Mangalore

ಕೃಷಿ ಪಂಡಿತ/ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

 (ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.14.2018-19ನೇ ಸಾಲಿನ ಕೃಷಿ ಪಂಡಿತ/ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಭಾಗವಹಿಸಲು ಇಚ್ಛಿಸುವವರು ರಾಜ್ಯ ಕೃಷಿ ಕ್ಷೇತ್ರದಲ್ಲಿ ವಿನೂತನ/ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವವರಾಗಿರಬೇಕು. ಭಾಗವಹಿಸುವವರ ಸಂಶೋಧನೆ/ಸಾಧನೆಗಳು ಮೂಲ ಸ್ವರೂಪದ್ದಾಗಿದ್ದು ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು. ಅಲ್ಲದೇ ಅವರ ಸಂಶೋಧನೆಗಳು/ಸಾಧನೆಗಳು ವ್ಯಾಪಕವಾಗಿ ಅಳವಡಿಸಲ್ಪಟ್ಟಿದ್ದು ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು. ಪ್ರಶಸ್ತಿಗೆ ಭಾಗವಹಿಸಲು ಇಚ್ಛಿಸುವವರು ತಮ್ಮ ನಾಮನಿರ್ದೇಶನಗಳನ್ನು ನಿಗದಿತ ನಮೂನೆಯಲ್ಲಿ […]

ಕೃಷಿ ಪಂಡಿತ/ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಮುಂಗಾರು ಹಂಗಾಮಿನ ಬೀಜೋಪಚಾರ ಬಳಕೆಯ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ

 (ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂನ್.14.ಬೆಳ್ತಂಗಡಿ ತಾಲೂಕಿನ ಕೃಷಿ ಇಲಾಖೆಯ ವತಿಯಿಂದ 2019-20 ನೇ ಸಾಲಿನ ಮುಂಗಾರು ಹಂಗಾಮು ಬೀಜೋಪಚಾರ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆಯ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಸುಲ್ಕೇರಿಯ ವೇಣೂರು ರೈತ ಸಂಪರ್ಕ ಕೇಂದ್ರದಲ್ಲಿ ಜೂನ್ 10 ರಂದು ಹಮ್ಮಿಕೊಳ್ಳಲಾಗಿತ್ತು. ಸೂಕ್ತವಾದ ವೈಜ್ಞಾನಿಕ ಸಲಹೆ ಮತ್ತು ರೈತರು ಮುಂಗಾರಿನ ಸಮಯದಲ್ಲಿ ಕೈಗೊಳ್ಳಬಹುದಾದ ಕೃಷಿ ಪದ್ದತಿಗಳ ಬಗ್ಗೆ ಜಾಗರೂಕತೆಯನ್ನು ಅನುಸರಿಸುವುದು ಅತೀ ಮುಖ್ಯವಾದ ಅಂಶವೆಂಬುದನ್ನು ಅರಿತು ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ

ಮುಂಗಾರು ಹಂಗಾಮಿನ ಬೀಜೋಪಚಾರ ಬಳಕೆಯ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ Read More »

ಕರಾವಳಿ

ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.14.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅನೇಕ ಕಡೆಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.ಜೆಪ್ಪು ಕುಡ್ಪಾಡಿ, ಕಾಟಿಪಳ್ಳ 2ನೇ ಬ್ಲಾಕ್, ಬಿಜೈ. ಪಣಂಬೂರು/ಬೈಕಂಪಾಡಿ ಉರ್ವಸ್ಟೋರ್/ಕೋಡಿಕಲ್/ಕೊಟ್ಟಾರ, ಯೆಯ್ಯಾಡಿ, ಬಿರಾವು, ಪಡುಪಣಂಬೂರು,. ಸೋಮೇಶ್ವರ ಉಚ್ಚಿಲ, ಬೆಳ್ಮ,, ಮೂಡು ಮಾರ್ನಾಡು, ಶಿರ್ತಾಡಿ, ಕಿನ್ಯ ಬಂಟ್ವಾಳ ತಾಲೂಕಿನಲ್ಲೂ ಅನೇಕ ಕಡೆಗಳಲ್ಲಿ ಅರ್ಜಿಅಹ್ವಾನಿಸಲಾಗಿದೆ. ಮುರತಗುಂಡಿ, ಹಳೇಗೇಟು, ಪುರಸಭೆ ವ್ಯಾಪ್ತಿಯ ಗೂಡಿನ ಬಳಿ , ಫರಂಗಿಪೇಟೆ, ಮೇರಮಜಲು, ಕೊಡ್ಮಣ್ ಬೆಳ್ತಂಗಡಿ ತಾಲೂಕಿನ ಪಿಲಿಗೂಡು, ಮೂಡುಕೋಡಿ, ಆರಂಬೋಡಿ, ರೆಖ್ಯ ಈ

ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ Read More »

ಕರಾವಳಿ

ವಿಕೋಪ ನಿರ್ವಹಣೆಗೆ ಅಧಿಕಾರಿಗಳ ತಂಡ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.14.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ತುರ್ತು ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮಕೈಗೊಳ್ಳಲು ನೋಡಲ್ ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದೆ.ಜಿಲ್ಲೆಯಾದ್ಯಂತ ಬುಧವಾರದಿಂದ ಮುಂಗಾರು ಮಳೆ ಬಿರುಸು ಪಡೆದಿದ್ದು, ನಗರದ ವಿವಿಧೆಡೆ ಧಾರಾಕಾರ ಮಳೆಯಿಂದಾಗಿ ಮರಗಳು ಬಿದ್ದು ಹಾಗೂ ರಸ್ತೆ ಕಾಮಗಾರಿಗಳಿಂದಾಗಿ ನೀರು ಹರಿಯುವಲ್ಲಿ ತೊಂದರೆಯಾಗಿತ್ತು. ಕಳೆದ ಸಾಲೀನ ಮಳೆಯ ಅನುಭವವನ್ನು ಹಿನ್ನಲೆಯಾಗಿರಿಸಿ ಜಿಲ್ಲಾಡಳಿತ ನೋಡಲ್ ಅಧಿಕಾರಿಗಳನ್ನೊಳಗೊಂಡಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕೈಗೊಂಡ ಕ್ರಮಗಳಿಂದಾಗಿ ಸಮಸ್ಯೆ ವರದಿಯಾದ ತಕ್ಷಣವೇ ಪರಿಹರಿಸಲು ಕ್ರಮಕೈಗೊಳ್ಳಲಾಗಿದೆ. ಕೃತಕ ನೆರೆಗೆ ಕಾರಣಗಳನ್ನು

ವಿಕೋಪ ನಿರ್ವಹಣೆಗೆ ಅಧಿಕಾರಿಗಳ ತಂಡ ನೇಮಕ Read More »

ಕರಾವಳಿ

ಆರಂಭದ ಮಳೆಗೆ ರಸ್ತೆಗಳೆಲ್ಲ ಕೆಸರುಮಯ➤ವಾಹನ ಸಂಚಾರ ಕಷ್ಟಕರ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.13. ಈ ವರ್ಷದ ಮಳೆಗಾಲ ಆರಂಭಗೊಂಡಿದ್ದು, ಕಳೆದ ಒಂದೆರಡು ದಿನದಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಕಡಬ ತಾಲೂಕಿನ ಗ್ರಾಮೀಣ ಸಂಪರ್ಕ ರಸ್ತೆಗಳು ಕೆಸರುಮಯಗೊಂಡು ವಾಹನ ಸವಾರರು ಸಂಕಷ್ಟಪಡುತ್ತಿದ್ದಾರೆ. ಕಡಬ-ಕಲ್ಲುಗುಡ್ಡೆ ಸಂಪರ್ಕ ಕಲ್ಪಿಸುವ ರಸ್ತೆಯ ಕಡಬ ಹಳೆಸ್ಟೇಷನ್‍ನಿಂದ ಕಾಯರಡ್ಕ ವರೆಗೆ ಅಲ್ಲಲ್ಲಿ ರಸ್ತೆಗಳಲ್ಲಿ ಹೊಂಡ ಗುಂಡಿಗಳು ನಿರ್ಮಾಣಗೊಂಡು, ನೀರು ನಿಂತು ಕೆಸರುಮಯಗೊಂಡಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದು, ಅಪಾಯದ ಸ್ಥಿತಿ ತಂದೊಡ್ಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಸ್ತೆಯಲ್ಲಿ ಉಂಟಾಗಿರುವ

