Mardala

ಮರ್ದಾಳ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ► ಇಂಟರ್ಲಾಕ್ ಕಾಮಗಾರಿಗೆ ಗುದ್ದಲಿಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಅ.17. ಮರ್ದಾಳ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅಂಗಳಕ್ಕೆ ಐತ್ತೂರು .ಪಂ.ಸದಸ್ಯರ 2017-18ನೇ ಸಾಲಿನ ರೂ.1ಲಕ್ಷ ಅನುದಾನದಲ್ಲಿ ಇಂಟರ್ಲಾಕ್ ಅಳವಡಿಸಲು ಸೋಮವಾರ ಗುದ್ದಲಿಪೂಜೆ ನಡೆಯಿತು. ತಾ.ಪಂ ಸದಸ್ಯೆ ಪಿ.ವೈ. ಕುಸುಮ ಗುದ್ದಲಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು  ನಾನು ಇದೇ ಶಾಲೆಯ ಹಳೇಯ ವಿದ್ಯಾರ್ಥಿಯಾಗಿದ್ದು, ಇಲ್ಲಿನ ಶಿಕ್ಷಕರು ಅನೇಕ ಬಾರಿ ಶಾಲಾ ಅಂಗಳಕ್ಕೆ ಇಂಟರ್ಲಾಕ್ ಅಳವಡಿಸುವ ಬಗ್ಗೆ ಬೇಡಿಕೆ ಇಟ್ಟಿದ್ದರು. ಆದರೆ ಈಗ ಸೂಕ್ತ ಸಮಯ ಒದಗಿ ಬಂದಿದೆ ಮುಂದಿನ ದಿನಗಳಲ್ಲಿ […]

ಮರ್ದಾಳ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ► ಇಂಟರ್ಲಾಕ್ ಕಾಮಗಾರಿಗೆ ಗುದ್ದಲಿಪೂಜೆ Read More »

ಕರಾವಳಿ

ಮರ್ದಾಳ-ನಿಂತಿಕಲ್ಲು ಸಂಪರ್ಕ ರಸ್ತೆ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.11. ಮರ್ದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 102ನೇ ನೆಕ್ಕಿಲಾಡಿ ಗ್ರಾಮದ ಮರ್ದಾಳ-ನಿಂತಿಕಲ್ಲು ಸಂಪರ್ಕ ರಸ್ತೆಯ ಕಾಂಕ್ರಿಟಿಕರಣವನ್ನು ಮಂಗಳವಾರ ಉದ್ಘಾಟಿಸಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ಗ್ರಾ.ಪಂ.ಸದಸ್ಯ ಸುಲೈಮಾನ್ ಪಿ., ನೆರವೇರಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ಲಲಿತಾ ರೈ ಮೈಕಾಜೆ, ಎ.ಪಿ.ಎಂ.ಸಿ. ನಿರ್ದೇಶಕರಾದ ಮೇದಪ್ಪ ಗೌಡ ಡೆಪ್ಪುಣಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜರ್ನಾಧನ ಗೌಡ ಪುತ್ತಿಲ, ಗ್ರಾ.ಪಂ ಉಪಾಧ್ಯಕ್ಷೆ ಲತಾ ಕೆ.ಎಸ್, ಸದಸ್ಯರಾದ ದಾಮೋದರ

ಮರ್ದಾಳ-ನಿಂತಿಕಲ್ಲು ಸಂಪರ್ಕ ರಸ್ತೆ ಉದ್ಘಾಟನೆ Read More »

ಕರಾವಳಿ

ಕಡಬ: ರಾಜ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ► ಹಿಂದೂ ಸಂಘಟನೆ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ,ಅ.11. ಹಿಂದೂ ಜಾಗರಣಾ ವೇದಿಕೆ ಹಾಗೂ ವಿಶ್ವಹಿಂದು ಪರಿಷತ್ ಬಜರಂಗದಳವು ರಾಜ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ತಾಲೂಕಿನಾದ್ಯಂತ ಬುಧವಾರ ಪ್ರತಿಭಟನೆ ನಡೆಸಿತು. ಕಡಬ ಬಸ್ ನಿಲ್ದಾನದ ಬಳಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಿಂದುಗಳ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ. ಹಿಂದು ಸಂಘಟನೆಯ ನಾಯಕರ, ಕಾರ್ಯಕರ್ತರ ಮೇಲೆ ಕೊಲೆ ಕೇಸುಗಳನ್ನು ಹಾಕಿಸಿ ಹಿಂದು ಚಳುವಳಿಗಳನ್ನು ಹತ್ತಿಕ್ಕುವ

