) newskadaba.com ಹೊಸಮಠ ನ. 29: ಕಳೆದ ದಿನ ರಾತ್ರಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಕುಟ್ರುಪಾಡಿ ಗ್ರಾಮದ ನಾಡೋಳಿಯಲ್ಲಿ ಒಂದು ಪಿಕಪ್ ವಾಹನ ಮತ್ತು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಉಳಿದಂತೆ ಇಬ್ಬರು ಎರಡು ವಾಹನಗಳನ್ನು ಚಲಾಯಿಸಿಕೊಂಡು  ಪರಾರಿಯಾಗಿರುವ ಘಟನೆ ನಡೆದಿದೆ.     ಅಕ್ರಮ ಮರಳು ಸಾಗಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗಾಗಲೇ ಕುಮಾರಧಾರ ಹಾಗೂ ಗುಂಡ್ಯ ಹೊಳೆಯಲ್ಲಿ ನಿರಂತರವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು […]

ಹೊಸಮಠ: ಅಕ್ರಮ ಮರಳು ದಂಧೆ ➤ ವಾಹನ ಸಹಿತ ಇಬ್ಬರು ವಶಕ್ಕೆ Read More »

ಕರಾವಳಿ

ಎಡಮಂಗಲ: ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಎಡಮಂಗಲ ನ. 29: ವ್ಯಕ್ತಿಯೊಬ್ಬರು ಸೌದೆ ತರಲು ಕಾಡಿಗೆ ಹೋದ ಸಂದರ್ಭದಲ್ಲಿ ಅಸ್ವಸ್ಥಗೊಂಡು ಕೊನೆಯುಸಿರೆಳೆದ ಘಟನೆ ಎಡಮಂಗಲದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಎಡಮಂಗಲ ಗ್ರಾಮದ ಶಾಂತಿಯಡ್ಕ ನಿವಾಸಿ ಮಾದಿಗ ಮುಗೇರ(58) ಎಂದು ಗುರುತಿಸಲಾಗಿದೆ.     ಮನೆಯ ಸಮೀಪದ ಕಾಡಿಗೆ ಸೌದೆ ತರಲೆಂದು ಹೋದಾಗ ಅಸ್ವಸ್ಥಗೊಂಡು ಬೊಬ್ಬೆ ಹಾಕಿದ್ದರು. ಇದನ್ನು ಗಮನಿಸಿದ ಮನೆಯವರು ಅವರನ್ನು ಮನೆಗೆ ಕರೆತಂದು ಉಪಚರಿಸಿದಾಗ ನಿಧನ ಹೊಂದಿದರು ಎನ್ನಲಾಗಿದೆ. ಮೃತರು ಪತ್ನಿ ಕುಂಞËಳು, ಇಬ್ಬರು ಪುತ್ರರಾದ ಆನಂದ, ಚೋಮಣ್ಣ, ಈರ್ವ

ಎಡಮಂಗಲ: ವ್ಯಕ್ತಿ ಮೃತ್ಯು Read More »

ಕರಾವಳಿ

ನ.30 ರ ನಾಳೆ ವರ್ಷದ 4ನೇ ಮತ್ತು ಕೊನೆಯ ಚಂದ್ರಗ್ರಹಣ

(ನ್ಯೂಸ್ ಕಡಬ) newskadaba.com ನವದೆಹಲಿ ನ. 29: ವರ್ಷದ ನಾಲ್ಕನೇ ಮತ್ತು ಕೊನೆಯ ಚಂದ್ರಗ್ರಹಣ ನ.30 ರ ನಾಳೆ ಸಂಭವಿಸಲಿದೆಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ ಮತ್ತು ನೈಸರ್ಗಿಕ ಉಪಗ್ರಹವು ಭೂಮಿಯ ಹೊರಛಾಯೆಯ ಮೂಲಕ ಹಾದು ಹೋಗಲಿದೆ. ಆಸ್ಟ್ರೇಲಿಯಾ, ಏಷ್ಯಾ, ಪೆಸಿಫಿಕ್, ಯುರೋಪ್, ಅಟ್ಲಾಂಟಿಕ್, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೇರಿಕಾದಲ್ಲಿ ಚಂದ್ರಗ್ರಹಣ ಗೋಚರಿಸಲಿದೆಯಾದರೂ ಇದು ಹವಾಮಾನದ ಮೇಲೆ ಪ್ರಮುಖವಾಗಿ ಅವಲಂಭಿತವಾಗಿರುತ್ತದೆ, ಮಂಜು ಮತ್ತು ಮೋಡಕವಿದ ವಾತಾವರಣ ಗ್ರಹಣ ಗೋಚರತೆಗೆ ಅಡ್ಡಿಯಾಗಬಹುದು ಎಂದು ಖಗೋಳ ವಿಜ್ಞಾನಿಗಳು

