Kadaba News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ►ಗ್ರಾಮಾಭಿವೃದ್ಧಿ ಯೋಜನೆ ಸ್ವಾವಲಂಬಿ ಬದುಕಿಗೆ ಪ್ರೇರಣೆ – ಬಾಲಕೃಷ್ಣ ಬಳ್ಳೇರಿ

(ನ್ಯೂಸ್ ಕಡಬ) newskadaba.com.ಕಡಬ,ಜ.09. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಜನರನ್ನು ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿ ಆರ್ಥಿಕ ಭದ್ರತೆಯನ್ನು ನೀಡುತ್ತಿದೆ, ಇದು ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ ಹೇಳಿದರು.ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕಡಬ ಗ್ರಾಮದ ಎ ಮತ್ತು ಬಿ ಒಕ್ಕೂಟದ ನೂತನ ಪದಾಧಿಕಾರಿಗಳ […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ►ಗ್ರಾಮಾಭಿವೃದ್ಧಿ ಯೋಜನೆ ಸ್ವಾವಲಂಬಿ ಬದುಕಿಗೆ ಪ್ರೇರಣೆ – ಬಾಲಕೃಷ್ಣ ಬಳ್ಳೇರಿ Read More »

ಕರಾವಳಿ

ಕೊೈಲ :ಸೌಹಾರ್ದ ವೇದಿಕೆ ಪೂರ್ವ ಅಧ್ಯಕ್ಷ ಹೈದರ್ ಕೊೈಲ ನಿಧನ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,  ಜ.09. ಉಪ್ಪಿನಂಗಡಿ: ಕೊೈಲ ನಿವಾಸಿ, ದಿವಂಗತ ಇಬ್ರಾಹಿಂ ಎಂಬವರ ಪುತ್ರ, ಹೈದರ್ ಕೊೈಲ (37 ವ.) ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಜ. 8ರಂದು ತನ್ನ ಮನೆಯಲ್ಲಿ ನಿಧನ ಹೊಂದಿದರು. ಕೊೈಲದಲ್ಲಿ ಅಟೋ ಚಾಲಕರಾಗಿದ್ದ ಹೈದರ್ ಕೊೈಲ ಸೌಹಾರ್ದ ವೇದಿಕೆ ಕೊೈಲ ಇದರ ಅಧ್ಯಕ್ಷರಾಗಿ, ನೂರುಲ್ ಹುದಾ ಮದ್ರಸ ನೀರಾಜೆ ಹಾಗೂ ಯಂಗ್‍ಮೆನ್ಸ್ ಸಂಸ್ಥೆಯಲ್ಲಿ ಸಕ್ರೀಯರಾಗಿ ತನ್ನ ಸಾಮಾಜಿಕ ಕಳಕಳಿಯ ಸೇವೆಯಿಂದ ಸಕ್ರೀಯರಾಗಿ ಚಿರಪರಿಚಿತರಾಗಿದ್ದರು.ಮೃತರು ಪತ್ನಿ ಬುಶ್ರಾ, ಪುತ್ರಿಯರಾದ ಅಫೀಝ, ಅಫ್ರೀನ್‍ರನ್ನು

ಕೊೈಲ :ಸೌಹಾರ್ದ ವೇದಿಕೆ ಪೂರ್ವ ಅಧ್ಯಕ್ಷ ಹೈದರ್ ಕೊೈಲ ನಿಧನ Read More »

ಕರಾವಳಿ

ಉಪ್ಪಿನಂಗಡಿ: ಬಡ ಯುವಕನಿಗೆ ದಾನಿಗಳ ನೆರವು ಬೇಕಾಗಿದೆ

(ನ್ಯೂಸ್ ಕಡಬ) newskadaba.comಉಪ್ಪಿನಂಗಡಿ,  ಜ.09. ಉಪ್ಪಿನಂಗಡಿ: ಕೂಲಿ ಕೆಲಸದ ಮಾಡಿಕೊಂಡು ಮನೆಗೆ ಆಧಾರ ಸ್ತಂಭವಾಗಿದ್ದ ಯುವಕನೀಗ ತನ್ನೆರಡೂ ಕಿಡ್ನಿ ವೈಫಲ್ಯಗೊಂಡಿದ್ದರಿಂದ ದುಡಿಯಲಾರದ ಸ್ಥಿತಿ ತಲುಪಿದ್ದಾನೆ. ತನ್ನ ಕಿಡ್ನಿ ನೀಡಿ ಮಗನಿಗೆ ಬದುಕು ನೀಡಲು ಮುಂದಾದ ತಾಯಿಯೀಗ ಅದಕ್ಕೆ ತಗಲುವ ವೈದ್ಯಕೀಯ ವೆಚ್ಚ ಭರಿಸಲಾಗದೆ ಕಂಗಾಲಾಗಿದ್ದು, ದಾನಿಗಳಲ್ಲಿ ಮಗನ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯ ಯಾಚಿಸಿದ್ದಾರೆ. ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಹರಿನಗರ ನಿವಾಸಿ ಜಯಂತಿ ಅವರ ಕುಟುಂಬದ ಕರುಣಾಜನಕ ಕಥೆ. ಕೂಲಿ ಮಾಡಿ ಜೀವಿಸುವ ತೀರಾ ಬಡಕುಟುಂಬದ ಜಯಂತಿ

