News Kadaba

ಬೆಂಗಳೂರು : ಮಾಸ್ಕ್ ದಂಡದ ಮೊತ್ತ 1000ರೂ ಯಿಂದ 250 ರುಪಾಯಿಗೆ ಇಳಿಕೆ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 07: ಕೊರೊನಾ ಹವಾಳಿಯನ್ನ ತಡೆಗಟ್ಟಲು ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿತ್ತು. ಅದ್ರಂತೆ, ಮಾಸ್ಕ್ ಹಾಕದಿದ್ರೆ 1000 ದಂಡ ವಿಧಿಸುವ ನಿಯಮವನ್ನ ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಸಧ್ಯ ಸಾರ್ವಜನಿಕರ ಒತ್ತಯಕ್ಕೆ ಮಣಿದ ಸರ್ಕಾರ ದಂಡದ ಮೊತ್ತವನ್ನ ಕಡಿಮೆಗೊಳಿಸಿದೆ.   ಹೊಸ ನಿಯಮದಂತೆ ನಗರ ಪ್ರದೇಶಗಳಲ್ಲಿ 1000 ದಂಡದ ಮೊತ್ತವನ್ನ 250 ರೂಪಾಯಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ಯಿಂದ 100 ರೂಪಾಯಿಗೆ ಇಳಿಸಿದೆ. ಇನ್ನು ಈ ಅದೇಶ ತಕ್ಷಣಕ್ಕೆ ಜಾರಿಯಾಗುವಂತೆ […]

ಬೆಂಗಳೂರು : ಮಾಸ್ಕ್ ದಂಡದ ಮೊತ್ತ 1000ರೂ ಯಿಂದ 250 ರುಪಾಯಿಗೆ ಇಳಿಕೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ದೇಶದಲ್ಲಿ ಎಷ್ಟಿದೆ ಗೊತ್ತ ಕೋವಿಡ್ ಕೇಸ್..!?

 (ನ್ಯೂಸ್ ಕಡಬ) newskadaba.com ನವದೆಹಲಿ, ಅ. 07: ದೇಶದಲ್ಲಿ ಬುಧವಾರ 72,049 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 67 ಲಕ್ಷ ಗಡಿದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 67,57,132ಕ್ಕೆ ಏರಿಕೆಯಾಗಿದ್ದು, ಒಂದೇ ದಿನ 986 ಮಂದಿ ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ 1,04,555ಕ್ಕೆ ತಲುಪಿದೆ. ಇನ್ನು 67,57,132 ಮಂದಿ ಸೋಂಕಿತರ ಪೈಕಿ ದೇಶದಲ್ಲಿ ಈ ವರೆಗೂ 57,44,694 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನು

ದೇಶದಲ್ಲಿ ಎಷ್ಟಿದೆ ಗೊತ್ತ ಕೋವಿಡ್ ಕೇಸ್..!? Read More »

ರಾಷ್ಟ್ರೀಯ ನ್ಯೂಸ್

ಪಬ್ಜಿಯಿಂದ ಪ್ರಾಣಹೋಯ್ತು ➤ 12 ವರ್ಷದ ಬಾಲಕನಿಗೆ ಹಾರ್ಟ್ ಅಟ್ಯಾಕ್… !

(ನ್ಯೂಸ್ ಕಡಬ) newskadaba.com ಈಜಿಪ್ಟ್, ಅ. 07: ಕೇವಲ 12 ವರ್ಷದ ಹುಡುಗನಿಗೆ ಮೊಬೈಲ್‌ ಅಂದ್ರೆ ಪಂಚಪ್ರಾಣವಾಗಿತ್ತು.‌ ಪಬ್‌ಜಿ ಗೇಮ್‌ ನಲ್ಲಿ ಸದಾ ಸಮಯ ಕಳೆಯುತ್ತಿದ್ದ. ಆದ್ರೀಗ ಇದೇ ಹುಚ್ಚು ಆತನ ಪ್ರಾಣ ತೆಗೆದಿದೆ. ಈಜಿಪ್ಟ್‌ನಲ್ಲಿ ಮೊಬೈಲ್ ಆಟ ಬಾಲಕನ ಪ್ರಾಣ ತೆಗೆದಿದೆ. ಬ್ರೇಕ್ ಇಲ್ಲದೆ ಒಂದೇ ಸಮನೆ ಮೊಬೈಲ್ ಗೇಮ್ ಆಡ್ತಿದ್ದನಂತೆ ಬಾಲಕ. ಪರಿಣಾಮ ಆತನಿಗೆ ಹಾರ್ಟ್‌ ಅಟ್ಯಾಕ್ ಆಗಿದೆ ಎಂದು ಮೂಲಗಳು ಹೇಳಿವೆ. ಆಟ ಆಡ್ತಾ ಆಡ್ತಾ ಅಲ್ಲೇ ಬಾಲಕ ಕುಸಿದು ಬಿದ್ದಿದ್ದಾನೆ. ತಕ್ಷಣ