ಆರಂಭದ ಮಳೆಗೆ ರಸ್ತೆಗಳೆಲ್ಲ ಕೆಸರುಮಯ➤ವಾಹನ ಸಂಚಾರ ಕಷ್ಟಕರ Read More »

ಕರಾವಳಿ

ಜಗನ್ ರೆಡ್ಡಿಯನ್ನು ವಿಜಯವಾಡದಲ್ಲಿ ಭೇಟಿಯಾದ ನಿಖಿಲ್ ಕುಮಾರಸ್ವಾಮಿ➤ಜೆಡಿಎಸ್ ಯುವ ನಾಯಕನಿಗೆ ಸಿಕ್ತು ಆಂಧ್ರ ಸಿ.ಎಂನಿಂದ ಸಲಹೆ

(ನ್ಯೂಸ್ ಕಡಬ) newskadaba.com ಮಂಡ್ಯ, ಜೂನ್.13. ಈ ಬಾರಿ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅಂಬರೀಷ್​ ವಿರುದ್ಧ ಸೋತಿದ್ದ ಜೆಡಿಎಸ್​ನ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಅವರನ್ನು ವಿಜಯವಾಡದಲ್ಲಿ ಭೇಟಿಯಾಗಿ ಸಿಎಂ ಸ್ಥಾನ ಅಲಂಕರಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಆಂಧ್ರದಲ್ಲಿ ಜಗನ್​ ಅಣ್ಣಾ ಎಂದೇ ಅವರು ಪರಿಚಿತರಾಗಿದ್ದಾರೆ. ಅವರ ಹತ್ತು ವರ್ಷಗಳ ಸುದೀರ್ಘ ಹೋರಾಟದ ದಾರಿ ಎಲ್ಲ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಹಾಗೇ ಜಗನ್​ ಮೋಹನ್​ ರೆಡ್ಡಿಯವರು ಕರ್ನಾಟಕ ರಾಜಕಾರಣವನ್ನು, ಇಲ್ಲಿನ ಸನ್ನಿವೇಶಗಳನ್ನು ಸೂಕ್ಷ್ಮವಾಗಿ

ಜಗನ್ ರೆಡ್ಡಿಯನ್ನು ವಿಜಯವಾಡದಲ್ಲಿ ಭೇಟಿಯಾದ ನಿಖಿಲ್ ಕುಮಾರಸ್ವಾಮಿ➤ಜೆಡಿಎಸ್ ಯುವ ನಾಯಕನಿಗೆ ಸಿಕ್ತು ಆಂಧ್ರ ಸಿ.ಎಂನಿಂದ ಸಲಹೆ Read More »

