Kadaba News

ಗೃಹರಕ್ಷಕರ ಸೇವೆ ಶ್ಲಾಘನೀಯ ➤ ಡಾ|| ರಾಜೇಂದ್ರ ಕೆ.ವಿ.

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 07: ದಕ್ಷಿಣ ಕನ್ನಡ ಜಿಲ್ಲಾ ಗೃಹಕ್ಷಕ ದಳ ಕಛೇರಿಯಲ್ಲಿ 58ನೇ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಡಿ. 06ರ ರವಿವಾರ ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಕಚೇರಿ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ|| ರಾಜೇಂದ್ರ ಕೆ.ವಿ.(I.A.S.) ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಬೆಳ್ಳಾರೆ ಪ್ರಭಾರ ಘಟಕಾಧಿಕಾರಿ ವಸಂತ ಗೃಹರಕ್ಷಕರಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು. ನಂತರ ಗೃಹರಕ್ಷಕರನ್ನು […]

ಗೃಹರಕ್ಷಕರ ಸೇವೆ ಶ್ಲಾಘನೀಯ ➤ ಡಾ|| ರಾಜೇಂದ್ರ ಕೆ.ವಿ. Read More »

ಕರಾವಳಿ, ಕರ್ನಾಟಕ

ಕಾರಾವಾರ :ಪತ್ನಿಗೆ ಗುಂಡು ಹಾರಿಸಿ ನಾಟಕವಾಡಿದ ಪತಿರಾಯ ಅಂದರ್

(ನ್ಯೂಸ್ ಕಡಬ) newskadaba.com ಕಾರಾವಾರ , ಡಿ. 07: ಪತ್ನಿಯ ಶೀಲ ಶಂಕಿಸಿ ಪತಿರಾಯ ಕೋವಿಯಿಂದ ಪತ್ನಿಗೆ ಗುಂಡು ಹಾರಿಸಿ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಗೋಯರ್ ಅರಣ್ಯ ಪ್ರದೇಶದಲ್ಲಿ ಡಿಸೆಂಬರ್ 4ರಂದು ಕಟ್ಟಿಗೆ ತರಲು ರಷಿಕಾ ತೆರಳಿದ್ದು ಈ ವೇಳೆ ಎಲ್ಲಿಂದಲೋ ಸಿಡಿದ ಗುಂಡು ಗಾಯಗೊಳಿಸಿತ್ತು ಎಂದು ತನ್ನ ಪತ್ನಿಗೆ ಗಾಯವಾದ ಬಗ್ಗೆ ಪತಿ ದೂರು ದಾಖಲಿಸಿದ್ದ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಪತಿಯನ್ನೆ ವಿಚಾರಿಸಿದ್ದರು. ಪೊಲೀಸರ ದಾರಿ ತಪ್ಪಿಸಲು ಹೋದ ಪತಿ ರಮೇಶ ದೇಸಾಯಿ ಈಗ ಪೊಲೀಸ್ ಅತಿಥಿಯಾಗಿದ್ದಾನೆ.ಪತ್ನಿಯ

ಕಾರಾವಾರ :ಪತ್ನಿಗೆ ಗುಂಡು ಹಾರಿಸಿ ನಾಟಕವಾಡಿದ ಪತಿರಾಯ ಅಂದರ್ Read More »

ಕರ್ನಾಟಕ

ಆಂಧ್ರ ಪ್ರದೇಶದಲ್ಲೊಂದು ವಿಚಿತ್ರ ಸಾಂಕ್ರಾಮಿಕ ರೋಗ ಪತ್ತೆ ➤ ಓರ್ವ ಬಲಿ, 290 ಮಂದಿ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಆಂಧ್ರ ಪ್ರದೇಶ, ಡಿ. 07: ಕೊರೊನದಿಂದ ಇಡೀ ಜಗತ್ತೇ ತತ್ತರಿಸಿದೆ. ಇದರ ನಡುವೆ ಇದೀಗ ಆಂಧ್ರ ಪ್ರದೇಶದಲ್ಲಿ ಹೊಸದೊಂದು ಕಾಯಿಲೆ ಕಾಣಿಸಿಕೊಂಡಿದ್ದು,ಜನರಲ್ಲಿ ಆತಂಕ ಮನೆ ಮಾಡಿದೆ.   ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ಇದ್ದಕ್ಕಿದ್ದಂತೆ ಜನರು ಬಾಯಿಯಲ್ಲಿ ನೊರೆಬಂದು, ವಾಂತಿ, ಪ್ರಜ್ಞಾಹೀನರಾಗಿ ಬಿದ್ದಿರುವ ಘಟನೆಗಳು ನಡೆದಿವೆ.ಈ ಕಾಯಿಲೆಗೆ ಬಿದ್ದು ಈಗಾಗಲೇ ಓರ್ವ ವ್ಯಕ್ತಿ ಬಲಿಯಾಗಿದ್ದು, ಸುಮಾರು 290 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ

ಆಂಧ್ರ ಪ್ರದೇಶದಲ್ಲೊಂದು ವಿಚಿತ್ರ ಸಾಂಕ್ರಾಮಿಕ ರೋಗ ಪತ್ತೆ ➤ ಓರ್ವ ಬಲಿ, 290 ಮಂದಿ ಆಸ್ಪತ್ರೆಗೆ ದಾಖಲು Read More »

ರಾಷ್ಟ್ರೀಯ ನ್ಯೂಸ್

ಉಡುಪಿ :ಸ್ವಚ್ಛತಾ ಸೇವಾ ಕೈಂಕರ್ಯದಲ್ಲಿ ಮಂಗಳಮುಖಿಯರ ಸಾಥ್

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 07: ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮಂಗಳಮುಖಿಯರು ಗಿಡ ನೆಟ್ಟು, ಸ್ವಚ್ಛತಾ ಸ್ವಚ್ಛತಾ ಸೇವಾ ಕೈಂಕರ್ಯದಲ್ಲಿ ಕೈಜೋಡಿಸಿದ್ದಾರೆ.ಹೀಗೆ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಂಡವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಪಂಚವರ್ಣ ಯುವಕ ಮಂಡಲದ ವಾರದ ಸ್ವಚ್ಛತಾ ಕಾರ್ಯಕ್ರಮ ಇದು. 63ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು ಭಿನ್ನವಾಗಿ ಆಯೋಜಿಸಲಾಗಿತ್ತು. ಪ್ರತಿ ಭಾನುವಾರ ಪಂಚವರ್ಣ ಯುವಕ ಮಂಡಲ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿದೆ. ಸ್ಥಳೀಯ ಸಂಘಟನೆಗಳೊಂದಿಗೆ ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಮಾರ್ಗದರ್ಶನದಲ್ಲಿ ನಿನ್ನೆ ಮಂಗಳಮುಖಿಯರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸುವ

ಉಡುಪಿ :ಸ್ವಚ್ಛತಾ ಸೇವಾ ಕೈಂಕರ್ಯದಲ್ಲಿ ಮಂಗಳಮುಖಿಯರ ಸಾಥ್ Read More »

ಕರಾವಳಿ

ಆನ್ ಲೈನ್ ತರಗತಿ ಬಂದ್ ಮಾಡಿ ,ನಾಳೆ ಭಾರತ್ ಬಂದ್ ಗೆ ಬೆಂಬಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 07: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಂಗಳವಾರ ನಡೆಯಲಿರುವ ಭಾರತ್ ಬಂದ್ ಗೆ ರಾಜ್ಯ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟವೂ ಬೆಂಬಲ ನೀಡಿದ್ದು, ಒಂದು ದಿನದ ಮಟ್ಟಿಗೆ ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ರೈತ ಸಂಘಟನೆಗಳಿಗೆ ಬೆಂಬಲ ಕೊಟ್ಟು ನಾವು ಕೂಡ ಬಂದ್ ಮಾಡಲು ನಿರ್ಧರಿಸಿದ್ದು, ಮಂಗಳವಾರ ಒಂದು ದಿನ ಆನ್ ಲೈನ್ ತರಗತಿಗಳು ನಡೆಯುವುದಿಲ್ಲ. ಆದರೆ ಆನ್ ಲೈನ್ ಪರೀಕ್ಷೆಗಳು ನಿಗದಿಯಾಗಿದ್ದರೆ ಅವುಗಳು

ಆನ್ ಲೈನ್ ತರಗತಿ ಬಂದ್ ಮಾಡಿ ,ನಾಳೆ ಭಾರತ್ ಬಂದ್ ಗೆ ಬೆಂಬಲ Read More »

