News Kadaba

ಎಪ್ರಿಲ್ 14ರಂದು `ಬಿಸುತ ಪೊಲಬು’

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಎ.13  ನಮ್ಮೂರು – ನೆಕ್ಕಿಲಾಡಿ ಸಂಘಟನೆಯ ವತಿಯಿಂದ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಮೈಂದಡ್ಕದ ಸಾರ್ವಜನಿಕ ಮೈದಾನದಲ್ಲಿ ಎ.14ರಂದು `ಬಿಸುತ ಪೊಲಬು’ ಸೌಹಾರ್ದಯುತವಾಗಿ ವಿಷು ಆಚರಣೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಸಾಮೂಹಿಕವಾಗಿ ಕಣಿಯಿಟ್ಟ ಬಳಿಕ ಹಂಪಿ ಕನ್ನಡ ವಿವಿಯ ವಿಶ್ರಾಂತ ಉಪಕುಲಪತಿ ಡಾ. ಬಿ.ಎ. ವಿವೇಕ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, `ನಮ್ಮೂರು- ನೆಕ್ಕಿಲಾಡಿ’ಯ ಗೌರವಾಧ್ಯಕ್ಷ ರಾಧಾಕೃಷ್ಣ ನಾೖಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ 34ನೇ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆ ಶ್ರೀಮತಿ ರತಿ ಎಸ್. ನಾಯ್ಕ, ಉದ್ಯಮಿ […]

ಎಪ್ರಿಲ್ 14ರಂದು `ಬಿಸುತ ಪೊಲಬು’ Read More »

ಕರಾವಳಿ

ಕೌಟುಂಬಿಕ ಮೌಲ್ಯ ತುಂಬಲು ದೈವಾರಾಧನೆ ಮೂಲ ಪ್ರೇರಣೆ: ಬಲ್ಯ ರಾಜನ್ ದೈವ ಕಲಶಾಭಿಷೇಕ ಧಾರ್ಮಿಕ ಸಭೆಯಲ್ಲಿ ಕತ್ತಲ್ ಸಾರ್

(ನ್ಯೂಸ್ ಕಡಬ) newskadaba.com ಕಡಬ, ಎ.13. ತುಳುನಾಡಿನ ದೈವಾರಧನೆ, ನಾಗಾರಾಧನೆ, ದೇವತಾರಾಧನೆ ಕಾರ್ಯಗಳಲ್ಲಿ ಭಕ್ತಿ ಶೃದ್ಧೆಗಳಿಂದ ಭಾಗವಹಿಸುವುದರಿಂದ ಕೌಟುಂಬಿಕ ಮೌಲ್ಯವೃದ್ಧಿಗೆ ಮೂಲ ಪ್ರೇರಣೆಯಾಗುತ್ತದೆ ಎಂದು ತುಳುವ ಬೊಳ್ಳಿ, ರಾಜ್ಯ ಸಂಸ್ಕಾರ ಭಾರತಿ ಲೋಕಕಲಾ ವಿಭಾಗ ಪ್ರಮುಖ ದಯಾನಂದ ಕತ್ತಲ್ ಸಾರ್ ಹೇಳಿದರು. ಅವರು ಬುಧವಾರ ರಾತ್ರಿ ಬಲ್ಯ-ಪಡ್ನೂರು ಶ್ರೀರಾಜನ್ ದೈವ ಹಾಗೂ ಪರಿವಾರ ದೈವಗಳ ನವೀಕರ, ಪುನರ್ಪ್ರತಿಷ್ಠೆ, ಕಲಶಾಭಿಷೇಕ ಮಹೋತ್ಸವ ಹಾಗೂ ನೇಮೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದರು. ತುಳುನಾಡು ದೈವದೇವರುಗಳ ನೆಲೆವೀಡು, ದೈವ

ಕೌಟುಂಬಿಕ ಮೌಲ್ಯ ತುಂಬಲು ದೈವಾರಾಧನೆ ಮೂಲ ಪ್ರೇರಣೆ: ಬಲ್ಯ ರಾಜನ್ ದೈವ ಕಲಶಾಭಿಷೇಕ ಧಾರ್ಮಿಕ ಸಭೆಯಲ್ಲಿ ಕತ್ತಲ್ ಸಾರ್ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೇಸಿಗೆ ಶಿಬಿರ ಸಮರೋಪ