ಕಡಬ: ರಾಜ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ► ಹಿಂದೂ ಸಂಘಟನೆ ವತಿಯಿಂದ ಪ್ರತಿಭಟನೆ Read More »

ಕರಾವಳಿ

ಮರ್ದಾಳ: ಮಿತ್ತೋಡಿಯಲ್ಲಿ ಪ್ರಯಾಣಿಕರ ಬಸ್ ತಂಗುದಾಣ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.11. ಮರ್ದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತೋಡಿ ಬೊಳ್ಳೂರು ಕ್ರಾಸ್ ಎಂಬಲ್ಲಿ ಪಂಚಾಯತಿನ 14ನೇ ಹಣಕಾಸು ಯೋಜನೆಯಲ್ಲಿ ನಿರ್ಮಿಸಿದ ಪ್ರಯಾಣಿಕರ ಬಸ್ ತಂಗುದಾಣದ ಉದ್ಘಾಟನೆ ಮಂಗಳವಾರ ನಡೆಯಿತು. ಮರ್ದಾಳ ಗ್ರಾಮ ಪಂಚಾಯಿತಿ ಲಲಿತಾ ರೈ ಮೈಕಾಜೆ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭ ಎ.ಪಿ.ಎಂ.ಸಿ. ನಿರ್ದೇಶಕರಾದ ಮೇದಪ್ಪ ಗೌಡ ಡೆಪ್ಪುಣಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜರ್ನಾಧನ ಗೌಡ ಪುತ್ತಿಲ, ಗ್ರಾ.ಪಂ ಉಪಾಧ್ಯಕ್ಷೆ ಲತಾ ಕೆ.ಎಸ್, ಸದಸ್ಯರಾದ ಹರೀಶ್ ಕೋಡಂದೂರು, ದಾಮೋದರ ಡೆಪ್ಪುಣಿ, ಸುಲೈಮಾನ್ ಪಿ.,

ಮರ್ದಾಳ: ಮಿತ್ತೋಡಿಯಲ್ಲಿ ಪ್ರಯಾಣಿಕರ ಬಸ್ ತಂಗುದಾಣ ಉದ್ಘಾಟನೆ Read More »

ಕರಾವಳಿ

ಮರ್ದಾಳ: ಶ್ರೀಮಹಾಲಿಂಗೇಶ್ವರ ದೇವಸ್ಥಾನ ► ಹುಂಡಿ ಅಕ್ಕಿ ಸಮರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಅ.11. ಮರ್ದಾಳ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನಕ್ಕೆ ಹುಂಡಿ ಅಕ್ಕಿ ಸಮರ್ಪಣೆ ಹಾಗೂ ಜೀರ್ಣೋದ್ಧಾರದ ಕುರಿತ ಭಕ್ತಾಧಿಗಳ ಸಭೆ ನಡೆಯಿತು. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪ್ರತಿ ಮನೆಯಲ್ಲಿ ಪ್ರತಿ ದಿನ ಒಂದು ಹುಂಡಿ ಅಕ್ಕಿ ಸಂಗ್ರಹಿಸಿ ತಿಂಗಳ ಹುಣ್ಣಿಮೆಯಂದು ದೇವಸ್ಥಾನಕ್ಕೆ ಸಮರ್ಪಿಸಲು ತಿರ್ಮಾನಿಸಲಾಗಿದ್ದು ಅದರಂತೆ ಮೊದಲ ತಿಂಗಳ ಹುಂಡಿ ಅಕ್ಕಿಯನ್ನು ಜೀರ್ಣೋದ್ಧಾರದ ಕುರಿತ ಭಕ್ತಾಧಿಗಳ ಸಭೆಯಲ್ಲಿ ಸಮರ್ಪಣೆ ಮಾಡಲಾಯಿತು. ಬಳಿಕ ನಡೆದ ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮೋಕ್ತೆಸರರಾದ ಸನತ್ ಕುಮಾರ್

ಮರ್ದಾಳ: ಶ್ರೀಮಹಾಲಿಂಗೇಶ್ವರ ದೇವಸ್ಥಾನ ► ಹುಂಡಿ ಅಕ್ಕಿ ಸಮರ್ಪಣೆ Read More »

ಕರಾವಳಿ

ಜಿಲ್ಲಾ ಮಟ್ಟದ ಕ್ರೀಡಾಕೂಟ ► ಗುಂಡು ಎಸೆತದಲ್ಲಿ ಮರ್ದಾಳದ ಬ್ಯೂಲ ತೋಮಸ್ ರಾಜ್ಯ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಅ.11. ಮೂಡಬಿದ್ರೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಗುಂಡು ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿದ ಮರ್ದಾಳದ ಬ್ಯೂಲ ತೋಮಸ್ ದ್ವೀತಿಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮೂಡಬಿದ್ರೆಯ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಮರ್ದಾಳ ತುಂಬ್ಯ ಪಾರಶೇರಿಲ್ ತೋಮಸ್ ಮತ್ತು ಗ್ರೇಸಿ ತೋಮಸ್ರವರ ಪುತ್ರಿ.