ಉಪ್ಪಿನಂಗಡಿ: ಬಡ ಯುವಕನಿಗೆ ದಾನಿಗಳ ನೆರವು ಬೇಕಾಗಿದೆ Read More »

ಕರಾವಳಿ

ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳ ಕಳ್ಳತನ► ಸಾರ್ವಜನಿಕರ ಸಹಾಯದಿಂದ ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.comಪುತ್ತೂರು, ಜ.7.ಆರ್ಲಪದವಿನಲ್ಲಿ ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳನ್ನು ಕಳವುಗೈದವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಉಪ್ಪಿನಂಗಡಿ ಬೇಜಾರು ನಿವಾಸಿ ರಿಯಾಝ್, ನೆಕ್ಕಿಲಾಡಿಯ ಸಿರಾಜು ದ್ದೀನ್‌, ಬಂಧಿತರು.   ಆರ್ಲಪದವಿನಲ್ಲಿ ಮನೆಗೆ ಹೊಂದಿಕೊಂಡಿರುವ ಅಶ್ರಫ್‌  ಅವರ ಗೂಡಂಗಡಿಯಿಂದ 5 ಸಾವಿರ ಹಾಗೂ ಮೊಬೈಲ್‌ ಫೋನ್‌  ಅನ್ನು ಇವರು ಕಳವು ಮಾಡಿದ್ದರು. ಕಳ್ಳತನ ಅರಿವಿಗೆ ಬಂದ ತತ್‌ಕ್ಷಣ ಅಶ್ರಫ್‌ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರ ಸಹಕಾರದಿಂದ ಆರ್ಲಪದವು ಚೆಕ್‌ ಪೋಸ್ಟ್‌ ಬಳಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬಂಧಿತರಿಂದ ಕಳವುಗೈದ

ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳ ಕಳ್ಳತನ► ಸಾರ್ವಜನಿಕರ ಸಹಾಯದಿಂದ ಆರೋಪಿಗಳ ಬಂಧನ Read More »

ಕರಾವಳಿ

ಮೋಟಾರ್ ವಾಹನ ತಿದ್ದುಪಡಿ ಮಸೂದೆ-2017ನ್ನು ಹಿಂಪಡೆಯುವಂತೆ ಅಗ್ರಹ ► ಜ. 8 ಮತ್ತು 9 ರಂದು ರಾಷ್ಟ್ರವ್ಯಾಪಿ ಬಂದ್ ಗೆ ಕರೆ 

(ನ್ಯೂಸ್ ಕಡಬ)newskadaba.com.ಬೆಂಗಳೂರು,ಜ.6.ಮೋಟಾರ್ ವಾಹನ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿವೆ. ಇದು ಚಾಲಕರ ವಿರೋಧಿ ಮಸೂದೆ ಅಂತಾ ಸಾರಿಗೆ ಇಲಾಖೆ ಕಾರ್ಮಿಕರು ಕಿಡಿಕಾರಿದ್ದು ಈ ಹಿನ್ನಲೆಯಲ್ಲಿ ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳವಾರ ಹಾಗೂ ಬುಧವಾರ ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್‍ಗೆ ಕರೆಕೊಟ್ಟಿದೆ.  ಮೋಟಾರ್ ವಾಹನ ತಿದ್ದುಪಡಿ ಮಸೂದೆ-2017ನ್ನು ವಾಪಸ್​ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿವೆ.