ಪಬ್ಜಿಯಿಂದ ಪ್ರಾಣಹೋಯ್ತು ➤ 12 ವರ್ಷದ ಬಾಲಕನಿಗೆ ಹಾರ್ಟ್ ಅಟ್ಯಾಕ್… ! Read More »

ರಾಷ್ಟ್ರೀಯ ನ್ಯೂಸ್

ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಕಸಾಯಿ ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ➤ ಡಾ.ಭರತ್ ಶೆಟ್ಟಿ.ವೈ

(ನ್ಯೂಸ್ ಕಡಬ) newskadaba.com ಸುರತ್ಕಲ್, ಅ.07: ಕರಾವಳಿ ಜಿಲ್ಲೆಯಲ್ಲಿ ಹಾಗೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ಹಾಗೂ ಅಕ್ರಮ ಕಸಾಯಿ ಖಾನೆ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಾ.ಭರತ್ ಶೆಟ್ಟಿ.ವೈ ರವರು ತಿಳಿಸಿದ್ದಾರೆ.     ರಸ್ತೆಬದಿಯಲ್ಲಿ ಮೇಯಲು ಬಿಟ್ಟ ದನಗಳನ್ನು ವಾಹನಗಳಲ್ಲಿ ತುಂಬಿಸಿ ಅಕ್ರಮ ಕಸಾಯಿ ಖಾನೆಗಳಿಗೆ ಮಾರುವುದು, ಬೀಡಾಡಿ ದನಗಳನ್ನು ಹಿಂಸಿಸಿ ಕೊಂಡೊಯ್ಯುವುದು, ಮಾರಾಕಾಯುಧಗಳನ್ನು ತೋರಿಸಿ ಹಟ್ಟಿಯಿಂದ ದನ ಕಳವು ಮಾಡುವುದು, ಮತ್ತಿತರ

ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಕಸಾಯಿ ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ➤ ಡಾ.ಭರತ್ ಶೆಟ್ಟಿ.ವೈ Read More »

ಕರಾವಳಿ

ಉಪ್ಪಿನಂಗಡಿ: ಬಸ್‌ ಟಿಕೇಟ್‌ ಕಾಣದಾಗಿ ಶುಲ್ಕ ಪಾವತಿಸಿದ ವೃದ್ಧ ದಂಪತಿಗಳು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.07: ಕಂಡೆಕ್ಟರ್‌ ಕೈಯಿಂದ ಟಿಕೇಟ್‌ ಖರೀದಿಸಿದ್ದರೂ ಟಿಕೇಟ್‌ ಪರೀಕ್ಷಿಕರು ಆಗಮಿಸಿದ ವೇಳೆ ಟಿಕೇಟ್‌ ಕಾಣದಾಗಿ ವೃದ್ಧ ದಂಪತಿಗಳು ದಂಡಪಾವತಿಸಬೇಕಾಗಿ ಬಂದ ಘಟನೆ ಕಳೆದ ದಿನ ಉಪ್ಪಿನಂಗಡಿಯಲ್ಲಿ ನಡೆದಿದೆ.   ಪರೀಕ್ಷಿಕರು ಎಲ್ಲಾ ಪ್ರಯಾಣಿಕರಿಂದ ಟಿಕೇಟ್‌ ಪರಿಶೀಲನೆಗಾಗಿ ಟಿಕೇಟ್‌ ಕೇಳಿದಾಗ ಕೋಡಿಂಬಾಳ ನಿವಾಸಿಯ ದಂಪತಿಯ ಕೈಯಲ್ಲಿ ಟಿಕೇಟ್‌ ಕಳೆದುಹೋಗಿತ್ತು. ಟಿಕೇಟ್‌ ಖರೀದಿಸಿದ್ದೇವೆ ಎಂದು ದಂಪತಿಗಳು ಹೇಳಿದರೂ, ಟಿಕೇಟ್‌ ನೀಡಿದ್ದೇನೆಂದೂ ಕಂಡಕ್ಟರ್ ತಿಳಿಸಿದರೂ ಪರೀಕ್ಷಿಕರಿಗೆ ಟಿಕೇಟ್‌ ಲಭಿಸದ ಕಾರಣ ದಂಡ ಶುಲ್ಕ ಪಾವತಿಸಬೇಕೆಂದು ಅವರಿಗೆ