ನ.30 ರ ನಾಳೆ ವರ್ಷದ 4ನೇ ಮತ್ತು ಕೊನೆಯ ಚಂದ್ರಗ್ರಹಣ Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಮರದ ಸೌಂದರ್ಯವನ್ನು ಹೆಚ್ಚಿಸಿದ ಬಿಳಿ ಬಣ್ಣದ ಪಕ್ಷಿಗಳು

(ನ್ಯೂಸ್ ಕಡಬ) newskadaba.com ಪುತ್ತೂರು ನ. 29: ಎಷ್ಟೋ ಮರಗಳಲ್ಲಿ ಪಕ್ಷಿಗಳ ವಾಸ ಇರುತ್ತದೆ. ಆದರೇ ಮರಗಳನ್ನು ಕಡಿದು ನಾಶ ಮಾಡುವುದರಿಂದ ಇತ್ತೀಚೆಗೆ ಪ್ರಾಣಿ ಪಕ್ಷಿಗಳು ಕಣ್ಣಿಗೆ ಕಾಣಿಸುವುದಿಲ್ಲ. ಆದರೇ ಅವುಗಳ ಕೂಗು ಮಾತ್ರ ಕೇಳಿ ಬರುತ್ತದೆ ಅಷ್ಟೆ.     ಆದರೇ ಚಳಿಗಾಲದ ಸಮಯದಲ್ಲಿ ಮರಗಳ ಎಲೆಗಳು ಉದುರಿ ಹೋದರು ಪಕ್ಷಿಗಳ ಬಣ್ಣಗಳ ವ್ಯತ್ಯಾಸದಿಂದ ಅವು ಸರಿಯಾಗಿ ಗೋಚರಿಸದು. ಆದರೇ ಪುತ್ತೂರಿನ ಭಾಗ ಮಹಾತ್ಮ ಗಾಂಧೀ ಪ್ರತಿಮೆ ಬಳಿಯ ಅಶ್ವತ್ಥ ಮರದ ಆಶ್ರಯದಲ್ಲಿರುವ ಬಿಳಿ ಬಣ್ಣದ ಪಕ್ಷಿಗಳು

ಪುತ್ತೂರು: ಮರದ ಸೌಂದರ್ಯವನ್ನು ಹೆಚ್ಚಿಸಿದ ಬಿಳಿ ಬಣ್ಣದ ಪಕ್ಷಿಗಳು Read More »

ಕರಾವಳಿ

ಉಡುಪಿ: ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ➤ ಕನಕಪುರ ಬಂಡೆ ಡಿಕೆಶಿ ಚಾಲನೆ

(ನ್ಯೂಸ್ ಕಡಬ) newskadaba.com ಉಡುಪಿ ನ. 29: ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿರುವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿದರು.ಉಡುಪಿಯ ಬಾಸೆಲ್ ಮಿಷನ್ ಚರ್ಚ್ ಹಾಲ್ ನಲ್ಲಿ ಈ ಬೃಹತ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ.     ಕಳೆದ ದಿನ ಜಿಲ್ಲೆಗೆ ಆಗಮಿಸಿದ್ದ ಡಿಕೆಶಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಇಂದು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ,ಅಭಯಚಂದ್ರ ಜೈನ್ , ಮಾಜಿ ಶಾಸಕರಾದ ಗೋಪಾಲ್ ಪೂಜಾರಿ, ಯು.ಆರ್. ಸಭಾಪತಿ,ಉಡುಪಿ