ಮೋಟಾರ್ ವಾಹನ ತಿದ್ದುಪಡಿ ಮಸೂದೆ-2017ನ್ನು ಹಿಂಪಡೆಯುವಂತೆ ಅಗ್ರಹ ► ಜ. 8 ಮತ್ತು 9 ರಂದು ರಾಷ್ಟ್ರವ್ಯಾಪಿ ಬಂದ್ ಗೆ ಕರೆ  Read More »

ಕರಾವಳಿ

ಕಡಬ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮತ್ತು ಬುಲ್ ಬುಲ್ಸ್ ವಾರ್ಷಿಕ ಮೇಳ 2019

(ನ್ಯೂಸ್ ಕಡಬ)newskadaba.com.ಕಡಬ,ಜ.6. ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಉಪ್ಪಿನಂಗಡಿ ಮತ್ತು ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್ಸ್ ಮತ್ತು ಬುಲ್ ಬುಲ್ ಬುಲ್  ವಾರ್ಷಿಕ ಮೇಳ 2019 ಉದ್ಘಾಟನಾ ಸಮಾರಂಭ ಜ.4ರಂದು ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮಕ್ಕೆಶುಭಹಾರೈಸಿದರು.ಉಪ್ಪಿನಂಗಡಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಅಬ್ರಾಹಂ ವರ್ಗೀಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.   ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕುಕ್ಕೆ ಶ್ರೀ ಸುಬ್ರಹ್ಮಣ್ಯ

ಕಡಬ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮತ್ತು ಬುಲ್ ಬುಲ್ಸ್ ವಾರ್ಷಿಕ ಮೇಳ 2019 Read More »

ಕರಾವಳಿ

ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ

(ನ್ಯೂಸ್ ಕಡಬ)newskadaba.com.ಮಂಗಳೂರು,ಜ.4.ಗೃಹರಕ್ಷಕರ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ 2018 ಇದರ ಉದ್ಘಾಟನಾ ಸಮಾರಂಭ ದಿನಾಂಕ:04.01.2019, ಶುಕ್ರವಾರದಂದು ಪೊಲೀಸ್ ಪೇರೇಡ್ ಮೈದಾನದಲ್ಲಿ ನಡೆಯಿತು. ತುಕಡಿ ನಾಯಕರಾದ ಶ್ರೀ ವಸಂತ್ ಕುಮಾರ್ ಇವರ ನೇತೃತ್ವದಲ್ಲಿ ಅತಿಥಿಗಳಿಗೆ ಗೌರವ ವಂದನೆಯನ್ನು ನೀಡಲಾಯಿತು. ಕ್ರೀಡಾ ಜ್ಯೋತಿಯ ಆಗಮನವನ್ನು ಶ್ರೀ ಚೇತನ್, ಮೆಟಲ್ ಸಂಖ್ಯೆ 5, ಮಂಗಳೂರು ಘಟಕ ಇವರು ನಿರ್ವಹಿಸಿದರು. ಉಪ ಸಮಾದೇಷ್ಟರಾದ ಶ್ರೀ ರಮೇಶ್ ಇವರು ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಟಿ.ಎನ್.ಶಿವಶಂಕರ, ಮುಖ್ಯ ಅಗ್ನಿಶಾಮಕಾಧಿಕಾರಿ, ಮಂಗಳೂರು ಪ್ರಾಂತ್ಯ

ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ Read More »

ಕರಾವಳಿ

29 ವರ್ಷಗಳ ಬಳಿಕ ಕೂರ ಅಂಗನವಾಡಿ ಕೇಂದ್ರಕ್ಕೆ ಸಿಗಲಿದೆ ಆರ್.ಟಿ.ಸಿ.

(ನ್ಯೂಸ್ ಕಡಬ) newskadaba.com.ಕಡಬ,ಜ. 4. 1989ರಲ್ಲಿ ಸ್ಥಾಪನೆಗೊಂಡ ಕುದ್ಮಾರು ಗ್ರಾಮದ ಕೂರ ಅಂಗವವಾಡಿ ಕೇಂದ್ರಕ್ಕೆ 29 ವರ್ಷಗಳ ಬಳಿಕ ಆರ್‍ಟಿಸಿ ದೊರೆಯಲಿದೆ. ಆರ್‍ಟಿಸಿ ರಚನೆ ಕುರಿತಂತೆ ಪೂರಕ ಪ್ರಕ್ರಿಯೆಗಳಿಗೆ ಇದೀಗ ವೇಗ ದೊರೆತಿದೆ. ಅಂಗನವಾಡಿ ಕಾರ್ಯಕರ್ತೆ ಕಳೆದ 25 ವರ್ಷಗಳಿಂದ ಗ್ರಾಮಸಭೆ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಆರ್‍ಟಿಸಿ ಮಾಡಿಕೊಡುವಂತೆ ಮನವಿ ನೀಡುತ್ತಾ ಬಂದಿದ್ದು, ಇದೀಗ ಮನವಿಗೆ ಸ್ಪಂದನೆ ಸಿಕ್ಕಿದೆ. ಅಂಗನವಾಡಿ ಕೇಂದ್ರದ ಜಾಗವು ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದೆ ಎಂಬ ಗುಮಾನಿಯಿಂದಾಗಿ ಇದುವರೆಗೆ ಕೂರ ಅಂಗನವಾಡಿ ಕೇಂದ್ರಕ್ಕೆ ಆರ್‍ಟಿಸಿ ನೀಡುವಲ್ಲಿ ತೊಡಕಾಗಿ

