ಕಡಬ: ಕಬಡ್ಡಿಯನ್ನು ಪುನರಾಂಭಿಸುವಂತೆ ಕಡಬ ತಹಶೀಲ್ದಾರ್ ಗೆ ಅಮೆಚ್ಚೂರು ಕಬಡ್ಡಿ ಅಸೋಸಿಯೇಷನ್ ನಿಂದ ಮನವಿ
(ನ್ಯೂಸ್ ಕಡಬ) newskadaba.com ಕಡಬ ನ. 27: ಗ್ರಾಮೀಣ ಕ್ರೀಡೆ ಕಬಡ್ಡಿ ಪಂದ್ಯಾಟವು ಕೊರೋನಾ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದು, ಮತ್ತೆ ಪುನರಾರಂಭಿಸಲು ತಾಲೂಕು ದಂಡಾಧಿಕಾರಿಗಳಿಗೆ ಕಡಬ ತಾಲೂಕು ಅಮೆಚ್ಚೂರು ಕಬಡ್ಡಿ ಅಸೋಸಿಯೇಷನ್ ನಿಂದ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ಪಿ.ಯಂ. ಮೊಯಿದೀನ್ ಮೂಲೆ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಶೇಡಿಗುಂಡಿ, ಉಪಸ್ಥಿತರಿದ್ದರು. ಕೊರೋನಾ ಕಾನೂನು ನಿಯಮಗಳನ್ನು ಪಾಲಿಸಿ ಕಬಡ್ಡಿ ಕ್ರೀಡಾಕೂಟ ಸಂಘಟಿಸುವ ಸಂಘಟನೆಗಳಿಗೆ ಅನುಮತಿ ನೀಡಲು ಅವಕಾಶ ಕಲ್ಪಿಸುವಂತೆ ಕೇಳಿಕೊಳ್ಳಲಾಯಿತಿ. ಉಪ ತಹಸಿಲ್ದಾರರಾದ ಮನೋಹರ್ ಮೂಲಕ ಮನವಿ ಸಲ್ಲಿಸಲಾಯಿತು.
ಕಡಬ: ಕಬಡ್ಡಿಯನ್ನು ಪುನರಾಂಭಿಸುವಂತೆ ಕಡಬ ತಹಶೀಲ್ದಾರ್ ಗೆ ಅಮೆಚ್ಚೂರು ಕಬಡ್ಡಿ ಅಸೋಸಿಯೇಷನ್ ನಿಂದ ಮನವಿ Read More »
ಕರಾವಳಿ