(ನ್ಯೂಸ್ ಕಡಬ) newskadaba.com ಕಡಬ ಎ.11. ಬೇಸಿಗೆ ರಜಾ ದಿನಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಬೇಸಿಗೆ ಶಿಬಿರ ಪೂರಕ . ಶಿಬಿರದಲ್ಲಿ ಮಕ್ಕಳು ಭಾಗವಹಸಿ ತನ್ನ ಪ್ರತಿಭೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯೆ ತೇಜಶ್ವಿನಿ ಕಟ್ಟಪುಣಿ ಹೇಳಿದರು. ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾನ್ವೇಷಣೆ ಹಾಗೂ ಬೇಸಿಗೆ ಶಿಬಿರ ಚಿಣ್ಣರಲೋಕ-2018 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಕಾರ್ಯದರ್ಶಿ ಸೇಸಪ್ಪ ರೈ ಮಾತನಾಡಿ, ತರಭೇತಿಯಲ್ಲಿ ಅಭ್ಯಸಿಸಿದ ಎಲ್ಲವೂ ಮುಂದಿನ ಜೀವನಕ್ಕೆ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೇಸಿಗೆ ಶಿಬಿರ ಸಮರೋಪ Read More »

ಕರಾವಳಿ

ಆಲಂಕಾರು: ಸಾಫ್ಟ್ ಡ್ರಿಂಕ್ ಸಾಗಾಟದ ವಾಹನ ಟೆಲಿಫೋನ್ ಕಂಬಕ್ಕೆ ಢಿಕ್ಕಿ ► ಕಂಬ ತಲೆಯ ಮೇಲೆ ಬಿದ್ದು ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.07. ಸಾಫ್ಟ್ ಡ್ರಿಂಕ್ ಸಾಗಾಟದ ವಾಹನವೊಂದು ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದು ಕಂಬ ತಲೆಯ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಆಲಂಕಾರಿನಲ್ಲಿ ಶನಿವಾರ ಅಪರಾಹ್ನ ನಡೆದಿದೆ. ಮೃತರನ್ನು ಕಡಬ ತಾಲೂಕಿನ ಪೆರಾಬೆ ಗ್ರಾಮದ ಬಾಲಾಜೆ ನಿವಾಸಿ ದಿ| ಅಂಗಾರ ಎಂಬವರ ಪುತ್ರ ಗಿರೀಶ್ (43) ಎಂದು ಗುರುತಿಸಲಾಗಿದೆ. ಆಲಂಕಾರು ಮದ್ಯದಂಗಡಿಯ ಮುಂಭಾಗದಲ್ಲಿದ್ದ ಟೆಲಿಫೋನ್ ಕಂಬಕ್ಕೆ ಭವಾನಿ ಸಾಫ್ಟ್ ಡ್ರಿಂಕ್ ಸಾಗಾಟದ ವಾಹನವು ಹಿಮ್ಮುಖವಾಗಿ ಚಲಿಸಿ ಢಿಕ್ಕಿ ಹೊಡೆದಿದ್ದು, ಈ

ಆಲಂಕಾರು: ಸಾಫ್ಟ್ ಡ್ರಿಂಕ್ ಸಾಗಾಟದ ವಾಹನ ಟೆಲಿಫೋನ್ ಕಂಬಕ್ಕೆ ಢಿಕ್ಕಿ ► ಕಂಬ ತಲೆಯ ಮೇಲೆ ಬಿದ್ದು ಓರ್ವ ಮೃತ್ಯು Read More »