ಉಪ್ಪಿನಂಗಡಿ: ಬಸ್‌ ಟಿಕೇಟ್‌ ಕಾಣದಾಗಿ ಶುಲ್ಕ ಪಾವತಿಸಿದ ವೃದ್ಧ ದಂಪತಿಗಳು Read More »

ಕರಾವಳಿ

ವಿದೇಶದಲ್ಲಿ ಸಲಿಂಗ ಮದುವೆಯಾದ ಕನ್ನಡಿಗ..!

(ನ್ಯೂಸ್ ಕಡಬ) newskadaba.com ಕೊಡಗು, ಅ.07:  ವಿದೇಶದಲ್ಲಿ, ಕೊಡಗಿನ ಶರತ್ ಪೊನ್ನಪ್ಪ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್​ ಎಂಬುವವರು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸೆ.26ರಂದು ಸಲಿಂಗ ಮದುವೆಯಾಗಿದ್ದಾರೆ. ಈ ಪೈಕಿ ಓರ್ವ ಕನ್ನಡಿಗ!.     ಕಳೆದ ಹತ್ತು ವರ್ಷದಿಂದ ವಿದೇಶದಲ್ಲೇ ನೆಲೆಸಿರುವ ಶರತ್ ಪೊನ್ನಪ್ಪ, ಗೆಳೆಯನನ್ನೇ ವರಿಸಿದ್ದಾನೆ. ಈತನ ವಿವಾಹ ಸಮಾರಂಭದಲ್ಲಿ ಹಲವರು ಭಾಗಿಯಾಗಿ ಶುಭ ಕೋರಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಮದುವೆ ಫೋಟೋ ಕಂಡ ಬಹುತೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಲಿಂಗ

ವಿದೇಶದಲ್ಲಿ ಸಲಿಂಗ ಮದುವೆಯಾದ ಕನ್ನಡಿಗ..! Read More »

ಕರ್ನಾಟಕ

ಎಡನೀರು ಮಠಕ್ಕೆ ಭೇಟಿ ನೀಡಿದ ಪುತ್ತೂರು ತಾ. ಹಿಂಜಾವೇ ಪ್ರಮುಖರು

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 07: ಎಡನೀರು ಶಂಕರಚಾರ್ಯ ತೋಟಕಾಚಾರ್ಯ ಮಹಸಂಸ್ಥಾನಂ ಎಡನೀರು ಮಠದ ಮುಂದಿನ ಪೀಠಧಿಪತಿಗಳಾದ ಶ್ರೀ ಜಯರಾಮ ಮಂಜತ್ತಾಯರವರನ್ನು ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕಿನ ಪ್ರಮುಖರು ಆ.7 ರಂದು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದರು. ಇನ್ನು ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಅಜಿತ್ ಹೊಸಮನೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಳ, ಜಿಲ್ಲಾ ಮತೃ ಸುರಕ್ಷಾ ಪ್ರಮುಖ ರಾಜೇಶ್ ಪಂಜೋಡಿ, ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಸಿ

ಎಡನೀರು ಮಠಕ್ಕೆ ಭೇಟಿ ನೀಡಿದ ಪುತ್ತೂರು ತಾ. ಹಿಂಜಾವೇ ಪ್ರಮುಖರು Read More »

ಕರಾವಳಿ, ಕರ್ನಾಟಕ

ಡ್ರಗ್ಸ್ ಜಾಲದ ನಂಟು ಆರೋಪ ➤ ರಿಯಾ ಚಕ್ರವರ್ತಿಗೆ ಷರತ್ತು ಬದ್ಧ ಜಾಮೀನು

(ನ್ಯೂಸ್ ಕಡಬ) newskadaba.com ಮುಂಬೈ, ಅ. 07: ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರಾಗಿದೆ. ಮುಂಬೈ ಬಿಟ್ಟು ಹೊರಹೋಗುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ. ಇದರೊಂದಿಗೆ ರಿಯಾ ಚಕ್ರವರ್ತಿ ಜೈಲಿನಿಂದ ಇಂದು ಬಿಡುಗಡೆಯಾಗಲಿದ್ದಾರೆ.   ಹೀಗಾಗಿ 28 ದಿನಗಳ ಬಳಿಕ ರಿಯಾ ಚಕ್ರವರ್ತಿ ಜೈಲಿನಿಂದ ಹೊರಬರಲಿದ್ದಾರೆ. ರಿಯಾ ಚಕ್ರವರ್ತಿಗೆ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಸಿಕ್ಕಿದೆ. ಅಲ್ಲದೆ ರಿಯಾ