29 ವರ್ಷಗಳ ಬಳಿಕ ಕೂರ ಅಂಗನವಾಡಿ ಕೇಂದ್ರಕ್ಕೆ ಸಿಗಲಿದೆ ಆರ್.ಟಿ.ಸಿ. Read More »

ಕರಾವಳಿ

ಅಬ್ಬಕ್ಕ ಉತ್ಸವ – ಪೂರ್ವಭಾವಿ ಸಭೆ ► ಅಬ್ಬಕ್ಕ ಉತ್ಸವದ ವಿಶೇಷ ಆಕರ್ಷಣೆಯಾಗಿ ಬೀಚ್ ಉತ್ಸವ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.2.ವೀರ ರಾಣಿ ಅಬ್ಬಕ್ಕ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಈಗಾಗಲೇ ಒಂದು ಸುತ್ತಿನ ಸಭೆಯನ್ನು ನಡೆಸಿದ್ದು, ಎಲ್ಲರ ಸಲಹೆಗಳನ್ನು ಪರಿಗಣಿಸಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಸೂಚನೆ ನೀಡಿದರು.  ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅಬ್ಬಕ್ಕ ಉತ್ಸವ ಕುರಿತಾದ ಸಭೆಯಲ್ಲಿ ಎಲ್ಲರೂ ಜತೆಯಾಗಿ ಸೇರಿ ವೀರರಾಣಿ ಅಬ್ಬಕ್ಕ ಉತ್ಸವ ಮಾಡೋಣ ಎಂದು ಸಚಿವರು ಅಭಿಪ್ರಾಯಪಟ್ಟರು.  ಈ ಬಾರಿಯ ಅಬ್ಬಕ್ಕ ಉತ್ಸವವನ್ನು ಫೆ.೨-೩ರಂದು ಉಳ್ಳಾಲದಲ್ಲಿ

ಅಬ್ಬಕ್ಕ ಉತ್ಸವ – ಪೂರ್ವಭಾವಿ ಸಭೆ ► ಅಬ್ಬಕ್ಕ ಉತ್ಸವದ ವಿಶೇಷ ಆಕರ್ಷಣೆಯಾಗಿ ಬೀಚ್ ಉತ್ಸವ Read More »

ಕರಾವಳಿ

ಉಪ್ಪಿನಂಗಡಿ: ವರ್ಷದ ಹಿಂದೆ ಪ್ರೇಮಿಸಿ ವಿವಾಹವಾಗಿದ್ದ ತರುಣಿ ವಿಷಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ, ಜ.1. ವರ್ಷದ ಹಿಂದೆಯಷ್ಟೇ ಪ್ರೇಮ ವಿವಾಹವಾಗಿದ್ದ ಯುವತಿ ವಿಷ ಸೇವಿಸಿ ಸಾವನ್ನಪ್ಪಿದ್ದ ಘಟನೆ ಜ.1 ರಂದು ಮಂಗಳವಾರ ಉಪ್ಪಿನಂಗಡಿಯ ಹಿರೇಬಂಡಾಡಿಯಲ್ಲಿ ನಡೆದಿದೆ. ತವರು ಮನೆಯಲ್ಲಿದ್ದ ದಿವ್ಯಾ ಪೂಜಾರಿ ಉಪ್ಪಿನಂಗಡಿಯ ಹಿರೇಬಂಡಾಡಿಯಲ್ಲಿರುವ ಗಂಡನ ಮನೆಗೆ ಡಿ.31 ರಂದು ತೆರಳಿದ್ದರು. ಆದರೆ ಜ.1 ರಂದು ಮುಂಜಾನೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿದ್ದಾರೆ. ಸುಮಾರು 10 ಗಂಟೆ ವೇಳೆಗೆ ತಾವು ವಿಷ ಸೇವನೆ ಮಾಡಿರುವುದಾಗಿ ಗಂಡನ ಮನೆಯವರಿಗೆ ತಿಳಿಸಿದ್ದು ತಕ್ಷಣ ಮನೆ ಮಂದಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಪ್ಪಿನಂಗಡಿ: ವರ್ಷದ ಹಿಂದೆ ಪ್ರೇಮಿಸಿ ವಿವಾಹವಾಗಿದ್ದ ತರುಣಿ ವಿಷಸೇವಿಸಿ ಆತ್ಮಹತ್ಯೆ Read More »

ಕರಾವಳಿ
Scroll to Top