ಕರ್ನಾಟಕ

ಮೂಲವ್ಯಾಧಿಗೆ ಇಲ್ಲಿದೆ ಸೂಕ್ತ ಪರಿಹಾರ

(ನ್ಯೂಸ್ ಕಡಬ) newskadaba.com. ಆರೋಗ್ಯ ಮಾಹಿತಿ:ಪದೇಪದೆ ಕಾಡುವ ಮಲಬದ್ಧತೆಗೆ ಕಡಿಮೆ ಪ್ರಮಾಣದಲ್ಲಿರುವಾಗ ಮನೆಯಲ್ಲಿಯೇ ಸರಳ ಉಪಾಯಗಳಿಂದ ನಿರ್ವಹಿಸಬಹುದು.ಮಲದ್ವಾರದ ಹೊರಗಡೆ ಅನುಭವಕ್ಕೆ ಬರುತ್ತಿರುವ ಮೂಲವ್ಯಾಧಿ ಗಡ್ಡೆಗೆ ಬೆರಳುಗಳ ಸಹಾಯದಿಂದ ಅಲೋವೆರಾ ಜೆಲ್​ನ್ನು ಪ್ರತಿದಿನ ಮಲವಿಸರ್ಜನೆ ನಂತರ ಹಚ್ಚಬೇಕು. ಹಿಪ್​ಬಾತ್ ಟಬ್​ನಲ್ಲಿ ಉಗುರುಬಿಸಿ ನೀರು ತುಂಬಿಸಿ ಇದಕ್ಕೆ 100 ಮಿ. ಆಪಲ್ ಸಿಡೆರ್ ವಿನೆಗರ್ ಸೇರಿಸಿ ಟಬ್​ನಲ್ಲಿ 20-30 ನಿಮಿಷ ಕುಳಿತುಕೊಳ್ಳುವುದು ಅನುಕೂಲಕರ. 5-6 ಚಮಚ ತ್ರಿಫಲಾ ಪುಡಿಯನ್ನು ಕುದಿಸಿ ಕಷಾಯ ತಯಾರಿಸಿ ಅರ್ಧ ಹಿಪ್ ಬಾತ್ ಟಬ್​ಗೆ ಉಗುರುಬಿಸಿ ನೀರು

ಮೂಲವ್ಯಾಧಿಗೆ ಇಲ್ಲಿದೆ ಸೂಕ್ತ ಪರಿಹಾರ Read More »

ಕರಾವಳಿ

ಟಿಕ್ ಟಾಕ್ ವಿಡಿಯೋ ಆ್ಯಪ್ ಗೆ ಬಲಿಯಾದ ವಿವಾಹಿತ ಮಹಿಳೆ

(ನ್ಯೂಸ್ ಕಡಬ) newskadaba.com ಚೆನ್ನೈ, ಜೂನ್.13.ಪೆರಂಬೂರ್​ ಮೂಲದ ಅನಿತಾ(24) ಎಂಬಾಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಟಿಕ್​ ಟಾಕ್​ನಲ್ಲೇ ಹರಿಬಿಟ್ಟಿದ್ದಾಳೆ ಎಂದು ಹೇಳಲಾಗಿದೆ.ಮೃತೆ ಅನಿತಾ, ಪಳನಿವೇಲ್(24)​ ಎಂಬುವರೊಂದಿಗೆ ವಿವಾಹವಾಗಿದ್ದು, ನಾಲ್ಕು ವರ್ಷದ ಹೆಣ್ಣು ಮಗಳು ಹಾಗೂ ಎರಡು ವರ್ಷದ ಗಂಡು ಮಗುವಿನ ತಾಯಿಯಾಗಿದ್ದಳು. ಟಿಕ್​ಟಾಕ್​ ವಿಡಿಯೋ ಆ್ಯಪ್​ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ಪತ್ನಿಯನ್ನು ಬೈದಿದ್ದಕ್ಕೆ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರ್​ನಲ್ಲಿ ನಡೆದಿರುವುದಾಗಿ ಗುರುವಾರ ವರದಿಯಾಗಿದೆ ಆತ್ಮಹತ್ಯೆಗೂ ಮುನ್ನ ತನ್ನ ಹೇಳಿಕೆಯನ್ನು ವಿಡಿಯೋದಲ್ಲಿ

ಟಿಕ್ ಟಾಕ್ ವಿಡಿಯೋ ಆ್ಯಪ್ ಗೆ ಬಲಿಯಾದ ವಿವಾಹಿತ ಮಹಿಳೆ Read More »