ಉಡುಪಿ: ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ➤ ಕನಕಪುರ ಬಂಡೆ ಡಿಕೆಶಿ ಚಾಲನೆ Read More »

ಕರಾವಳಿ, ಕರ್ನಾಟಕ

ಸುಬ್ರಹ್ಮಣ್ಯ: ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ನ. 29: 2019 20ನೇ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರದಲ್ಲಿ ಸಾಧಿಸಿರುವ ಪಗ್ರತಿಯನ್ನು ಗುರುತಿಸಿ ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿಗೆ ದ,ಕ ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರಶಸ್ತಿ ನೀಡಿ ಗೌರವಿಸಿದೆ.     ಮಂಗಳೂರಿನಲ್ಲಿ ನ.27 ರಂದು ನಡೆದ ದ.ಕ ಜಿಲ್ಲಾ ಸಹಕಾರಿ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕಟ್ಟೆಮನೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ರವರಿಂದ ಪ್ರಶಸ್ತಿ ಸ್ವೀಕರಿಸಿದರು.  

ಸುಬ್ರಹ್ಮಣ್ಯ: ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರಶಸ್ತಿ Read More »

ಕರಾವಳಿ

ಪಂಜ: ಎಂ.ಆರ್.ಎಫ್. ಬೈಕ್ ರ್ಯಾಲಿ

(ನ್ಯೂಸ್ ಕಡಬ) newskadaba.com ಪಂಜ ನ. 29: ಇಂದು ಎಂ.ಆರ್.ಎಫ್. ಡರ್ಟ್ ಟ್ರ್ಯಾಕ್ ಬೈಕ್ ರ್ಯಾಲಿಯು ಪಂಜದಲ್ಲಿ ನಡೆಯಿತು.     ಕಾರ್ಯಕ್ರಮಕ್ಕೆ ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ, ಪಂಜ ಪಂಚಲಿಂಗೇಶ್ವರ ದೇಗುಲದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ ರವರು ಚಾಲನೆ ನೀಡಿದರು.  

ಪಂಜ: ಎಂ.ಆರ್.ಎಫ್. ಬೈಕ್ ರ್ಯಾಲಿ Read More »

ಕರಾವಳಿ

ಕಾರ್ಕಳ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಕಾರ್ಕಳ ನ. 29: ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಆಸ್ಪತ್ರೆ ಹತ್ತಿರ ಮೇಯಲು ಬಿಟ್ಟಿದ ದನವೊಂದು ಆಕಸ್ವಿಕವಾಗಿ ಆವರಣವಿಲ್ಲದ ಬಾವಿಗೆ ಬಿದ್ದು ಗಾಯಗೊಂಡಿದೆ.     ಮಾಹಿತಿ ತಿಳಿದ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಧಾವಿಸಿ ಯಶಸ್ವಿ ಕಾರ್ಯಚರನೆ ನಡೆಸಿ ದನವನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲೆಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಠಾಣಧಿಕಾರಿ ಬಿ.ಎಂ ಸಂಜೀವ, ರೂಪೇಶ್, ಸಿಬ್ಬಂದಿಗಳಾದ ಸುರೇಶ್, ಜಯ ಮೂಲ್ಯ, ಗೃಹ ರಕ್ಷಕ ದಳದ ಮನ್ಮಥ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.  

