karnataka

ಆ. 27ರವರೆಗೂ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ..!

(ನ್ಯೂಸ್ ಕಡಬ) newskadaba.com ಕರಾವಳಿ. ಆ,23:  ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಗಸ್ಟ್ 27ರವರೆಗೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಈ ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ.     ಬೆಂಗಳೂರಿನಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕೊಡಗು, ನಾಪೊಕ್ಲು ಹಾಗೂ ಭಾಗಮಂಡಲದಲ್ಲಿ ಶುಕ್ರವಾರ ಭಾರೀ […]

ಆ. 27ರವರೆಗೂ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ..! Read More »

ಕರಾವಳಿ, ಕರ್ನಾಟಕ

ರಾತ್ರೋ ರಾತ್ರಿ ಚಿರತೆ ದಾಳಿ ➤ ಒಂದು ವರ್ಷ ಪ್ರಾಯದ ಕರುವೊಂದು ಬಲಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಆ,23:  ಬೆಳ್ತಂಗಡಿಯ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಕಲ್ಲರಿಗೆ ಧರ್ಣಪ್ಪ ಗೌಡ ಎಂಬವರ ಒಂದು ವರ್ಷ ಪ್ರಾಯದ ಕರುವೊಂದು ಕಳೆದ ದಿನ ರಾತ್ರಿ ಚಿರತೆ ದಾಳಿಗೆ ತುತ್ತಾಗಿದೆ.   ದನದ ಕೊಟ್ಟಿಗೆಗೆ ಚಿರತೆ ದಾಳಿ ಮಾಡಿದ ಸಂದರ್ಭದಲ್ಲಿ ಜಾನುವಾರುಗಳು ಕೂಗಿಕೊಂಡಾಗ,  ಮನೆಮಂದಿ ಎಚ್ಚರಗೊಂಡು ಧಾವಿಸುವಷ್ಟರಲ್ಲಿ ಕರುವನ್ನು ಕೊಂದು ಹಾಕಿದ್ದ ಚಿರತೆ ಕಾಡಿನ ಕಡೆ ಓಡಿದೆ. ಈ ಪ್ರದೇಶದಲ್ಲಿ ದಾಸನ್,ಚೇತನ್,ಬಾಬು ಇವರ ಮನೆಗಳ ಸುತ್ತ-ಮುತ್ತ ಕಳೆದ ಕೆಲವು ದಿನಗಳಿಂದ ಹಲವಾರು

ರಾತ್ರೋ ರಾತ್ರಿ ಚಿರತೆ ದಾಳಿ ➤ ಒಂದು ವರ್ಷ ಪ್ರಾಯದ ಕರುವೊಂದು ಬಲಿ Read More »

ಕರಾವಳಿ, ಕರ್ನಾಟಕ

ತಲಕಾವೇರಿಗೆ ಬ್ರಾಹ್ಮಣರ ಪೂಜೆ ಬೇಡ, ನಮಗೆ ಕೊಡಿ ➤ ಅಮ್ಮ ಕೊಡವರಿಂದ ಜಿಲ್ಲಾಧಿಕಾರಿಗೆ ಮನವಿ

(ನ್ಯೂಸ್ ಕಡಬ) newskadaba.com ಕೊಡಗು. ಆ,23:  ಕೊಡಗಿನಲ್ಲಿ ಗಜಗಿರಿ ಬೆಟ್ಟ ಕುಸಿದು ಅರ್ಚಕ ನಾರಾಯಣ ಆಚಾರ್ ಅವರು ಮೃತಪಟ್ಟಿದ್ದರು. ಇದಾದ ಬೆನ್ನಲ್ಲೇ ಪೂಜಾ ಕೈಂಕರ್ಯವನ್ನು ನಮಗೆ ನೀಡುವಂತೆ ಅಖಿಲ ಅಮ್ಮಕೊಡವ ಸಮಾಜ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ . 150 ವರ್ಷಗಳ ಹಿಂದೆ ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಅಮ್ಮ ಕೊಡುವರು ಪೂಜೆ ನೆರವೇರಿಸುತಿದ್ದರು. ಕಾಲ ಬದಲಾದಂತೆ ಆ ಪೂಜಾ ಕೈಂಕರ್ಯವನ್ನು ಬ್ರಾಹ್ಮಣ ಅರ್ಚಕರು ನೆರವೇರಿಸಿಕೊಂಡು ಬಂದಿದ್ದರು. ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತಿದ್ದ ಅರ್ಚಕ ನಾರಾಯಣ ಆಚಾರ್ ಮತ್ತು ಅವರ

ತಲಕಾವೇರಿಗೆ ಬ್ರಾಹ್ಮಣರ ಪೂಜೆ ಬೇಡ, ನಮಗೆ ಕೊಡಿ ➤ ಅಮ್ಮ ಕೊಡವರಿಂದ ಜಿಲ್ಲಾಧಿಕಾರಿಗೆ ಮನವಿ Read More »

