new dehli

ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ..!

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.26. 74ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಎಲ್ಲರ ಗಮನಸೆಳೆಯಿತು. ಪರೇಡ್ ನಲ್ಲಿ ಕರ್ನಾಟಕದಿಂದ ನಾರಿ ಶಕ್ತಿ ಸಾರುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಯಿತು. ಸ್ತಬ್ಧ ಚಿತ್ರದ ಮೂಲಕ ಪದ್ಮಶ್ರೀ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಮತ್ತು ಸಾಲು ಮರದ ತಿಮ್ಮಕ್ಕ ಅವರ ಸಾಧನೆಗಳ ಅನಾವರಣಗೊಳಿಸಲಾಯಿತು. ಗಿಡ-ಮರ ,ಬೆಟ್ಟ-ಗುಡ್ಡಗಳಿಂದ ಸ್ತಬ್ಧಚಿತ್ರ ಶೃಂಗಾರಗೊಂಡಿತ್ತು ಎನ್ನಲಾಗಿದೆ.  

ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ..! Read More »

ರಾಷ್ಟ್ರೀಯ ನ್ಯೂಸ್

ಕೇಂದ್ರದಿಂದ ‘ಪದ್ಮ ಪ್ರಶಸ್ತಿ’ ಘೋಷಣೆ ➤ 6 ಕನ್ನಡಿಗರು ಸೇರಿ 106 ಸಾಧಕರಿಗೆ ಗೌರವ

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಜ.26. 74ನೇ ಗಣರಾಜ್ಯೋತ್ಸವದ ಮುನ್ನ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮ ಪುರಸ್ಕೃತರನ್ನ ಘೋಷಿಸಿದ್ದು, ಕನ್ನಡಿಗರಾದ ಸುಧಾ ಮೂರ್ತಿ, ಎಸ್. ಎಂ ಕೃಷ್ಣ, ಎಸ್.ಎಲ್ ಬೈರಪ್ಪ, ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯ, ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿ ವೆಂಕಟಪ್ಪ ಸೇರಿ 106 ಸಾಧಕರು ಪ್ರಶಸ್ತಿಗೆ ಅರ್ಹರಾಗಿದ್ದಾರೆ. 6 ಪದ್ಮವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮಶ್ರೀ ಪ್ರಶಸ್ತಿಗಳಲ್ಲಿ ಒಟ್ಟಾರೆ 19 ಪ್ರಶಸ್ತಿ ಪುರಸ್ಕೃತರು ಮಹಿಳೆಯರಾಗಿದ್ದಾರೆ. ಈ ಪಟ್ಟಿಯಲ್ಲಿ ವಿದೇಶಿಯರು / ಎನ್‌ಆರ್‌ಐ / ಪಿಐಒ

ಕೇಂದ್ರದಿಂದ ‘ಪದ್ಮ ಪ್ರಶಸ್ತಿ’ ಘೋಷಣೆ ➤ 6 ಕನ್ನಡಿಗರು ಸೇರಿ 106 ಸಾಧಕರಿಗೆ ಗೌರವ Read More »