ಕರ್ನಾಟಕ

ಕಡಬ :ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕಾರಿ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 07: ಕರ್ನಾಟಕ ಪ್ರದೇಶ ಕಡಬ ತಾಲೂಕಿನ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕಾರಿ ಸಭೆಯು ಡಿ.6 ರಂದು ಕಡಬ ಜೂನಿಯರ್ ಕಾಲೇಜು ರಸ್ತೆ ಅಡ್ಡಗದ್ದೆಯಲ್ಲಿ ನಡೆಯಿತು. ಸಭೆಯಲ್ಲಿ ಕಡಬ ತಾಲೂಕಿನ 27 ಗ್ರಾಮ ಪಂಚಾಯತ್‍ಗೆ ಜಾತ್ಯತೀತ ಜನತಾದಳ ಪಕ್ಷದ ಆಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ದಿಸುದೆಂದು ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಯ್ಯದ್ ಮೀರಾ ಸಾಹೇಬ್ ವಹಿಸಿ ಮಾತನಾಡಿ ಕಡಬ ತಾಲೂಕಿನ 42 ಗ್ರಾಮಗಳಲ್ಲಿ , ಕಡಬ- ಕೋಡಿಂಬಾಳ ಕೈಬಿಟ್ಟು 40 ಗ್ರಾಮಗಳು ಹಾಗೂ 27 ಗ್ರಾ.ಪಂಗಳಲ್ಲಿ

ಕಡಬ :ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕಾರಿ ಸಮಿತಿ ಸಭೆ Read More »

ಕರಾವಳಿ

ಕರಾವಳಿಯ ‘ಜ್ಯೋತಿ ಟಾಕೀಸ್’ ಇನ್ನು ನೆನಪು ಮಾತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 07: ಸರಿಸುಮಾರು 50 ವರ್ಷಗಳಿಂದ ನಗರದ ಪ್ರಸಿದ್ಧ ಲ್ಯಾಂಡ್ ಮಾರ್ಕ್ ಆಗಿದ್ದ, ಮಂಗಳೂರಿಗರಿಗೆ ಹೆಮ್ಮೆಯ ಗುರುತಾಗಿದ್ದ ‘ಜ್ಯೋತಿ ಟಾಕೀಸ್‘ ಎಂದು ಜನಪ್ರಿಯವಾಗಿರುವ ಜ್ಯೋತಿ ಚಿತ್ರಮಂದಿರ ಇನ್ನು ಬರೀ ನೆನಪಾಗಿ ಉಳಿಯಲಿದೆ. ತುಳು ಚಿತ್ರರಂಗದ ಕಲಾವಿದರ ಹಾಗೂ ತುಳು ಚಿತ್ರ ಪ್ರೇಮಿಗಳ ಕನಸಿನ ಟಾಕೀಸ್ ಆಗಿದ್ದ  ‘ಜ್ಯೋತಿ ಟಾಕೀಸ್ ಗೆ ಕೋವಿಡ್ 19 ಭರ ಸಿಡಿಲಿನಂತೆ ಅಪ್ಪಳಿಸಿದೆ. ಲಾಕ್‌ಡೌನ್ ಪರಿಣಾಮ ಮುಚ್ಚಲ್ಪಟ್ಟಿದ್ದ ಚಿತ್ರಮಂದಿರವಿನ್ನು ಶಾಶ್ವತವಾಗಿ ಮುಚ್ಚಲಿದೆ. ಈ ಚಿತ್ರಮಂದಿರ ಅನೇಕ ಸಿನಿಮಾ ಪ್ರಿಯರಿಗೆ ಅದರಲ್ಲಿಯೂ

ಕರಾವಳಿಯ ‘ಜ್ಯೋತಿ ಟಾಕೀಸ್’ ಇನ್ನು ನೆನಪು ಮಾತ್ರ Read More »