ಕರ್ನಾಟಕ

ಬಿಳಿನೆಲೆ : ನಾಳೆ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ ಆ,23: ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀ ಗಣೇಶೋತ್ಸವ ಸಮಿತಿ ಬಿಳಿನೆಲೆ, ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ. ಇದರ ವತಿಯಿಂದ ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನವು ದಿನಾಂಕ : 24/08/2020 ನೇ ಯ ಸೋಮವಾರ ಶ್ರೀ ಗೋಪಾಲಕೃಷ್ಣ ದೇವಾಲಯದ ಸಭಾಂಗಣ ಬಿಳಿನೆಲೆ ಯಲ್ಲಿ ನಡೆಯಲಿದೆ.   ಇದರ ಸದುಪಯೋಗ ಪಡೆದುಕೊಳ್ಳಲು ಇಚ್ಚಿಸುವರು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ತಪ್ಪದೇ ತರಬೇಕು. ಎಂದು

ಬಿಳಿನೆಲೆ : ನಾಳೆ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನ Read More »

ಕರಾವಳಿ, ಕರ್ನಾಟಕ

ಕಡಬ ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೊನಾ ಅಪ್ ಡೇಟ್

(ನ್ಯೂಸ್ ಕಡಬ) newskadaba.com ಕಡಬ . ಆ,23 : ಪುತ್ತೂರು ತಾಲೂಕಿನಲ್ಲಿ ರವಿವಾರ 5 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಆದರೆ ಕಡಬ ತಾಲೂಕಿನಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.   ಪುತ್ತೂರು ತಾಲೂಕಿನ ಕುರಿಯ ನಿವಾಸಿ 35 ವರ್ಷದ ಮಹಿಳೆ, ಉಪ್ಪಿನಂಗಡಿ ನಿವಾಸಿ 66 ವರ್ಷದ ಮಹಿಳೆ, ಸರ್ವೆ ನಿವಾಸಿ 39 ವರ್ಷದ ಮಹಿಳೆ, ಕೆಮ್ಮಿಂಜೆ ನಿವಾಸಿ 26 ವರ್ಷದ ಮಹಿಳೆ ಮತ್ತು ದರ್ಬೆ ನಿವಾಸಿ 45 ವರ್ಷದ ಪುರುಷರೊಬ್ಬರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ ಎಂದು

ಕಡಬ ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೊನಾ ಅಪ್ ಡೇಟ್ Read More »

ಕರಾವಳಿ

12 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ➤ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್. ಆ,23:   ಮಹಾಮಾರಿ ಕೊರೋನಾ ಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿಯೂ ನಮ್ಮ ಆರೋಗ್ಯದ ಕಾಳಜಿ ವಹಿಸುವುದು ಅತಿ ಅಗತ್ಯವಾಗಿದೆ. 12 ವರ್ಷಕ್ಕಿಂತ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಹೊರಡಿಸಿದೆ.ಮಕ್ಕಳು ಹೇಗೆ ಕೊರೊನಾವೈರಸ್‌ಗೆ ವಾಹಕರಾಗುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ ದೊಡ್ಡವರು ಹೇಗೆ ವೈರಸ್‌ಗೆ ತುತ್ತಾಗುತ್ತಾರೋ ಮಕ್ಕಳು ಕೂಡ ಹಾಗೆಯೇ ತುತ್ತಾಗುತ್ತಾರೆ, ಹೀಗಾಗಿ 12 ವರ್ಷ ಮೇಲ್ಪಟ್ಟವರು ಮಾಸ್ಕ್

12 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ➤ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ Read More »

ಕರಾವಳಿ

ಬೆಂಗಳೂರಿನಲ್ಲಿ ಗುಂಡಿನ ದಾಳಿ ➤ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಫೈರಿಂಗ್

(ನ್ಯೂಸ್ ಕಡಬ) newskadaba.com ಬೆಂಗಳೂರು. ಆ,23: ಗಣೇಶ ಹಬ್ಬದ ದಿನವೇ ಬೆಂಗಳೂರಿನಲ್ಲಿ ಗುಂಡಿನ ಸದ್ದು ಕೇಳಿಸಿದೆ. ನಗರದ ಕೆ. ಆರ್ ಪುರದಲ್ಲಿ ಶನಿವಾರ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಫೈರಿಂಗ್ ನಡೆಸಲಾಗಿದೆ.. ರಿಯಲ್ ಎಸ್ಟೇಟ್ ಏಜೆಂಟ್ ಆಟೋ ಬಾಬು ಎನ್ನುವವರ ಮೇಲೆ ಶನಿವಾರ ರಾತ್ರಿ 10 ಘಂಟೆಯ  ಸುಮಾರಿಗೆ ಗುಂಡಿನ ದಾಳಿ ನಡೆಸಲಾಗಿದೆ. ಗಾಯಾಳು ಆಟೋ ಬಾಬುಗೆ ಗಂಭೀರ ಗಾಯವಾಗಿದ್ದು, ಅಸ್ಪತ್ರೆಗೆ ದಾಖಲು ಮಾಡಲಾಯಿತು. ಕೆ ಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಗಾ ರಸ್ತೆಯಲ್ಲಿರುವ