ರಾಷ್ಟ್ರೀಯ ನ್ಯೂಸ್

ರಾಜ್ಯದ 10 ವಿಜ್ಞಾನಿಗಳಿಗೆ ಯಂಗ್‌ ಸೈಂಟಿಸ್ಟ್‌ ಪ್ರಶಸ್ತಿ

(ನ್ಯೂಸ್ ಕಡಬ)newskadaba.com ನವದೆಹಲಿ,ಜ.25. ವಿಜ್ಞಾನ ಕ್ಷೇತ್ರದಲ್ಲಿನ ವಿವಿಧ ಸಂಶೋಧನೆ ಹಾಗೂ ಸಾಧನೆಗಳನ್ನು ಪರಿಗಣಿಸಿ, ನವದೆಹಲಿಯ ಇಂಡಿಯನ್‌ ನ್ಯಾಷನಲ್‌ ಸೈನ್ಸ್‌ ಅಕಾಡೆಮಿ ಕೊಡಮಾಡುವ ಯಂಗ್‌ ಸೈಂಟಿಸ್ಟ್‌ ವಾರ್ಷಿಕ ಪ್ರಶಸ್ತಿ ಪುರಸ್ಕಾರಕ್ಕೆ ಕರ್ನಾಟಕದ 10 ಯುವ ವಿಜ್ಞಾನಿಗಳು ಭಾಜನರಾಗಿದ್ದಾರೆ ಎಂದು ವರದಿ ತಿಳಿಸಿದೆ. ಅಕಾಡೆಮಿ ನೀಡುವ ಅತ್ಯಂತ ಉತ್ಕೃಷ್ಟ ಪ್ರಶಸ್ತಿ ಇದಾಗಿದ್ದು, ಪ್ರತಿ ವರ್ಷ 40 ಯುವ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಈ ವರ್ಷ 42 ಯುವ ವಿಜ್ಞಾನಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕದ ಬೆಂಗಳೂರಿನಲ್ಲಿ ವ್ಯಾಸಂಗ

ರಾಜ್ಯದ 10 ವಿಜ್ಞಾನಿಗಳಿಗೆ ಯಂಗ್‌ ಸೈಂಟಿಸ್ಟ್‌ ಪ್ರಶಸ್ತಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ನವದೆಹಲಿಗೆ ಬಂದಿಳಿದ ಗಣರಾಜ್ಯೋತ್ಸವದ ಮುಖ್ಯ ಅತಿಥಿ !

(ನ್ಯೂಸ್ ಕಡಬ)newskadaba.com ನವದೆಹಲಿ, ಜ.25. 74ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ನವದೆಹಲಿಗೆ ಆಗಮಿಸಿದ್ದು, ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಅವರ ಅಧಿಕೃತ ಭೇಟಿಗಾಗಿ ಐವರು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ನಿಯೋಗ ಅವರ ಜೊತೆಗೆ ಬಂದಿದೆ ಎನ್ನಲಾಗಿದೆ. ಅಬ್ದೆಲ್ ಫತ್ತಾಹ್ ಎಲ್ ಸಿಸಿ ಅವರು ನವದೆಹಲಿಗೆ ಆಗಮಿಸುತ್ತಿದ್ದಂತೆ ಅವರನ್ನು ಸ್ವಾಗತಿಸಲು ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಪ್ರದರ್ಶಿಸಿಲಾಯಿತು ಎಂದು ತಿಳಿದುಬಂದಿದೆ.

ನವದೆಹಲಿಗೆ ಬಂದಿಳಿದ ಗಣರಾಜ್ಯೋತ್ಸವದ ಮುಖ್ಯ ಅತಿಥಿ ! Read More »

ರಾಷ್ಟ್ರೀಯ ನ್ಯೂಸ್

ಪ್ರತಿನಿತ್ಯ 3 ಸಾವಿರ ಉದ್ಯೋಗಿಗಳ ವಜಾ..!

(ನ್ಯೂಸ್ ಕಡಬ)newskadaba.com ನವದೆಹಲಿ, ಜ.25. ಬಹುರಾಷ್ಟ್ರೀಯ ಕಂಪನಿಗಳು, ಸ್ಟಾರ್ಟಪ್‌ಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಆರಂಭದಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ವಿಪ್ರೊದಂತಹ ದೊಡ್ಡ ಟೆಕ್ ಕಂಪನಿಗಳು ಅನೇಕ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿವೆ. ಈ ಬೆಳವಣಿಗೆ ಜಗತ್ತಿನಾದ್ಯಂತ ಭಾರತೀಯ ವೃತ್ತಿಪರರಲ್ಲಿ ಅಪಾರ ಒತ್ತಡ ಮತ್ತು ಆತಂಕವನ್ನು ಉಂಟುಮಾಡಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಂಪನಿಗಳು ಇದೇ ರೀತಿ ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜನೆ ಹಾಕಿಕೊಂಡಿದ್ದು, ಮತ್ತಷ್ಟು ಆತಂಕವನ್ನು ಹುಟ್ಟುಹಾಕಿದೆ. ಜೀವನಕ್ಕಾಗಿ ಹಣ ಸಂಪಾದನೆ ಬಹಳ ಮುಖ್ಯ, ಅದರ ಜೊತೆ