ಕರಾವಳಿ

ಕುಂಬಳೆ ಇಸ್ಲಾಮಿಕ್ ಅಕಾಡಮಿ ಸನದುದಾನ: ಆತೂರುನಲ್ಲಿ ಪ್ರಚಾರ, ಜಾಥಾ ಸಮಾರೋಪ ►ಯೋಧ ಜುಬೇರ್ ಹಳೆನೇರೆಂಕಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.2. ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿ ಕುಂಬಳೆ ಇದರ 10ನೇ ವಾರ್ಷಿಕ ಹಾಗೂ ಪ್ರಥಮ ವರ್ಷದ ಸನದುದಾನ ಸಮಾರಂಭ ಎಪ್ರಿಲ್ 10ರಿಂದ 15ರ ತನಕ ಕಂಬಳೆಯಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥ ಜಾಥಾ ಕಾರ್ಯಕ್ರಮ ಎ. 1ರಂದು ಆತೂರುನಲ್ಲಿ ಸಮಾಪನಗೊಂಡಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಹಾದಿ ಅನಸ್ ತಂಙಳ್ ಮಾತನಾಡಿ 2008ರಲ್ಲಿ ಮುಸ್ಲಿಂ ಸಮುದಾಯದ ಬಡ ವಿದ್ಯಾರ್ಥಿಗಳಿಗಾಗಿ ಧಾರ್ಮಿಕ ಮತ್ತು ಲೌಖಿಕ ವಿದ್ಯಾಭ್ಯಾಸ ನೀಡುವ ಪರಿಕಲ್ಪನೆಯೊಂದಿಗೆ ಸಮಸ್ತ

ಕುಂಬಳೆ ಇಸ್ಲಾಮಿಕ್ ಅಕಾಡಮಿ ಸನದುದಾನ: ಆತೂರುನಲ್ಲಿ ಪ್ರಚಾರ, ಜಾಥಾ ಸಮಾರೋಪ ►ಯೋಧ ಜುಬೇರ್ ಹಳೆನೇರೆಂಕಿಗೆ ಸನ್ಮಾನ Read More »

ಕರಾವಳಿ

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ – ಕಾರು ಢಿಕ್ಕಿ ► ಯುವ ವಕೀಲೆ ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.01. ವ್ಯಾಗನರ್ ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಯುವ ವಕೀಲೆ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯದಲ್ಲಿ ಶನಿವಾರದಂದು ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಕಂಟ್ರಮಜಲು ನಿವಾಸಿ ಜಿನ್ನಪ್ಪ‌ ಗೌಡ ಎಂಬವರ ಪುತ್ರಿ ಮಂಗಳೂರಿನ ಯುವ ವಕೀಲೆ ಗಾಯತ್ರಿ (23) ಎಂದು ಗುರುತಿಸಲಾಗಿದೆ. ಇವರು ಪುತ್ತೂರಿನಿಂದ ಕುಂಬ್ರ ಕಡೆಗೆ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಇವರಿದ್ದ

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ – ಕಾರು ಢಿಕ್ಕಿ ► ಯುವ ವಕೀಲೆ ಮೃತ್ಯು, ಓರ್ವ ಗಂಭೀರ Read More »

ಕರಾವಳಿ

ರಾಮಕುಂಜ: ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ ► ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಜಾಗೃತಿ ಜಾಥಾ

(ನ್ಯೂಸ್ ಕಡಬ) newskadaba.com ಕಡಬ, ಮಾ.30. ಪ್ರಕೃತಿಗೆ ವಿರುದ್ಧವಾಗಿ ನಡೆಯುವುದರಿಂದ ಪರಿಸರ ಹಾನಿಯಾಗುದಷ್ಟೇ ಅಲ್ಲ, ಮಾನವನ ಬದುಕಿಗೇ ಮಾರಕ. ಪ್ಲಾಸ್ಟಿಕ್ ಅತೀ ಅಪಾಯಕಾರಿ ವಸ್ತು. ಅದರ ಉಪಯೋಗದಲ್ಲಿ ನಿಯಂತ್ರಣ ಬೇಕು ಎಂದು ರಾಮಕುಂಜ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಹೇಳಿದರು. ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರಾಮಕುಂಜ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಜಗತ್ತಿನಲ್ಲಿ ಮಾನವ ಅತೀ ಹೆಚ್ಚು ಬುದ್ದಿಶಕ್ತಿ  ಹೊಂದಿರುವ ಜೀವಿ.  ಆದರೆ ಮನುಷ್ಯನಿಗೆ ಪರಿಸರದ ವಿರುದ್ಧ

ರಾಮಕುಂಜ: ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ ► ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಜಾಗೃತಿ ಜಾಥಾ Read More »