ಕರಾವಳಿ

ವಿಶೇಷ ಪೊಲೀಸ್ ತಂಡದಿಂದ ಐವರು ಉಗ್ರರ ಅರೆಷ್ಟ್

(ನ್ಯೂಸ್ ಕಡಬ) newskadaba.com ದೆಹಲಿ , ಡಿ. 07:ದೆಹಲಿ ಪೊಲೀಸರ ವಿಶೇಷ ತಂಡ ಇಂದು ನಗರದ ಶಕಾರ್ ಪುರ ಪ್ರದೇಶದಲ್ಲಿ ಐವರು ಉಗ್ರರನ್ನು ಬಂಧಿಸಿದೆ. ಬಂಧಿತ ಐವರು ಉಗ್ರರ ಪೈಕಿ ಇಬ್ಬರು ಪಂಜಾಬ್ ಮೂಲದವರು, ಮೂವರು ಕಾಶ್ಮೀರದವರು ಎಂದು ತಿಳಿದುಬಂದಿದೆ. ಬಂಧಿತ ಐವರು ಖಲಿಸ್ತಾನ್ ನ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದ್ದು, ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮಧ್ಯೆ, ಭಯೋತ್ಪಾದಕರ ಬಂಧನದ ಹಿನ್ನೆಲೆಯಲ್ಲಿ ನಗರ ಪೊಲೀಸರು ತೀವ್ರ ನಿಗಾ ವನ್ನು ತೀವ್ರಗೊಳಿಸಿದ್ದಾರೆ. ಇದಕ್ಕೂ ಮುನ್ನ

ವಿಶೇಷ ಪೊಲೀಸ್ ತಂಡದಿಂದ ಐವರು ಉಗ್ರರ ಅರೆಷ್ಟ್ Read More »

ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ :ಎರಡು ಕಾರುಗಳ ನಡುವೆ ಪರಸ್ಪರ ಢಿಕ್ಕಿ ➤ ಪ್ರಯಾಣಿಕರಿಗೆ ಗಾಯ,ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ನಿಡ್ಲೆ, ಡಿ. 07: ನಿಡ್ಲೆ ಕುದ್ರಾಯ ಸೇತುವೆ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರು ಗಾಯಗೊಂಡ ಘಟನೆ ಡಿ.7 ರ ಇಂದು ಮುಂಜಾನೆ ನಡೆದಿದೆ. ಧರ್ಮಸ್ಥಳದ ಪ್ರಯಾಣಿಕರು ಧರ್ಮಸ್ಥಳದಿಂದ ಕೊಕ್ಕಡದ ಕಡೆಗೆ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೆಂಗಳೂರಿನಿಂದ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದ ಸ್ಕೋಡಾ ವಾಹನ ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಎರಡೂ ವಾಹನಗಳಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದೆ. ಕೂಡಲೇ ಅವರನ್ನು ಉಜಿರೆ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ

ಬೆಳ್ತಂಗಡಿ :ಎರಡು ಕಾರುಗಳ ನಡುವೆ ಪರಸ್ಪರ ಢಿಕ್ಕಿ ➤ ಪ್ರಯಾಣಿಕರಿಗೆ ಗಾಯ,ಆಸ್ಪತ್ರೆಗೆ ದಾಖಲು Read More »

ಕರಾವಳಿ

ಹಳೆಯಂಗಡಿ ಬಳಿ ಟೆಂಪೋ ಡಿಕ್ಕಿ ಪ್ರಕರಣ ➤ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಮುಲ್ಕಿ, ಡಿ. 07: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಕೆನರಾ ಬ್ಯಾಂಕ್ ಬಳಿ ಕಳೆದ ದಿನ ಬೆಳಿಗ್ಗೆ ಟೆಂಪೋ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಹಳೆಯಂಗಡಿ ಬಸ್ ನಿಲ್ದಾಣ ಬಳಿಯ ನಿವಾಸಿಗಳಾದ ತಾಯಿ ಸುಖಲತಾ(44) ಅವರ ಮಗ ಚಿರಾಗ್(10) ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಉಡುಪಿ ಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟೆಂಪೋ ಹಳೆಯಂಗಡಿ ಸಮೀಪಿಸುತ್ತಿದಂತೆಯೇ ಚಾಲಕನ ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗುತ್ತಿದ್ದ ತಾಯಿ ಮತ್ತು ಮಗನಿಗೆ ಡಿಕ್ಕಿ ಹೊಡೆದು ಬಳಿಕ

ಹಳೆಯಂಗಡಿ ಬಳಿ ಟೆಂಪೋ ಡಿಕ್ಕಿ ಪ್ರಕರಣ ➤ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮಹಿಳೆ ಮೃತ್ಯು Read More »

ಕರಾವಳಿ
Scroll to Top