ಪ್ರತಿನಿತ್ಯ 3 ಸಾವಿರ ಉದ್ಯೋಗಿಗಳ ವಜಾ..! Read More »

ರಾಷ್ಟ್ರೀಯ ನ್ಯೂಸ್

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ➤  ಉದ್ಯೋಗಿಗಳ ‘ಪಿಂಚಣಿ ಹೆಚ್ಚಳ’ ಕ್ಕೆ ಗ್ರೀನ್ ಸಿಗ್ನಲ್ !

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.24. ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿಗಾಗಿ ಆಯ್ಕೆಗಳನ್ನ ಒದಗಿಸಲು ಸುಪ್ರೀಂ ಕೋರ್ಟ್ ತನ್ನ ಆದೇಶವನ್ನ ಜಾರಿಗೆ ತಂದಿದೆ. ಇದರೊಂದಿಗೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಆಗಿನ ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿ ಆಯ್ಕೆಯನ್ನ ಜಾರಿಗೆ ತಂದಿದೆ. ಸುಪ್ರೀಂ ಕೋರ್ಟ್ ನ ಆದೇಶವನ್ನ ಹೊಸದಾಗಿ ಜಾರಿಗೆ ತಂದಿದ್ದು, ಪೋರ್ಟಲ್  ನಲ್ಲಿ ವಿಶೇಷ ಆಯ್ಕೆಯನ್ನ ತಂದಿದೆ. ಹೆಚ್ಚಿನ ಭವಿಷ್ಯ ನಿಧಿ ಪಿಂಚಣಿಗಳ ಕುರಿತು ಸುಪ್ರೀಂ ಕೋರ್ಟ್ ನ ಇತ್ತೀಚಿನ ಆದೇಶವನ್ನ ಜಾರಿಗೊಳಿಸಿ,

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ➤  ಉದ್ಯೋಗಿಗಳ ‘ಪಿಂಚಣಿ ಹೆಚ್ಚಳ’ ಕ್ಕೆ ಗ್ರೀನ್ ಸಿಗ್ನಲ್ ! Read More »

ರಾಷ್ಟ್ರೀಯ ನ್ಯೂಸ್

‘ಕೇಂದ್ರ ಸರ್ಕಾರದ’ ಮಹತ್ವದ ಘೋಷಣೆ ➤  ಉದ್ಯೋಗ ‘ವಯೋಮಿತಿ’ 15ನೇ ವರ್ಷಕ್ಕೆ ಇಳಿಕೆ

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.24. ಬಹುತೇಕ ಎಲ್ಲರೂ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಾರೆ. ಇನ್ನು ಸರ್ಕಾರಿ ಉದ್ಯೋಗ ಪಡೆಯುವುದ್ರಲ್ಲಿ ಆ ವ್ಯಕ್ತಿಗೆ ಏನಿಲ್ಲವೆಂದ್ರು ವಯಸ್ಸು ಕನಿಷ್ಠ 25 ರಿಂದ 30 ವರ್ಷಗಳಾಗುತ್ತೆ. ಅದ್ರಂತೆ, ಸಧ್ಯ ಸರ್ಕಾರಿ ಉದ್ಯೋಗಗಳಿಗೆ ವಯೋಮಿತಿ 18 ವರ್ಷಗಳು ಎಂದು ಉಲ್ಲೇಖಿಸಲಾಗಿದೆ. ಆದ್ರೆ, ನೀವು 15ನೇ ವಯಸ್ಸಿನಲ್ಲಿಯೇ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಬಹುದು. ಹೌದು, 15ನೇ ವಯಸ್ಸಿನಲ್ಲಿ ಕೆಲಸ ಪಡೆಯುವ ಅವಕಾಶ ಸಿಗಲಿದೆ. ಸಾಮಾನ್ಯವಾಗಿ, ರೈಲ್ವೆ ಉದ್ಯೋಗಗಳಿಗೆ ಶೈಕ್ಷಣಿಕ ಅರ್ಹತೆಯು 10ನೇ ತರಗತಿಯನ್ನ ಪೂರ್ಣಗೊಳಿಸಿರಬೇಕು. ಆದ್ರೆ, ಅವನಿಗೆ