ಜಿಲ್ಲಾ ಮಟ್ಟದ ಕ್ರೀಡಾಕೂಟ ► ಗುಂಡು ಎಸೆತದಲ್ಲಿ ಮರ್ದಾಳದ ಬ್ಯೂಲ ತೋಮಸ್ ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಕ್ರೀಡಾ ನ್ಯೂಸ್

ವಾಣಿಜ್ಯ ಕಟ್ಟಡಕ್ಕೆ ಡೋರ್ ನಂಬ್ರ ನೀಡಲು ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ►ಅ.13 ಶುಕ್ರವಾರದಿಂದ ಪಂಚಾಯತ್ ಎದುರು ಸತ್ಯಾಗ್ರಹ: ತೋಮ್ಸನ್ ಕೆ.ಟಿ.

(ನ್ಯೂಸ್ ಕಡಬ) newskadaba.com .ಕಡಬ, ಅ.10. ಬಿಳಿನೆಲೆ ಗ್ರಾಮ ಪಂಚಾಯತಿಯ ನೆಟ್ಟಣ ಸಮೀಪದ ಮೇರೊಂಜಿ ಎಂಬಲ್ಲಿ ನಿರ್ಮಿಸಲಾದ ಕಟ್ಟಡಕ್ಕೆ ಗ್ರಾಮ ಪಂಚಾಯತಿಯಿಂದ ಡೋರ್ ನಂಬರ್ ನೀಡದೆ ಇರುವುದರಿಂದ ವಿದ್ಯುತ್ ಸಂಪರ್ಕಕ್ಕೆ ತೊಂದರೆ ಉಂಟಾಗಿದ್ದು, ಅಕ್ಟೋಬರ್ 12ರ ಗುರುವಾರದೊಳಗಡೆ ಡೋರ್ ನಂಬರ್ ನೀಡದೆ ಇದ್ದಲ್ಲಿ 13 ಶುಕ್ರವಾರದಿಂದ ಪಂಚಾಯತ್ ಎದುರುಗಡೆ ಸತ್ಯಾಗ್ರಹ ಮಾಡಲಿದ್ದೇನೆ ಎಂದು ಕಟ್ಟಡ ಮಾಲಕ ಥೋಮ್ಸನ್ ಕೆ.ಟಿ ಹೇಳಿದ್ದಾರೆ. ಅವರು ಮಂಗಳವಾರದಂದು ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಳಿನೆಲೆ ಗ್ರಾಮದ ಮೇರೊಂಜಿ ಎಂಬಲ್ಲಿರುವ ವರ್ಗ ಜಮೀನನ್ನು

ವಾಣಿಜ್ಯ ಕಟ್ಟಡಕ್ಕೆ ಡೋರ್ ನಂಬ್ರ ನೀಡಲು ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ►ಅ.13 ಶುಕ್ರವಾರದಿಂದ ಪಂಚಾಯತ್ ಎದುರು ಸತ್ಯಾಗ್ರಹ: ತೋಮ್ಸನ್ ಕೆ.ಟಿ. Read More »

ಕರಾವಳಿ

ಮರ್ದಾಳ: ಜೇಸಿಐ ವತಿಯಿಂದ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕಡಬ,ಅ.7. ಜೇಸಿಐ ಕಡಬ ಕದಂಬ ಇದರ ಕದಂಬೋತ್ಸವ 2017ರ ಪ್ರಯುಕ್ತ ಮರ್ದಾಳದಲ್ಲಿ ಸಾರ್ವಜನಿಕರಿಗೆ ಹಗ್ಗ ಜಗ್ಗಾಟ ಹಾಗೂ ಸ್ಲೋ ಬೈಕ್ ರೇಸ್ ಶುಕ್ರವಾರ ನಡೆಯಿತು. ಹರೀಶ್ ಕೋಡಿಬೈಲ್, ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ಕ್ರೀಡಾಕೂಟಕ್ಕೆ ನೀಡಿದರು. ಈ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ, ಎಪಿಎಂಸಿ ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ, ಗ್ರಾ.ಪಂ. ಸದಸ್ಯ ದಾಮೋದರ ಗೌಡ ಡೆಪ್ಪುಣಿ, ಪ್ರಮುಖರಾದ ಮೋಹನ ಗೌಡ ಪಂಜೋಡಿ, ಜೇಸಿಐ ಕಡಬ ಕದಂಬ ಇದರ