ಕರಾವಳಿ

ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಚುನಾವಣಾ ಪ್ರಮಾಣ ವಚನ ಬೋಧನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28.  ಮುಂಬರುವ ಚುನಾವಣೆಯಲ್ಲಿ ಗ್ರಾಮ ಮಟ್ಟದಲ್ಲಿ  ಶೇ.100 ಮತದಾನ ಮಾಡುವ ಬಗ್ಗೆ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಮತದಾನದ ಜಾಗೃತಿ ಮೂಡಿಸುವ ಬಗ್ಗೆ ಪ್ರಮಾಣ ವಚನ ಬೋಧಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮ ರಾಮ್ದಾಸ್ ಪ್ರಮಾಣವಚನ ಬೋಧಿಸಿದರು. ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ, ಸದಸ್ಯೆ ರಜಿತಾಪದ್ಮನಾಭ ಕೇಪುಂಜ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆನಂದ, ಸ್ತ್ರೀಶಕ್ತಿ ಮಹಿಳೆಯರಾದ ಉಮಾವತಿ ರೈ, ಡೀಕಮ್ಮ ಜಾಲು, ರತ್ನಾವತಿ, ಲೀಲಾವತಿ, ರೇವತಿ, ಖತೀಜ ನೀರಾರಿ, ಮಮ್ತಾಜ್,

ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಚುನಾವಣಾ ಪ್ರಮಾಣ ವಚನ ಬೋಧನೆ Read More »

ಕರಾವಳಿ

ಕಡಬದಲ್ಲಿ ಏಕಾಹ ಭಜನೋತ್ಸವ ► ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿ: ಸುಬ್ರಹ್ಮಣ್ಯ ಶ್ರೀ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಹಿಂದಿನ ಕಾಲದಲ್ಲಿ ದೇವರನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸು, ಯಾಗ ಯಜ್ಞಾದಿಗಳನ್ನು ಮಾಡಬೇಕಿತ್ತು. ಆದರೆ ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಸಂಕೀರ್ತನೆ ಸುಲಭಮಾರ್ಗ. ಅದರಲ್ಲಿಯೂ ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿಯಾಗಲು ಸಾಧ್ಯ ಎಂದು ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 57ನೇ ವರ್ಷದ ಏಕಾಹ ಭಜನೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಭಜನೆ ಎಂಬುದು ದೇವರನ್ನು ಸಂತೃಪ್ತಿ ಪಡಿಸಲು ಇರುವ ಅತ್ಯಂತ

ಕಡಬದಲ್ಲಿ ಏಕಾಹ ಭಜನೋತ್ಸವ ► ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿ: ಸುಬ್ರಹ್ಮಣ್ಯ ಶ್ರೀ Read More »

ಕರಾವಳಿ

ಕಳಾರ ತಡೆಗೋಡೆಗೆ ಗುದ್ದಲಿಪುಜೆ

(ನ್ಯೂಸ್ ಕಡಬ) newskadaba.com ಕಡಬ, ಮಾ.27. ಕಡಬ ಗ್ರಾ.ಪಂ. ವ್ಯಾಪ್ತಿಯ ಕಳಾರ ದಲಿತ ಕಾಲೋನಿಯಲ್ಲಿ ಸುಳ್ಯ ಶಾಸಕರ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ಸೋಮವಾರ ಗುದ್ದಲಿಪುಜೆ ನೆರವೇರಿಸಲಾಯಿತು. ಶಾಸಕರ ಸುಮಾರು 5 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣವಾಗಲಿರುವ ತಡೆಗೋಡೆಗೆ ತಾ.ಪಂ.ಮಾಜಿ ಅಧ್ಯಕ್ಷ ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ ಗುದ್ದಲಿಪುಜೆ ನೆರವೇರಿಸಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸಮಾಜದ ಎಲ್ಲಾ ವರ್ಗದ ಜನತೆ ನೆಮ್ಮದಿಯ ಬದುಕನ್ನು ಕಾಣಬೇಕು ಎಂಬ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. ಮುಂದೆ

ಕಳಾರ ತಡೆಗೋಡೆಗೆ ಗುದ್ದಲಿಪುಜೆ Read More »

ಕರಾವಳಿ
Scroll to Top