‘ಕೇಂದ್ರ ಸರ್ಕಾರದ’ ಮಹತ್ವದ ಘೋಷಣೆ ➤  ಉದ್ಯೋಗ ‘ವಯೋಮಿತಿ’ 15ನೇ ವರ್ಷಕ್ಕೆ ಇಳಿಕೆ Read More »

ರಾಷ್ಟ್ರೀಯ ನ್ಯೂಸ್

ಕರ್ನಾಟಕಕ್ಕೆ ಶೀಘ್ರವೇ ಇನ್ನೊಂದು ವಂದೇ ಭಾರತ್‌ ರೈಲು ಸಿಗುವ ಸಾಧ್ಯತೆ ?

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಜ.24. ಕರ್ನಾಟಕಕ್ಕೆ ಶೀಘ್ರವೇ ಇನ್ನೊಂದು ವಂದೇ ಭಾರತ್‌ ರೈಲು ಸಿಗುವ ಸಾಧ್ಯತೆ ಇದೆ. ಬೆಂಗಳೂರಿನಿಂದ ಹೈದರಾಬಾದ್‌ನ ಕಾಚಿಗುಡ ರೈಲು ನಿಲ್ದಾಣಕ್ಕೆ ಹೊಸದಾಗಿ ರೈಲು ಆರಂಭಿಸುವ ಬಗ್ಗೆ ಕೇಂದ್ರ ರೈಲ್ವೇ ಸಚಿವಾಲಯ ಚಿಂತನೆ ನಡೆಸುತ್ತಿದೆ. ಸಿಕಂದರಾಬಾದ್‌ನಿಂದ ತಿರುಪತಿ, ಪುಣೆಗೂ ಹೊಸ ರೈಲಿನ ಸೇವೆ ಸಿಗಲಿದೆ. ಎಪ್ರಿಲ್‌-ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ, ಈ ವರ್ಷವೇ ತೆಲಂಗಾಣ ವಿಧಾನಸಭೆ ಚುನಾವಣೆ ಇರುವು ದರಿಂದ ಕೇಂದ್ರದ ಈ ನಿರ್ಧಾರ ಮಹತ್ವ ಪಡೆದಿದೆ. 2024ರ ಲೋಕಸಭೆ ಚುನಾವಣೆ ವೇಳೆ

ಕರ್ನಾಟಕಕ್ಕೆ ಶೀಘ್ರವೇ ಇನ್ನೊಂದು ವಂದೇ ಭಾರತ್‌ ರೈಲು ಸಿಗುವ ಸಾಧ್ಯತೆ ? Read More »