ಬೆಂಗಳೂರಿನಲ್ಲಿ ಗುಂಡಿನ ದಾಳಿ ➤ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಫೈರಿಂಗ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಿದಿರಿನ ಒಳಗೆ ಗಾಂಜಾವನ್ನು ತುಂಬಿಸಿ ಸಾಗಾಟ ➤ ಇಬ್ಬರು ಆರೋಪಿಗಳ ಸೆರೆ

(ನ್ಯೂಸ್ ಕಡಬ) newskadaba.com ಉಡುಪಿ . ಆ,23: ಕಂಟೈನರ್ ಲಾರಿಯಲ್ಲಿ ಉತ್ತರಪ್ರದೇಶದಿಂದ ಮಂಗಳೂರಿಗೆ ಬಿದಿರು ತುಂಬಿಸಿಕೊಂಡು ಅದರೊಳಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 49 ಕೆಜಿ ಗಾಂಜಾವನ್ನು ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.     ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಕ್ರಾಸ್ ಸಮೀಪ ಶನಿವಾರ ಗಾಂಜಾ ಸಾಗಿಸುತ್ತಿದ್ದ ಲಾರಿ ಮೇಲೆ ದಾಳಿ ನಡೆಸಿದ ಪೊಲೀಸರು 49 ಕೆ.ಜಿ 150 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಕುರತಪಾಂಡಿ ಹಾಗೂ ವಾನುವಲ್

ಬಿದಿರಿನ ಒಳಗೆ ಗಾಂಜಾವನ್ನು ತುಂಬಿಸಿ ಸಾಗಾಟ ➤ ಇಬ್ಬರು ಆರೋಪಿಗಳ ಸೆರೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪಂಜದಲ್ಲಿ ನೂತನ ಅಂಗಡಿ ಮಾಲಕರಿಂದ ಅಂಬುಲೆನ್ಸ್ ಗೆ ದೇಣಿಗೆ

(ನ್ಯೂಸ್ ಕಡಬ) newskadaba.com ಸುಳ್ಯ. ಆ,23: ಪಂಜದ ಪಂಡಿತ್ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದಲ್ಲಿ ಆ.22 ರಂದು ಶುಭಾರಂಭಗೊಂಡ ದುರ್ಗಾ ಮೆಟಲ್ಸ್, ಪಂಚಶ್ರೀ ಬ್ರಾಂಡ್ ಫ್ಯಾಷನ್, ಪರಿವಾರ್ ಸ್ವೀಟ್ ಕಾರ್ನರ್ ಇದರ ಮಾಲಕರು ಪಂಚಶ್ರೀ ಪಂಜ ಸ್ಫೋಟ್ಸ್ ಕ್ಲಬ್ ಇದರ ವತಿಯಿಂದ ಸೇವೆ ಸಲ್ಲಿಸುತ್ತಿರುವ ಜೀವರಕ್ಷಕ ಅಂಬುಲೆನ್ಸ್ ನ ನಿರ್ವಹಣೆಗಾಗಿ ರೂ.5000 ದೇಣಿಗೆ ನೀಡಿ ಸಹಕರಿಸಿದರು.   ಇನ್ನು ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾದ ಮಹೇಶ್ ಕುಮಾರ್ ಕರಿಕ್ಕಳ, ಪಂಚಶ್ರೀ ಸ್ಫೋಟ್ಸ್

ಪಂಜದಲ್ಲಿ ನೂತನ ಅಂಗಡಿ ಮಾಲಕರಿಂದ ಅಂಬುಲೆನ್ಸ್ ಗೆ ದೇಣಿಗೆ Read More »

ಕರಾವಳಿ

ಕಾಣಿಯೂರು: 33 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ

(ನ್ಯೂಸ್ ಕಡಬ) newskadaba ಕಾಣಿಯೂರು.com . ಆ,23: ಕಾಣಿಯೂರು ಶ್ರೀ ಲಕ್ಷ್ಮಿನರಸಿಂಹ ಭಜನಾ ಮಂದಿರದ ವತಿಯಿಂದ 33 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಶನಿವಾರದಂದು ನಡೆಯಿತು.

ಕಾಣಿಯೂರು: 33 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ Read More »

ಕರಾವಳಿ, ಕರ್ನಾಟಕ
Scroll to Top