ಕಾರ್ಕಳ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ Read More »

ಕರಾವಳಿ

ಶಿಲೀಂಧ್ರಶಾಸ್ತ್ರ ಸಂಶೋಧನಾ ಕ್ಷೇತ್ರ ➤ ಪ್ರೊ.ಕೆ.ಆರ್. ಶ್ರೀಧರ್‍ರವರಿಗೆ ವಿಶೇಷ ಸ್ಥಾನಮಾನ

(ನ್ಯೂಸ್ ಕಡಬ) newskadaba.com ಮಂಗಳೂರು ನ. 29: ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪ್ರೊ. ಕೆ.ಆರ್.ಶ್ರೀಧರ್‍ರವರಿಗೆ ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಪೋರ್ಡ್ ವಿಶ್ವವಿದ್ಯಾನಿಲಯದಿಂದ ನಿರ್ವಹಿಸಲ್ಪಟ್ಟ ಮೆಗಾ ದತ್ತಾಂಶ ವಿಶ್ಲೇಷಣೆಯ ಪ್ರಕಾರ ಶಿಲೀಂಧ್ರಶಾಸ್ತ್ರ ಸಂಶೋಧನಾಕ್ಷೇತ್ರದಲ್ಲಿ ವಿಶ್ವದಅಗ್ರ 2%ವಿಜ್ಞಾನಿಗಳಲ್ಲಿ ಉನ್ನತ ಸ್ಥಾನಮಾನ ಲಭಿಸಿದೆ. ಸ್ಟ್ಯಾನ್ ಪೋರ್ಡ್  ವಿಶ್ವವಿದ್ಯಾನಿಲಯದ ವಿಜ್ಞಾನಿಗಳು “ಓಪನ್ ಅಕ್ಸ್‍ಸ್ ಜರ್ನ್‍ಲ್ ಪ್ಲಾಸ್ ಬಯಾಲಜಿ” (PLOS Biology)ಯಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ.ಪ್ರೊ.ಕೆ.ಆರ್.ಶ್ರೀಧರ್‍ರವರು ಕರ್ನಾಟಕದ ದಕ್ಷಿಣಕನ್ನಡ, ಕೊಡಗು ಮತ್ತು ಪಶ್ಚಿಮಘಟ್ಟ ಪ್ರದೇಶಗಲ್ಲಿನ ಶಿಲೀಂದ್ರಗಳ ಕುರಿತು ನಿರ್ವಹಿಸಿದ ಸಂಶೋಧನೆಗೆ ವಿಶೇಷ ಸ್ಥಾನಮಾನದ ಗೌರವ

ಶಿಲೀಂಧ್ರಶಾಸ್ತ್ರ ಸಂಶೋಧನಾ ಕ್ಷೇತ್ರ ➤ ಪ್ರೊ.ಕೆ.ಆರ್. ಶ್ರೀಧರ್‍ರವರಿಗೆ ವಿಶೇಷ ಸ್ಥಾನಮಾನ Read More »

ಕರಾವಳಿ

ಉಡುಪಿ: ಕೃಷ್ಣ ಮಠ, ಕಮಲಶಿಲೆ, ಕೊಲ್ಲೂರು ದೇಗುಲಕ್ಕೆ ಡಿಕೆಶಿ ಭೇಟಿ

(ನ್ಯೂಸ್ ಕಡಬ) newskadaba.com ಉಡುಪಿ ನ. 29: ಉಡುಪಿ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾತ್ರಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ದೇಗುಲಕ್ಕೆ ಭೇಟಿ ನೀಡಿದರು. ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಅವರು,ರಾತ್ರಿಯ ಮಹಾಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಿದ ಡಿಕೆಶಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದರು. ಇಂದು ಕೊಲ್ಲೂರಿನಲ್ಲಿ ಪೂಜೆಯ ಬಳಿಕ ಉಡುಪಿಗೆ ಆಗಮಿಸಲಿದ್ದಾರೆ. ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜನೆಗೊಂಡಿದೆ. ಉಡುಪಿಯಲ್ಲಿ ಶ್ರೀ ಕೃಷ್ಣಮಠ ಭೇಟಿಯ ಕಾರ್ಯಕ್ರಮವೂ ನಿಗದಿಯಾಗಿದೆ.

ಉಡುಪಿ: ಕೃಷ್ಣ ಮಠ, ಕಮಲಶಿಲೆ, ಕೊಲ್ಲೂರು ದೇಗುಲಕ್ಕೆ ಡಿಕೆಶಿ ಭೇಟಿ Read More »

ಕರಾವಳಿ
Scroll to Top