ರಾಷ್ಟ್ರೀಯ ನ್ಯೂಸ್

ಎಫ್ಐಎಚ್ ಹಾಕಿ ಸೀರಿಸ್➤ಸೆಮಿಫೈನಲ್ ನಲ್ಲಿ ಭಾರತ

(ನ್ಯೂಸ್ ಕಡಬ) newskadaba.com ಭುವನೇಶ್ವರ, ಜೂನ್.13.ಎಫ್ಎಚ್ ಹಾಕಿ ಸೀರಿಸ್‌ ಫೈನಲ್ಸ್’ನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಭಾರತ 10-0 ಗೋಲುಗಳ ಅಂತರದಿಂದ ಉಜ್ಬೆಕಿಸ್ಥಾನ ತಂಡವನ್ನು ಸೋಲಿಸಿ ಸೆಮಿಫೈನಲ್ ಹಂತ ಪ್ರವೇಶಿ ಸಿದೆ. ‘ಎ’ ವಿಭಾಗದಲ್ಲಿರುವ ಭಾರತ ಮೂರೂ ಪಂದ್ಯಗಳನ್ನು ಜಯಿಸಿ 9 ಅಂಕಗಳೊಂದಿಗೆ ಗುಂಪಿನ ಅಗ್ರಸ್ಥಾನಿ ಎನಿಸಿದೆ. ಆಕಾಶ್‌ದೀಪ್‌ ಸಿಂಗ್‌ ಅವರ ಹ್ಯಾಟ್ರಿಕ್‌ ಸಾಹಸದಿಂದ ‘ಈ ಸಾಧನೆ ಸಾಧ್ಯವಾಯಿತು.ಸೋಮವಾರ ರಾತ್ರಿಯ ಪಂದ್ಯದಲ್ಲಿ ಭಾರತ ಆರಂಭದಿಂದಲೂ ಅಬ್ಬರದ ಆಟಕ್ಕಿಳಿಯಿತು. ವರುಣ್‌ 4ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಬಳಿಕ ಆಕಾಶ್‌ದೀಪ್‌

ಎಫ್ಐಎಚ್ ಹಾಕಿ ಸೀರಿಸ್➤ಸೆಮಿಫೈನಲ್ ನಲ್ಲಿ ಭಾರತ Read More »

ಕ್ರೀಡಾ ನ್ಯೂಸ್

ಶಿವಸೇನೆ ಯುವ ನಾಯಕನಿಗೆ ಮಹಾರಾಷ್ಟ್ರ ಡಿಸಿಎಂ ಪಟ್ಟ

(ನ್ಯೂಸ್ ಕಡಬ) newskadaba.com ಮುಂಬಯಿ, ಜೂನ್.13.29 ಹರೆಯದ ಆದಿತ್ಯ ಠಾಕ್ರೆ ಅವರನ್ನು ಫ‌ಡ್ನವೀಸ್‌ ಬಳಿಕ ಆದರ್ಶ ಅಭ್ಯರ್ಥಿಯನ್ನಾಗಿಸುವ ಸಿದ್ದತೆಯಲ್ಲಿ ಶಿವಸೇನೆ ತೊಡಗಿದೆ. ಆದಿತ್ಯ ಠಾಕ್ರೆ ಅವರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆಗಳಿವೆ ಎಂದು ವರದಿಯೊಂದು ಹೇಳಿದೆ. ವಿಧಾನಸಭಾ ಚುನಾವಣೆ ಸನಿಹವಾಗಿರುವ ವೇಳೆಯಲ್ಲಿ ಈ ಬಗ್ಗೆ ಹೇಳಲಾಗಿದ್ದು, ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರೊಂದಿಗೆ ಈಗಾಗಲೇ ಈ ಬಗ್ಗೆ ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಆದಿತ್ಯ ಠಾಕ್ರೆ ಅವರನ್ನು ಚುನಾವಣಾ ಸ್ಪರ್ಧೆಗೆ ಇಳಿಸಲು ಶಿವಸೇನೆ ಸಿದ್ಧತೆ ಮಾಡಿಕೊಂಡಿದೆ ಎಂದು ಈ

ಶಿವಸೇನೆ ಯುವ ನಾಯಕನಿಗೆ ಮಹಾರಾಷ್ಟ್ರ ಡಿಸಿಎಂ ಪಟ್ಟ Read More »

ರಾಷ್ಟ್ರೀಯ ನ್ಯೂಸ್
Scroll to Top