ಡ್ರಗ್ಸ್ ಜಾಲದ ನಂಟು ಆರೋಪ ➤ ರಿಯಾ ಚಕ್ರವರ್ತಿಗೆ ಷರತ್ತು ಬದ್ಧ ಜಾಮೀನು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ : ಮುದ್ದು ಮಗಳಿಗೆ “ಕನ್ನಡ” ವೆಂದು ನಾಮಕರಣ

(ನ್ಯೂಸ್ ಕಡಬ) newskadaba.com ಉಡುಪಿ, ಅ. 07: ಅಪ್ಪಟ್ಟ ಕನ್ನಡಾಭಿಮಾನಿ ಉದ್ಯಮಿಯೊಬ್ಬರು ನವೆಂಬರ್‍ನಲ್ಲಿ ಜನಿಸಿದ ತಮ್ಮ ಮುದ್ದಾದ ಮಗಳಿಗೆ “ಕನ್ನಡ” ಎಂಧು ಹೆಸರಿಟ್ಟಿದ್ದಾರೆ. ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ – ಪ್ರತಿಮಾ ದಂಪತಿ ಮಗಳಿಗೆ ಕನ್ನಡ ಎಂಬ ಹೆಸರನ್ನಿಟ್ಟು ಕನ್ನಡಾಭಿಮಾನ ಮೆರೆದಿದ್ದಾರೆ. ಬೆಂಗಳೂರಿನಲ್ಲಿ 2019 ರ ನವೆಂಬರ್ 27 ರಂದು ಜನಿಸಿದ ಚೊಚ್ಚಲ ಮಗಳಿಗೆ ಮಂದಿನ ತಿಂಗಳು ಹುಟ್ಟು ಹಬ್ಬದ ಸಂಭ್ರಮ. ಒಳಾಂಗಣ ವಿನ್ಯಾಸದ ಗುತ್ತಿಗೆ ವೃತ್ತಿಯಲ್ಲಿರುವ ಪ್ರತಾಪ್ ಶೆಟ್ಟಿ 25 ವರ್ಷಗಳಿಂದ ಬೆಂಗಳೂರಿನ ಬನ್ನೇರುಘಟ್ಟ

ಉಡುಪಿ : ಮುದ್ದು ಮಗಳಿಗೆ “ಕನ್ನಡ” ವೆಂದು ನಾಮಕರಣ Read More »

ಕರಾವಳಿ, ಕರ್ನಾಟಕ

ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಭೂಪ ➤ ಇತ್ತ ಹಾಥರಸ್​ ಘಟನೆ ಖಂಡಿಸಿ ತಂದೆಯ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.07: ಹಾಥರಸ್​ನಲ್ಲಿ ನಡೆದಿದ  ಗ್ಯಾಂಗ್​ರೇಪ್​ ಘಟನೆಯನ್ನು ಖಂಡಿಸಿ ಎಸ್​ಡಿಪಿಐ ಸಂಘಟನೆಯ ಮುಖಂಡನೊಬ್ಬ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಆತನ ಮಗ ದಲಿತ ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನವಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು  ಮಹಮ್ಮದ್‌ ಫೈಝಲ್‌ ಎಂದು ಗುರುತಿಸಲಾಗಿದೆ. ಈತ ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ನಿವಾಸಿ. ಪೈಝಲ್​ಗೆ ಆಂಧ್ರ​ ಮೂಲದ ಯುವತಿಯೊಬ್ಬಳು ಇನ್​ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ ದೈಹಿಕ ಸಂಬಂಧಕ್ಕೂ ಅಲ್ಲದೆ,

ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಭೂಪ ➤ ಇತ್ತ ಹಾಥರಸ್​ ಘಟನೆ ಖಂಡಿಸಿ ತಂದೆಯ ಪ್ರತಿಭಟನೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top