ರಾಷ್ಟ್ರೀಯ ನ್ಯೂಸ್

ಗರ್ಭಪಾತ ನಿರ್ಧರಿಸುವ ಹಕ್ಕು ಮಹಿಳೆಗಿದೆ..! ➤ ಗರ್ಭಿಣಿಯ ಅಬಾರ್ಷನ್‌ಗೆ ಹೈಕೋರ್ಟ್‌ ಅಸ್ತು

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.24. ತನ್ನ ಗರ್ಭ​ವನ್ನು ಮುಂದು​ವ​ರೆ​ಸ​ಬೇಕೆ, ಬೇಡವೇ ಎಂಬು​ದ​ನ್ನು ನಿರ್ಧ​ರಿ​ಸುವ ಹಕ್ಕು ಮಹಿ​ಳೆ​ಗಿದೆ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ಭ್ರೂಣಕ್ಕೆ ತೀವ್ರ​ವಾದ ಸ​ಮ​ಸ್ಯೆ​ಗ​ಳು ಇರು​ವು​ದ​ರಿಂದ ವಿವಾ​ಹಿತ ಮಹಿ​ಳೆಗೆ 32ನೇ ವಾರದಲ್ಲಿ ಗರ್ಭ​ಪಾತ ಮಾಡಿ​ಕೊ​ಳ್ಳಲು ಕೋರ್ಟ್‌ ಅನು​ಮತಿ ನೀಡಿದೆ. ಗರ್ಭ​ದ​ಲ್ಲಿ​ರುವ ಮಗು​ವಿಗೆ ಆರೋಗ್ಯ ಸಮ​ಸ್ಯೆ​ಗ​ಳಿ​ರು​ವು​ದ​ರಿಂದ ಗರ್ಭ​ಪಾ​ತಕ್ಕೆ ಅವ​ಕಾಶ ನೀಡ​ಬೇಕು ಎಂದು ಕೋರಿ ಮಹಿಳೆಯೊ​ಬ್ಬರು ಬಾಂಬೆ ಹೈಕೋರ್ಟ್‌ ಮೆಟ್ಟಿ​ಲೇ​ರಿ​ದ್ದರು. ಈ ಅರ್ಜಿಯ ವಿಚಾ​ರಣೆ ನಡೆ​ಸಿದ ನ್ಯಾಯಮೂರ್ತಿ ಗೌತಮ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಎ​ಸ್‌.​ಜಿ.​ ದಿಗೆ ಅವ​ರಿದ್ದ ಪೀಠ,

ಗರ್ಭಪಾತ ನಿರ್ಧರಿಸುವ ಹಕ್ಕು ಮಹಿಳೆಗಿದೆ..! ➤ ಗರ್ಭಿಣಿಯ ಅಬಾರ್ಷನ್‌ಗೆ ಹೈಕೋರ್ಟ್‌ ಅಸ್ತು Read More »

ರಾಷ್ಟ್ರೀಯ ನ್ಯೂಸ್

ವಿಮಾನದಲ್ಲಿ ಗಗನಸಖಿಯ ಜೊತೆ ಅನುಚಿತ ವರ್ತನೆ..! ➤ ಪ್ರಯಾಣಿಕರ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಜ.24. ವಿಮಾನದಲ್ಲಿ ಪ್ರಯಾಣಿಕರ ದುರ್ವರ್ತನೆಗೆ ನಿಯಂತ್ರಣವೇ ಇಲ್ಲದಂತಾಗಿದೆ. ಹೊಸದಿಲ್ಲಿಯಿಂದ ಹೈದರಾಬಾದ್‌ಗೆ ಹೊರಟಿದ್ದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಗಗನಸಖೀಯ ಜತೆಗೆ ಇಬ್ಬರು ವ್ಯಕ್ತಿಗಳು ನಿಯಮ ಮೀರಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಅವರಿಬ್ಬರನ್ನು ತಕ್ಷಣವೇ ವಿಮಾನದಿಂದ ಇಳಿಸಲಾಗಿದೆ. ಅವರಿಬ್ಬರು ಗಗನಸಖೀಯ ಜತೆಗೆ ವಾಗ್ವಾದದಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕೂಡಲೇ ಅವರಿಬ್ಬರನ್ನು ಹೊಸದಿಲ್ಲಿ ಏರ್‌ಪೋರ್ಟ್‌ನ ಭದ್ರತಾ ಸಿಬಂದಿ ವಶಕ್ಕೆ ಒಪ್ಪಿಸಲಾಗಿದೆ. ಇಬ್ಬರ ಪೈಕಿ ಒಬ್ಟಾತ ಸಿಬಂದಿ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು

ವಿಮಾನದಲ್ಲಿ ಗಗನಸಖಿಯ ಜೊತೆ ಅನುಚಿತ ವರ್ತನೆ..! ➤ ಪ್ರಯಾಣಿಕರ ವಿರುದ್ದ ದೂರು ದಾಖಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top