ಮರ್ದಾಳ: ಜೇಸಿಐ ವತಿಯಿಂದ ಕ್ರೀಡಾಕೂಟ Read More »

ಕರಾವಳಿ

ಮರ್ದಾಳ ಮೀನು ಮಾರುಕಟ್ಟೆಯಲ್ಲಿ ಮಾತಿನ ಚಕಮಕಿ ► ಮೀನು ರಸ್ತೆಗೆ ಎಸೆದು ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ,ಅ.6. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಮೀನು ಮಾರಾಟಗಾರರ ನಡುವೆ ಮಾತಿನ ಚಕಮಕಿ ನಡೆದು, ಮೀನನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮರ್ದಾಳ ಮೀನುಮಾರುಕಟ್ಟೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಮರ್ದಾಳ ಗ್ರಾ.ಪಂ.ಗೆ ಒಳಪಟ್ಟ ಮರ್ದಾಳ ಪೇಟೆಯಲ್ಲಿರುವ ಮೀನು ಮಾರುಕಟ್ಟೆಯ ಎರಡು ಸ್ಟಾಲ್ ಗಳ ಪೈಕಿ ಒಂದನ್ನು 1ವರ್ಷದ ಅವಧಿಗೆ ಕರ್ಮಾಯಿ ತುಂಬ್ಯ ನಿವಾಸಿ ಅಬ್ದುಲ್ ಖಾದರ್ರವರು ರೂ.30,500ಕ್ಕೆ ಹಾಗೂ ಇನ್ನೊಂದು ಸ್ಟಾಲ್ ನ್ನು ಕಡಬ ಹಳೆಸ್ಟೇಷನ್ ನಿವಾಸಿ ರಮ್ಲಾರವರು 31,500ಕ್ಕೆ ಏಲಂನಲ್ಲಿ ಪಡೆದುಕೊಂಡಿದ್ದರು. ಬಳಿಕ

ಮರ್ದಾಳ ಮೀನು ಮಾರುಕಟ್ಟೆಯಲ್ಲಿ ಮಾತಿನ ಚಕಮಕಿ ► ಮೀನು ರಸ್ತೆಗೆ ಎಸೆದು ಆಕ್ರೋಶ Read More »

ಕರಾವಳಿ

ಪಾಲೆತ್ತಡ್ಕ ಅಂಗನವಾಡಿ ► ಗರ್ಭಿಣಿ, ಬಾಣಂತಿಯರಿಗೆ ಊಟ ಬಡಿಸುವ ಮೂಲಕ ಮಾತೃಪೂರ್ಣ ಯೋಜನೆಗೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ,ಅ.4. ಪಾಲೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆಗೆ ಮರ್ದಾಳ ಗ್ರಾ.ಪಂ.ಸದಸ್ಯ ಬಾಲವಿಕಾಸ ಸಮಿತಿ ಅಧ್ಯಕ್ಷ ಹರೀಶ್ ಕೋಡಂದೂರು ಗರ್ಭಿಣಿಯರಿಗೆ  ಹಾಗೂ ಬಾಣಂತಿಯರಿಗೆ ಊಟ ಬಡಿಸುವ ಮೂಲಕ ಚಾಲನೆ ಸೋಮವಾರ ನೀಡಿದರು. ಈ ಸಂಧರ್ಭದಲ್ಲಿ ಗ್ರಾ.ಪಂ.ಸದಸ್ಯ ಅಬೂಬಕ್ಕರ್, ಪಾಲೆತ್ತಡ್ಕ ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ರೇಖಾ, ಅಂಗನವಾಡಿ ಕಾರ್ಯಕರ್ತೆ ಪಾರ್ವತಿ, ಸಹಾಯಕಿ ಜಯಂತಿ ರೈ ಉಪಸ್ಥಿತರಿದ್ದರು.

ಪಾಲೆತ್ತಡ್ಕ ಅಂಗನವಾಡಿ ► ಗರ್ಭಿಣಿ, ಬಾಣಂತಿಯರಿಗೆ ಊಟ ಬಡಿಸುವ ಮೂಲಕ ಮಾತೃಪೂರ್ಣ ಯೋಜನೆಗೆ ಚಾಲನೆ Read More »

ಕರಾವಳಿ
Scroll to Top